ನವದೆಹಲಿ: ಮಾಜಿ ರಕ್ಷಣಾ ಸಚಿವ ಮತ್ತು ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಬದ್ಧತೆ ಮತ್ತು ಪರಂಪರೆಯನ್ನು ಗೌರವಿಸುವ ಸಲುವಾಗಿ ಕೇಂದ್ರ ಸರ್ಕಾರವು ಸರ್ಕಾರಿ ಥಿಂಕ್ ಟ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಆ್ಯಂಡ್ ಅನಾಲಿಸಿಸ್ (ಐಡಿಎಸ್ಎ)ಗೆ ಮನೋಹರ್ ಪರಿಕ್ಕರ್ ಅವರ ಹೆಸರನ್ನು ಮರುನಾಮಕರಣ ಮಾಡಿದೆ.
ಇದೀಗ ಈ ಸಂಸ್ಥೆಯ ಹೆಸರು ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಆ್ಯಂಡ್ ಅನಾಲಿಸಿಸ್ ಎಂದು ಬದಲಾಗಿದೆ.
2014 ರ ನವೆಂಬರ್ 9 ರಿಂದ 2017 ರ ಮಾರ್ಚ್ 14 ರವರೆಗೆ ರಕ್ಷಣಾ ಸಚಿವರಾಗಿದ್ದ ಪರಿಕ್ಕರ್, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿಂದಾಗಿ ಕಳೆದ ವರ್ಷ ಮಾರ್ಚ್ 17 ರಂದು ಗೋವಾದ ಪಣಜಿಯಲ್ಲಿ ನಿಧನರಾದರು.
ಅವರು ರಕ್ಷಣಾ ಸಚಿವರಾಗಿದ್ದ ವೇಳೆ ಪಠಾಣ್ಕೋಟ್ ಮತ್ತು ಉರಿಯಂತಹ ಭಯೋತ್ಪಾದಕ ದಾಳಿಯ ಕಠಿಣ ಸವಾಲುಗಳು ಎದುರಾಗಿತ್ತು. ಈ ದಾಳಿಗೆ ಅವರು ದಿಟ್ಟ ಸ್ಪಂದನೆಯನ್ನು ನೀಡಿದ್ದರು” ಎಂದು ಸರ್ಕಾರ ಮಂಗಳವಾರ ಹೇಳಿಕೆ ತಿಳಿಸಿದೆ.
“ಸಾರ್ವಜನಿಕ ಜೀವನದಲ್ಲಿ ಸಮಗ್ರತೆ ಮತ್ತು ಸಮರ್ಪಣೆಯ ಸಂಕೇತವಾಗಿದ್ದ ಅವರು ವೃತ್ತಿಜೀವನದುದ್ದಕ್ಕೂ ಪ್ರಚಂಡ ಹೋರಾಟದ ಮನೋಭಾವವನ್ನು ತೋರಿಸಿದರು, ನಿರ್ಭಯತೆಯಿಂದ ವಿಲಕ್ಷಣಗಳನ್ನು ಎದುರಿಸಿದರು” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
”ಪರಿಕ್ಕರ್ ಅವರು ರಕ್ಷಣಾ ಮಂತ್ರಿಯಾಗಿದ್ದಾಗ, ಭಾರತವು ತನ್ನ ಭದ್ರತಾ ಸಾಮರ್ಥ್ಯವನ್ನು ಹೆಚ್ಚಿಸಿತು, ದೇಶೀಯ ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸಿತು ಮತ್ತು ಮಾಜಿ ಸೈನಿಕರ ಜೀವನವನ್ನು ಉತ್ತಮಗೊಳಿಸಿತು, ಹಲವು ನಿರ್ಧಾರಗಳ ಸರಣಿಗೆ ಸಾಕ್ಷಿಯಾಯಿತು” ಎಂದು ಹೇಳಿದೆ.
ಸಶಸ್ತ್ರ ಪಡೆಗಳಿಗೆ ದೀರ್ಘಕಾಲದ ಒನ್ ರ್ಯಾಂಕ್ ಒನ್ ಪೆನ್ಶನ್ ಬೇಡಿಕೆಯ ಅನುಷ್ಠಾನವು ಅವರ ಅತಿದೊಡ್ಡ ಕೊಡುಗೆಯಾಗಿದೆ ಎಂದು ಹೇಳಿಕೆ ತಿಳಿಸಿದೆ.
”ಐಡಿಎಸ್ಎಗೆ ಮರು ನಾಮಕರಣ ಮಾಡುವುದರಿಂದ, ಮಾಜಿ ರಕ್ಷಣಾ ಮಂತ್ರಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರ ಪರಿಕ್ಕರ್ ಅವರ ಕೊಡುಗೆಯೊಂದಿಗೆ ಪ್ರಧಾನ ರಕ್ಷಣಾ ಸಂಸ್ಥೆಯ ದೃಷ್ಟಿ ಮತ್ತು ಆಕಾಂಕ್ಷೆ ಸಂಯೋಜಿತವಾಗಲಿದೆ” ಎಂದು ಹೇಳಿಕೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.