ಅಯೋಧ್ಯಾ: ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಥಮ ಬಾರಿಗೆ ಅಯೋಧ್ಯೆಯಲ್ಲಿ ಒಂದು ವಿಶಿಷ್ಟವಾದ ದಾಖಲೆ ನಿರ್ಮಿಸುವಂತಹ ಕಾರ್ಯಕ್ರಮವನ್ನು ಆಯೋಜನೆಗೊಳಿಸಿತ್ತು. ಸರಯು ನದಿಯ ದಡದಲ್ಲಿ ಸುಮಾರು 101 ಶಾಖೆಗಳನ್ನು ಒಂದೇ ಸಮಯದಲ್ಲಿ ನಡೆಸಲಾಯಿತು. ಅಯೋಧ್ಯೆಯಲ್ಲಿ ನಡೆದ ಈ ಮೆಗಾ ಕಾರ್ಯಕ್ರಮದಲ್ಲಿ ಸಾವಿರಾರು ಆರ್ಎಸ್ಎಸ್ ಸ್ವಯಂಸೇವಕರು ಭಾಗವಹಿಸಿದ್ದರು.
ರಾಷ್ಟ್ರ ನಿರ್ಮಾಣದಲ್ಲಿ ಶಾಖೆಗಳ ಮಹತ್ವವನ್ನು ಪ್ರದರ್ಶಿಸಲು 101 ಶಾಖಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಒಂದು ಗಂಟೆಗಳ ಕಾಲ ಶಾಖೆಗಳನ್ನು ನಡೆಸಲಾಯಿತು, ಇಲ್ಲಿ ಸ್ವಯಂಸೇವಕರು ಸಾಂಪ್ರದಾಯಿಕ ಆಟಗಳನ್ನು ಆಡಿದರು, ಯೋಗ ಮತ್ತು ವ್ಯಾಯಾಮಗಳನ್ನು ಮಾಡಿದರು ಮತ್ತು ಬೌದ್ಧಿಕ ಚರ್ಚೆಗಳಲ್ಲಿ ಭಾಗವಹಿಸಿದರು. ಆರ್ಎಸ್ಎಸ್ ಶಾಖೆಯಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಲು ಜನರು ಸಾಕ್ಷಿಯಾಗಿದ್ದರು ಮತ್ತು ಅನೇಕರು ಈ ಕಾರ್ಯಕ್ರಮದ ನಂತರ ಸ್ವಯಂ ಸೇವಕರೊಂದಿಗೆ ಸಂವಹನ ನಡೆಸಲು ಅವಕಾಶವನ್ನು ಪಡೆದರು.
ಶಾಖಾ ಮಹಾಕುಂಭದ ಭಾಗವಾಗಿದ್ದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಆರ್ಎಸ್ಎಸ್ನ ಪೂರ್ವ ಯುಪಿ ಪ್ರದೇಶದ ಭೌದಿಕ್ ಪ್ರಮುಖ್ ಮಿಥಿಲೇಶ್ ನಾರಾಯಣ್ ಅವರು, “ಸಂಘದ ಸ್ವಯಂಸೇವಕರು ಸಾಮಾನ್ಯ ಗುರಿಯೊಂದಿಗೆ ಕೆಲಸ ಮಾಡುತ್ತಾರೆ, ಪ್ರತಿದಿನ ಶಾಖೆಗೆ ಹಾಜರಾಗುವುದು ಮತ್ತು ಅದರ ಕಾರ್ಯಗಳಿಂದ ಪ್ರೇರಣೆ ಪಡೆದು ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವುದು ಅವರ ಸಾಮಾನ್ಯ ಗುರಿಯಾಗಿದೆ. ಭಾರತಮಾತೆಗಾಗಿ ಲಕ್ಷಾಂತರ ಸ್ವಯಂಸೇವಕರ ಸೇವೆ ಮತ್ತು ತ್ಯಾಗವನ್ನು ಮಾಡುತ್ತಿರುವುದರಿಂದ ಇಂದು ನಾವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೋಡಲು ಸಾಧ್ಯವಾಗುತ್ತಿದೆ. ಬೇರೆ ಯಾವುದಕ್ಕೋ ಪ್ರತಿಕ್ರಿಯೆಯಾಗಿ ಸಂಘವು ಕೆಲಸ ಮಾಡುವುದಿಲ್ಲ, ಆರ್ಎಸ್ಎಸ್ ಕಾರ್ಯವು ಯಾವಾಗಲೂ ಸಮಾಜ ಮತ್ತು ರಾಷ್ಟ್ರದ ಸುಧಾರಣೆಯತ್ತ ಇರುತ್ತದೆ” ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಐ ಬ್ಯಾನರ್ಜಿ ಅವರು, ”ಆರ್ಎಸ್ಎಸ್ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇಂತಹ ಮೆಗಾ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ, ಶಾಖಾ ಮಹಾಕುಂಭವು ಆರ್ಎಸ್ಎಸ್ನ ಶಕ್ತಿ ಮತ್ತು ದೃಢ ನಿಶ್ಚಯವನ್ನು ಸಮಾಜಕ್ಕೆ ಪ್ರದರ್ಶಿಸಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.