ವಾರಣಾಸಿ: ಮಗಳ ವಿವಾಹ ಸಮಾರಂಭಕ್ಕೆ ತನ್ನನ್ನು ಆಹ್ವಾನಿಸಿದ್ದ ವಾರಣಾಸಿಯ ಸೈಕಲ್ ರಿಕ್ಷಾ ಚಾಲಕನನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 16 ರಂದು ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭೇಟಿಯಾಗಿದ್ದಾರೆ.
ಸೈಕಲ್ ರಿಕ್ಷಾ ಚಾಲಕ ಮಂಗಳ್ ಕೆವಾತ್ ಅವರು ಪ್ರಧಾನಿಗೆ ತನ್ನ ಮಗಳ ಆಹ್ವಾನ ಪತ್ರಿಕೆಯನ್ನು ರವಾನಿಸಿದ್ದರು. ಇವರು ಮೋದಿ ಅಪ್ಪಟ ಅಭಿಮಾನಿಯಾಗಿದ್ದು, ಮೋದಿಯಿಂದ ಸ್ಪೂರ್ತಿಗೊಂಡು ತನ್ನ ಗ್ರಾಮದಲ್ಲಿನ ಗಂಗಾ ನದಿ ತಟವನ್ನು ಸ್ವಚ್ಛಗೊಳಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.
ಪ್ರಧಾನಮಂತ್ರಿ ಅವರು ಮಂಗಳ್ ಕೆವಾತ್ ಮತ್ತು ಅವರ ಕುಟುಂಬದ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೇ, ಸ್ವಚ್ಛ ಭಾರತ ಅಭಿಯಾನಕ್ಕೆ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿಕೊಟ್ಟಿದ್ದಕ್ಕೆ ಮಂಗಳ್ ಅವರಿಗೆ ಮೋದಿ ಅಭಿನಂದನಾ ಪತ್ರವನ್ನೂ ಬರೆದಿದ್ದರು.
”ನಾವು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮೊದಲ ಆಹ್ವಾನವನ್ನು ಕಳುಹಿಸಿದ್ದೆವು, ನಾನು ಅದನ್ನು ವೈಯಕ್ತಿಕವಾಗಿ ದೆಹಲಿಯ ಪಿಎಂಒ ಕಛೇರಿಗೆ ಹಸ್ತಾಂತರಿಸಿದ್ದೆ. ಫೆಬ್ರವರಿ 8 ರಂದು ಪ್ರಧಾನಿ ಮೋದಿಯವರ ಅಭಿನಂದನಾ ಪತ್ರವನ್ನು ನಾವು ಸ್ವೀಕರಿಸಿದ್ದೇವೆ, ಇದು ನಮ್ಮನ್ನು ರೋಮಾಂಚನಗೊಳಿಸಿತ್ತು” ಎಂದು ಮಂಗಳ್ ಕೆವಾತ್ ಶನಿವಾರ ಹೇಳಿದ್ದರು.
ಸಾಮಾನ್ಯ ವ್ಯಕ್ತಿಗೂ ಗೌರವಾದಾರಗಳನ್ನು ತೋರುವ ಪ್ರಧಾನಿ ಮೋದಿಯವರ ವ್ಯಕ್ತಿತ್ವ ಎಲ್ಲರನ್ನೂ ಪ್ರೇರೇಪಿತಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.