ಕೋಲ್ಕಾತಾ: ಪ್ರಧಾನಿ ನರೇಂದ್ರ ಮೋದಿಯವರ ಕೋರಿಕೆಯಂತೆ ಯುವಕರಲ್ಲಿ ದೇಶ ಕಟ್ಟುವ ಸಕ್ರಿಯ ಪಾತ್ರವನ್ನು ರೂಪಿಸಲು ಸ್ವಾಮಿ ವಿವೇಕಾನಂದರ ಅನುಯಾಯಿಗಳು ಹಾಗೂ ರಾಂಭಾವು ಮಾಳಗಿ ಪ್ರಬೋಧಿನಿ(ಆರ್ಎಂಪಿ) ತನ್ನ ಪ್ರಭಾವವನ್ನು ದೇಶದೆಲ್ಲೆಡೆ ಬೀರಲು ನಿರ್ಧರಿಸಿದೆ. ಇದಕ್ಕಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ 1000 ಯುವಕರಿಗೆ ತರಬೇತಿ ನೀಡಿಲಾಗುತ್ತಿದೆ.
ಸ್ವಾಮಿ ವಿವೇಕಾನಂದರು ಭಾರತದಾದ್ಯಂತ ಸಂಚರಿಸಿ ವಿವಿಧ ಸಾಮಾಜಿಕ ವಿಷಯಗಳನ್ನು, ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಅರಿತುಕೊಂಡರು. ಭಾರತದ ಯುವಕರಲ್ಲಿ ನಂಬಿಕೆ ಇಟ್ಟಿದ್ದ ಸ್ವಾಮಿ ವಿವೇಕಾನಂದರು ದೇಶವು ಕಳೆದುಕೊಂಡ ವೈಭವವನ್ನು ಪಡೆಯುವ ಶಕ್ತಿ ನಮ್ಮ ಯುವಕರಲ್ಲಿದೆ. ಆದರೆ ಅವರಲ್ಲಿ ಧೈರ್ಯ ಹಾಗೂ ಸೂಕ್ಮತೆಯ ಜಾಗೃತಿ ಮೂಡಿಸಬೇಕಿದೆ ಎಂದಿದ್ದರು.
ಅದರಂತೆ ರಾಂಭಾವು ಮಾಳಗಿ ಪ್ರಬೋಧಿನಿ ಸಂಸ್ಥೆಯು 2019ರ ಒಳಗೆ ದೇಶದೆಲ್ಲೆಡೆ ನೇತೃತ್ವ ಸಾಧನಾ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, 1000 ಯುವಕರಿಗೆ ತರಬೇತಿ ನೀಡಲಿದೆ. ನೇತೃತ್ವ ಸಾಧನಾ ಮಿಷನ್ ಅನ್ನು ಯುವ ಮತ್ತು ಕ್ರೀಡಾ ಸಚಿವ ಸಬರ್ದಾನಂದ ಸೊನೊವಾಲ್ ಈಗಾಗಲೇ ಬಿಡುಗಡೆಗೊಳಿಸಿದ್ದು, ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವ ಗುರಿ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.