ನವದೆಹಲಿ: ದೆಹಲಿಯ ಶಹೀನ್ ಭಾಗ್ ನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಚಟುವಟಿಕೆಗಳು ಸಮಾಜದಲ್ಲಿ ಅಶಾಂತಿ ಮತ್ತು ಹಾನಿಯನ್ನು ಉಂಟು ಮಾಡುತ್ತಿರುವ ಸಂದರ್ಭದಲ್ಲೇ ಸುಪ್ರೀಂಕೋರ್ಟ್ ಸೋಮವಾರ ತನ್ನ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ.
ಶಹೀನ್ ಭಾಗ್ನಲ್ಲಿ ಡಿಸೆಂಬರ್ 15 ರಿಂದ ರೋಡ್ ಬಂದ್ ಮಾಡಿ ನಡೆಯುತ್ತಿರುವ ಸಿಎಎ ಪ್ರತಿಭಟನೆಯ ವಿರುದ್ಧ ವಕೀಲ ಅಮಿತ್ ಶಾಹ್ನಿ ಅವರು ಸುಪ್ರೀಂಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿದ್ದರು. ಈ ರೀತಿ ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬುದು ಅವರ ವಾದವಾಗಿತ್ತು.
ಇವರ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್, ”ನಿಮಗೆ ಸಂವಿಧಾನದಲ್ಲಿ ಪ್ರತಿಭಟಿಸುವ ಹಕ್ಕು ಇದೆ. ಆದರೆ ರೋಡ್ ಬಂದ್ ಮಾಡಿಸಿ ಪ್ರತಿಭಟಿಸುವುದಕ್ಕೆ ಅವಕಾಶವಿಲ್ಲ. ಇಂದು ನೀವು ಈ ರೀತಿ ರೋಡ್ ಬಂದ್ ಮಾಡಿ ಪ್ರತಿಭಟಿಸಿದರೆ ನಾಳೆ ಇತರರಿಗೂ ಈ ರೀತಿ ಪ್ರತಿಭಟಿಸಲು ಪ್ರೇರಣೆ ಸಿಗುತ್ತದೆ” ಎಂದು ಶಹೀನ್ ಭಾಗ್ ಪ್ರತಿಭಟನಾಕಾರರಿಗೆ ಹೇಳಿದೆ.
ನಮ್ಮಲ್ಲಿ 5000 ಸಾವಿರ ಕಡೆಗಳಲ್ಲಿ ಶಹೀನ್ ಇದೆ ಎಂದು ಹೇಳಿರುವ ಪ್ರತಿಭಟನಾಕಾರರಿಗೆ ಉತ್ತರಿಸಿರುವ ಸುಪ್ರೀಂಕೋರ್ಟ್, “ನಿಮ್ಮ 5000 ಕಡೆಗಳಲ್ಲಿನ ಪ್ರತಿಭಟನೆಯಿಂದ ನಮಗೆ ಯಾವುದೇ ತೊಂದರೆಗಳಿಲ್ಲ ಆದರೆ ನಾವು ಹೇಳುತ್ತಿರುವುದು ರೋಡ್ ಬಂದ್ ಮಾಡಿ ಪ್ರತಿಭಟಿಸುವುದು ಸರಿಯಾದ ಲಕ್ಷಣವಲ್ಲ ಎಂದು,ಇದರಿಂದ ವಾಹನ ದಟ್ಟನೆ ಆಗುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ” ಎಂದಿದೆ.
ಶಹೀನ್ ಭಾಗ್ ನಲ್ಲಿ ರಸ್ತೆ ಸಂಚಾರ ಸುಗಮವಾಗುವಂತೆ ನೋಡಿಕೊಳ್ಳಬೇಕು ಎಂದು ದೆಹಲಿ ಪೊಲೀಸ್ ಆಯುಕ್ತರಿಗೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.