ನವದೆಹಲಿ: ಜೀವವೈವಿಧ್ಯತೆಯ ಸಂರಕ್ಷಣೆಗೆ ಜನರ ಭಾಗವಹಿಸುವಿಕೆ ಅತ್ಯಗತ್ಯವೇ ಹೊರತು ಕಠಿಣ ನಿಯಮಗಳು ಅಲ್ಲ. ಕಠಿಣ ನಿಯಮಗಳು ಭೂಮಿಯನ್ನು ಸಂರಕ್ಷಣೆ ಮಾಡುವುದಿಲ್ಲ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಸೋಮವಾರ ಹೇಳಿದ್ದಾರೆ.
ವನ್ಯಜೀವಿಗಳ ವಲಸೆ ಪ್ರಭೇದಗಳ ಸಂರಕ್ಷಣೆ (ಸಿಎಮ್ಎಸ್ ಸಿಒಪಿ 13)ಯ 13 ನೇ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಜಾವ್ಡೇಕರ್, ”ಪ್ರಕೃತಿಯನ್ನು ಸಂರಕ್ಷಿಸಲು ಅವಾಸ್ತವಿಕ ಷರತ್ತುಗಳನ್ನು ವಿಧಿಸಬಾರದು. ಸಂರಕ್ಷಣೆಯಲ್ಲಿ ಜನರ ಭಾಗವಹಿಸುವಿಕೆಯನ್ನು ನಾವು ಖಚಿತಪಡಿಸಿಕೊಳ್ಳಬೇಕು. ಸಂರಕ್ಷಣೆಗಾಗಿ ನಾವು ಹೆಚ್ಚು ಕಠಿಣ ನಿಯಮಗಳು ಮತ್ತು ಕಾನೂನುಗಳನ್ನು ತರಬೇಕು ಎಂದು ಇಲ್ಲಿ ಯಾರೋ ಸಲಹೆ ನೀಡಿದ್ದಾರೆ. ಆದರೆ ಕಠಿಣ ನಿಯಮಗಳು ಭೂಮಿಯನ್ನು ಉಳಿಸುವುದಿಲ್ಲ. ಜನರು ಸ್ವಯಂಪ್ರೇರಣೆಯಿಂದ ಭಾಗವಹಿಸುವ ಮೂಲಕ ಮಾತ್ರ ಭೂಮಿಯನ್ನು ಉಳಿಸಬಹುದು” ಎಂದಿದ್ದಾರೆ.
“ಸಂರಕ್ಷಣೆಗಾಗಿ ಅವಾಸ್ತವಿಕ ಷರತ್ತುಗಳನ್ನು ಹಾಕಬೇಡಿ ಮತ್ತು ಸ್ನೇಹಿತರನ್ನು ಶತ್ರುಗಳಾಗಿ ಪರಿವರ್ತಿಸಬೇಡಿ. ಈ ಸಿಒಪಿ ಖಂಡಿತವಾಗಿಯೂ ಪರಿಹಾರಗಳೊಂದಿಗೆ ಹೊರಬರುತ್ತದೆ ಎಂದು ನಾನು ಭಾವಿಸುತ್ತೇನೆ “ಎಂದು ಸಚಿವರು ಹೇಳಿದ್ದಾರೆ. ಸಿಎಮ್ಎಸ್ ಸಿಒಪಿಯ ಗಾಂಧಿನಗರ ಆವೃತ್ತಿಯು ಇಲ್ಲಿಯವರೆಗಿನ ದೊಡ್ಡ ಸಮ್ಮೇಳನವಾಗಿದೆ. 130 ರಿಂದ 3,250 ಜನರು ಈವರೆಗೆ ಇದಕ್ಕೆ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಕೃತಿ ಭಾರತದ ಜೀವನ ಚಕ್ರದ ಒಂದು ಭಾಗವಾಗಿದೆ ಎನ್ನುವ ಮೂಲಕ ಭಾರತದ ಬೃಹತ್ ಜೀವವೈವಿಧ್ಯತೆಯನ್ನು ಶ್ಲಾಘಿಸಿದ ಅವರು, “ಜಾಗತಿಕವಾಗಿ, ಭಾರತ ಕೇವಲ 2.5 ಶೇಕಡಾ ಭೂಮಿ, ಶೇ.1.7 ಮಾನವ ಜನಸಂಖ್ಯೆ, ಶೇ.18 ದನಕರುಗಳು, ಶೇ.8 ಸಸ್ತನಿ, ಶೇ. 12 ಪಕ್ಷಿಗಳು, ಶೇ.6 ಸರೀಸೃಪಗಳು ಮತ್ತು ಶೇ.4 ಉಭಯಚರಗಳು ಮಾತ್ರ ಇವೆ. ಇದು ಭಾರತದ ಜೀವವೈವಿಧ್ಯತೆ” ಎಂದರು.
“ಪ್ರಕೃತಿ ನಮ್ಮ ಜೀವನ ಚಕ್ರದ ಒಂದು ಭಾಗ. ನಾವು ಮರಗಳು ಮತ್ತು ಪ್ರಾಣಿಗಳನ್ನು ಪೂಜಿಸುತ್ತೇವೆ. ವಲಸೆ ಜಾತಿಗಳು ಅತ್ಯಂತ ಆಕರ್ಷಕ ವಿಷಯವಾಗಿದೆ. ನಮ್ಮಲ್ಲಿ ತಿಮಿಂಗಿಲ ಶಾರ್ಕ್, ಆಮೆಗಳು, ದೊಡ್ಡ ಭಾರತೀಯ ಬಸ್ಟರ್ಡ್ ಮತ್ತು ಇತರ ಅನೇಕ ವಲಸೆ ಪ್ರಭೇದಗಳಿವೆ ”ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.