ನವದೆಹಲಿ: ರಷ್ಯಾದ ದೂರ ಪೂರ್ವ ಪ್ರದೇಶದಿಂದ ಭಾರತವು ದೀರ್ಘಕಾಲದವರೆಗೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಮಹತ್ವಾಕಾಂಕ್ಷೆಯ ಒಪ್ಪಂದದ ಪ್ರಕ್ರಿಯೆಗಳನ್ನು ಭಾರತ ಮತ್ತು ರಷ್ಯಾ ಅಂತಿಮಗೊಳಿಸಿದೆ. ಇದು ಸರ್ಕಾರದಿಂದ ಸರ್ಕಾರದ ಒಪ್ಪಂದವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಾರ್ಷಿಕ ಶೃಂಗಸಭೆ ಮಾತುಕತೆಗಾಗಿ ಅಕ್ಟೋಬರ್ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭೇಟಿ ನೀಡುವ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆಯಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ವಾರ್ಷಿಕ ದ್ವಿಪಕ್ಷೀಯ ವ್ಯಾಪಾರದ ಪ್ರಮಾಣವನ್ನು ಪ್ರಸ್ತುತ 11 ಬಿಲಿಯನ್ ಡಾಲರ್ನಿಂದ 25 ಬಿಲಿಯನ್ ಡಾಲರ್ಗೆ ತೆಗೆದುಕೊಂಡು ಹೋಗುವ ಗುರಿಯನ್ನು ಸಾಧಿಸಲು ಉಭಯ ದೇಶಗಳಿಗೆ ಸಹಾಯ ಮಾಡಲು ಈ ಒಪ್ಪಂದವನ್ನು ನಿಗದಿಪಡಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಷ್ಯಾ ವಕ್ತಾರ ರೋಮನ್ ಬಾಬುಷ್ಕಿನ್ ಅವರು, “ಭಾರತ ಮತ್ತು ರಷ್ಯಾ ಎರಡೂ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವಲ್ಲಿ ಬಹು ಆಯಾಮದ ವಿಧಾನವನ್ನು ಅನುಸರಿಸುತ್ತಿವೆ, ಇದು ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಪ್ರಧಾನಿ ಮೋದಿ ಅವರು ಕಳೆದ ಸೆಪ್ಟೆಂಬರ್ನಲ್ಲಿ ವ್ಲಾಡಿವೋಸ್ಟಾಕ್ನಲ್ಲಿ ನಡೆದ ಕೊನೆಯ ವಾರ್ಷಿಕ ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳೊಂದಿಗೆ ಸಂಯೋಜಿತವಾಗಿದೆ” ಎಂದಿದ್ದಾರೆ.
”ಪ್ರಸಕ್ತ ವರ್ಷದ ಅಂತ್ಯದ ವೇಳೆಗೆ ರಷ್ಯಾದಿಂದ ಭಾರತಕ್ಕೆ ಎರಡು ಮಿಲಿಯನ್ ಟನ್ ತೈಲವನ್ನು ಸರಬರಾಜು ಮಾಡಲು ನಾವು ಕೆಲವು ದಿನಗಳ ಹಿಂದೆ ಒಂದು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಅನೇಕ ವರ್ಷಗಳಿಂದ ತೈಲ ಪೂರೈಕೆಗಾಗಿ ಭಾರತದೊಂದಿಗೆ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಲು ನಾವು ಯೋಚಿಸುತ್ತಿದ್ದೇವೆ ” ಎಂದಿದ್ದಾರೆ.
“ಇಂಧನ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಪಾಲುದಾರರಾಗಿ ನಮ್ಮ ಸಾಮರ್ಥ್ಯವನ್ನು ನಾವು ಅರಿತುಕೊಳ್ಳಬೇಕು. ಭಾರತ ಮತ್ತು ರಷ್ಯಾದಲ್ಲಿ ಇಂಧನ ಕ್ಷೇತ್ರದಲ್ಲಿ ಪರಸ್ಪರ ಹೂಡಿಕೆ ಸಹಕಾರವು ಮಹತ್ವದ ಮತ್ತೊಂದು ಕ್ಷೇತ್ರವಾಗಿದೆ” ಎಂದು ಬಾಬುಷ್ಕಿನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.