ಮಂಗಳೂರು : ಕೇವಲ 13.42 ಸೆಕೆಂಡುಗಳಲ್ಲಿ 142 ಮೀಟರ್ ಓಡಿ ದಾಖಲೆಯನ್ನು ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ವೀರ ಶ್ರೀನಿವಾಸ್ ಗೌಡ ಅವರು ಕೇಂದ್ರ ಕ್ರೀಡಾ ಸಚಿವರ ಗಮನವನ್ನು ಸೆಳೆದಿದ್ದಾರೆ. ಎಸ್ ಐ ಐ (ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕೋಚ್) ಕೋಚ್ಗಳನ್ನು ಭೇಟಿಯಾಗಿ ಅವರ ಮುಂದೆ ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶವನ್ನು ನೀಡಿದ್ದಾರೆ.
ಶ್ರೀನಿವಾಸ್ ಗೌಡ ಅವರು ಫೆ. 1 ರಂದು ನಡೆದ ಐಕಳಬಾವ ಕಾಂತಬಾರೆ ಬೂದಬಾರೆ ಜೋಡುಕರೆ ಕಂಬಳದಲ್ಲಿ ಇವರು ಇರುವೈಲು ಪಾಣಿಲ ಬಾಡ ಪೂಜಾರಿ ಅವರ ಕೋಣಗಳೊಂದಿಗೆ ನೇಗಿಲು ಹಿರಿಯ ವಿಭಾಗದಲ್ಲಿ 142.50 ಮೀಟರ್ ಉದ್ದದ ಕರೆಯಲ್ಲಿ 13.62 ಸೆಕೆಂಡ್ಗಳಲ್ಲಿ ಓಡಿದ್ದಾರೆ. ಅಂದರೆ ಅವರು 9.55 ಸೆಕೆಂಡ್ಗಳಲ್ಲಿ 100 ಮೀಟರ್ ಓಡಿದ್ದಾರೆ. ಇಷ್ಟು ವೇಗದಲ್ಲಿ ಇದುವರೆಗೆ ಕಂಬಳ ಕರೆಯಲ್ಲಿ ಯಾರೂ ಓಡಿದ ದಾಖಲೆಯೇ ಇಲ್ಲ.
28 ವರ್ಷದ ಇವರು ವೃತ್ತಿಯಲ್ಲಿ ಕಟ್ಟಡ ಮೇಸ್ತ್ರಿ ಆಗಿದ್ದಾರೆ. ನವೆಂಬರ್ನಿಂದ ಮಾರ್ಚ್ವರೆಗೆ ಕಂಬಳದಲ್ಲಿ ಭಾಗವಹಿಸಿ ಉಳಿದ ಅವಧಿಯಲ್ಲಿ ಕಟ್ಟಡ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರ ಶರವೇಗ ಕಂಬಳ ಓಟ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿ ಮಾಡಿದೆ. ಕ್ರೀಡಾ ಸಚಿವರನ್ನೂ ಈ ಸುದ್ದಿ ತಲುಪಿದೆ.
ಟ್ವಿಟ್ ಮಾಡಿರುವ ರಿಜ್ಜು, “ನಾನು ಉನ್ನತ ಎಸ್ಐಐ ತರಬೇತುದಾರರ ಪ್ರಯೋಗಗಳಿಗಾಗಿ ಶ್ರೀನಿವಾಸ ಗೌಡ ಅವರನ್ನು ಆಹ್ವಾನಿಸುತ್ತೇನೆ. ಒಲಿಂಪಿಕ್ಸ್ನ ಮಾನದಂಡಗಳ ಬಗ್ಗೆ ಜನರಲ್ಲಿ ಜ್ಞಾನದ ಕೊರತೆಯಿದೆ, ಅದರಲ್ಲೂ ವಿಶೇಷವಾಗಿ ಅಥ್ಲೆಟಿಕ್ಸ್ನಲ್ಲಿ ಮಾನವ ಶಕ್ತಿ ಮತ್ತು ಸಾಮರ್ಥ್ಯ ಮಹತ್ವದ್ದು. ಭಾರತದಲ್ಲಿರುವ ಎಲ್ಲಾ ಪ್ರತಿಭೆಗಳನ್ನು ಪರೀಕ್ಷೆಗೆ ಒಳಪಡಿಸುತ್ತೇವೆ ಎಂಬುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ ಮತ್ತು ಯಾರೊಬ್ಬರ ಪ್ರತಿಭೆಯೂ ನಿರರ್ಥಕವಾಗದಂತೆ ನೋಡಿಕೊಳ್ಳುತ್ತೇವೆ” ಎಂದಿದ್ದಾರೆ.
I’ll call Karnataka’s Srinivasa Gowda for trials by top SAI Coaches. There’s lack of knowledge in masses about the standards of Olympics especially in athletics where ultimate human strength & endurance are surpassed. I’ll ensure that no talents in India is left out untested. https://t.co/ohCLQ1YNK0
— Kiren Rijiju (@KirenRijiju) February 15, 2020
ಶ್ರೀನಿವಾಸ ಗೌಡ ಅವರನ್ನು ಕೆಲವರು ವಿಶ್ವದ ಶರವೇಗದ ಸರದಾರ ಉಸೇನ್ ಬೋಲ್ಟ್ ಅವರಿಗೆ ಹೋಲಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೌಡ ಅವರು, “ಉಸೇನ್ ಬೋಲ್ಟ್ ವಿಶ್ವ ಚಾಂಪಿಯನ್ ಆಗಿದ್ದಾರೆ, ನಾನು ಓಡಿದ್ದು ಕೇವಲ ನಮ್ಮೂರಿನ ಕೆಸರು ಗದ್ದೆಯಲ್ಲಿ’ ಎಂದಿದ್ದಾರೆ.
Karnataka: Srinivasa Gowda from Mudbidri, Mangaluru ran 142.5 meters in 13.62 seconds at a buffalo race (Kambala) in a paddy field on Feb1 in Kadri. He says, “People are comparing me to Usain Bolt. He is a world champion, I am only running in a slushy paddy field”. pic.twitter.com/tjq03M5m0C
— ANI (@ANI) February 15, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.