ನವದೆಹಲಿ: “ಏಪ್ರಿಲ್ನಲ್ಲಿ ರಾಮ ನವಮಿಯಂದು ರಾಮ ಮಂದಿರ ನಿರ್ಮಾಣದ ಕಾರ್ಯ ಪ್ರಾರಂಭವಾಗುವ ವಿಶ್ವಾಸವಿದೆ” ಎಂದು ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರದ ದಲಿತ ಸದಸ್ಯರಾಗಿರುವ ಕಾಮೇಶ್ವರ ಚೌಪಾಲ್ ಹೇಳಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ದೇವಾಲಯದ ರಚನೆ ಗೋಚರಿಸುವಂತೆ ಮಾಡಲು ಟ್ರಸ್ಟ್ ಶ್ರಮಿಸುತ್ತದೆ ಮತ್ತು ಆದಷ್ಟು ಬೇಗ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಸುಸಂದರ್ಭ ಪ್ರಾರಂಭವಾಗುತ್ತದೆ ಎಂದು ಚೌಪಾಲ್ ಹೇಳಿದ್ದಾರೆ.
ದೇವಾಲಯಕ್ಕೆ ಸಮಾಜವು ಧನಸಹಾಯವನ್ನು ನೀಡಲಿದೆ ಮತ್ತು ಹಣವನ್ನು ಪಾರದರ್ಶಕ ರೀತಿಯಲ್ಲಿ ಸಂಗ್ರಹಿಸಲಾಗುತ್ತದೆ ಎಂದಿದ್ದಾರೆ.
ಬಾಬರಿ ಮಸೀದಿ ನೆಲಸಮಗೊಳಿಸಿದ ನಂತರ 1992ರಲ್ಲಿ ಚೌಪಾಲ್ ಅವರು ಅಯೋಧ್ಯೆಯಲ್ಲಿನ ತಾತ್ಕಾಲಿಕ ರಾಮ ಮಂದಿರಕ್ಕೆ ಮೊದಲ ಇಟ್ಟಿಗೆಯನ್ನು ಹಾಕಿದ್ದರು. ಅವರು ಎಸ್ಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ವರದಿಯ ಪ್ರಕಾರ, 1989ರ ಕುಂಭಮೇಳದಲ್ಲಿ ಭಾರತದಾದ್ಯಂತದ ಧಾರ್ಮಿಕ ಮುಖಂಡರು, ಅಯೋಧ್ಯೆ ರಾಮ ಮಂದಿರಕ್ಕೆ ದಲಿತ ಸಮುದಾಯದ ಸದಸ್ಯರೇ ಶಿಲಾನ್ಯಾಸವನ್ನು ನಡೆಸಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡರು.
ತಾತ್ಕಾಲಿಕ ಮಂದಿರಕ್ಕೆ ಮೊದಲ ಇಟ್ಟಿಗೆಯನ್ನು ಹಾಕಿದ ನಂತರ ಚೌಪಾಲ್ ದೇಶದಾದ್ಯಂತ ಖ್ಯಾತರಾಗಿದ್ದರು. ನಂತರ ಇವರು ಔಪಚಾರಿಕವಾಗಿ ಬಿಜೆಪಿಗೆ ಸೇರಿದರು. ಅವರು 2009 ರಿಂದ 2014 ರವರೆಗೆ ಬಿಹಾರದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.