ನವದೆಹಲಿ: ಹಿಂದೂ ಧರ್ಮದ ಉಳಿವಿಗಾಗಿ ಈ ಆಧುನಿಕ ಕಾಲದಲ್ಲಿ ಹಿಂದುತ್ವದ ಅಗತ್ಯತೆಯನ್ನು ಒತ್ತಿ ಹೇಳಿರುವ ಬಿಜೆಪಿಯ ಯುವ ಸಂಸದ ತೇಜಸ್ವಿ ಸೂರ್ಯ ಅವರು, ಹಿಂದುತ್ವವು ಮತಾಂತರಿಸುವ ಅಬ್ರಹಾಮಿಕ್ ನಂಬಿಕೆಗಳ ವಿರುದ್ಧ ಹಿಂದೂಗಳ ಬೌದ್ಧಿಕ, ರಾಜಕೀಯ ಮತ್ತು ಸಾಮಾಜಿಕ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದರು.
ಟೈಮ್ಸ್ ನೌ ಸಮಿಟ್ನಲ್ಲಿ ‘ಯಾರು ಹಿಂದುತ್ವವನ್ನು ತಪ್ಪಾಗಿ ನಿರೂಪಿಸುತ್ತಿದ್ದಾರೆ?’ ಎಂಬ ವಿಷಯದ ಕುರಿತು ಮಾತನಾಡಿದ ಅವರು, “ರಾಷ್ಟ್ರವಾಗಿ ಭಾರತವು ಆಗಸ್ಟ್ 15, 1947 ರಂದು ಜನಿಸಿಲ್ಲ, ಬದಲಾಗಿ ಸಾವಿರಾರು ವರ್ಷಗಳ ಕಾಲ “ನಾಗರಿಕತೆಯ ಅನುಭವ”ದೊಂದಿಗೆ ಬದುಕಿ ಮುಂದುವರಿದು ಬಂದ ನಾಗರಿಕತೆಯಾಗಿದೆ” ಎಂದು ಹೇಳಿದ್ದಾರೆ.
“ಭಾರತದ ಪ್ರಾಥಮಿಕ ತಾತ್ವಿಕ ಚಿಂತನೆಯು ಎಲ್ಲರನ್ನೂ ಒಳಗೊಳ್ಳುವ, ಎಲ್ಲವನ್ನು ಸ್ವೀಕರಿಸುವಂತಿತ್ತು. ಇದು ಎಂದಿಗೂ ಪ್ರತ್ಯೇಕವಾದವನ್ನು ಒಳಗೊಂಡಿರಲಿಲ್ಲ ಮತ್ತು ಮುಖ್ಯವಾಗಿ, ಇದು ಬೇರೆ ಯಾವುದೇ ತಾತ್ವಿಕ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಆಲೋಚನೆಗಳ ಅಸ್ತಿತ್ವ ಮತ್ತು ಸಿಂಧುತ್ವವನ್ನು ಎಂದಿಗೂ ನಿರಾಕರಿಸಲಿಲ್ಲ” ಎಂದು ತೇಜಸ್ವಿ ಹೇಳಿದ್ದಾರೆ.
ಭಾರತ ಮತ್ತು ಭಾರತೀಯ ತತ್ತ್ವಚಿಂತನೆಗಳು, ಅಂತರ್ಗತವಾಗಿ ಪ್ರತ್ಯೇಕವಾದ, ಸಂಘರ್ಷಮಯವಾದ, ಪರಭಕ್ಷಕ ಮತ್ತು ಮತಾಂತರಿ ನಂಬಿಕೆಗಳಾದ ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂನಂತಹ ಅರೆ ಅಬ್ರಹಾಮಿಕ್ ನಂಬಿಕೆಗಳೊಂದಿಗೆ ಸಂಪರ್ಕಕ್ಕೆ ಬಂದಾಗ, ಹಿಂದೂಗಳಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ತಾನಾಗಿಯೇ ಸೃಷ್ಟಿಯಾಯಿತು ಎಂದಿದ್ದಾರೆ.
“ಭಾರತೀಯರ ಈ ಪ್ರತಿಕ್ರಿಯೆಯನ್ನು ಬಳಿಕದ ಕಾಲಘಟ್ಟದಲ್ಲಿ ‘ಹಿಂದುತ್ವ’ ಎಂದು ಕರೆಯಲಾಯಿತು” ಎಂದಿದ್ದಾರೆ.
“ಹಿಂದುತ್ವವು ಆಕ್ರಮಣಶೀಲತೆಯ ವಿರುದ್ಧ ತಮ್ಮನ್ನು ತಡೆಯಲು ಹಿಂದೂಗಳ ಬೌದ್ಧಿಕ, ರಾಜಕೀಯ, ಸಾಮಾಜಿಕ ಪ್ರತಿಕ್ರಿಯೆಯಾಗಿದೆ. ಆದ್ದರಿಂದ, ಹಿಂದುತ್ವವು ಆಕ್ರಮಣದ ಬಲಿಪಶು ಈ ಕಾರಣದಿಂದ ಹಿಂದುತ್ವವು ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ”ಎಂದು ಅವರು ಹೇಳಿದ್ದಾರೆ.
This young MP will go far. Articulate, aware, well-read and absolutely clear in this thought. Take a bow @Tejasvi_Surya pic.twitter.com/KBAekhJffs
— Shefali Vaidya. (@ShefVaidya) February 14, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.