ನವದೆಹಲಿ: ಚೀನಾದ ಕೊರೋನವೈರಸ್ ಪೀಡಿತ ವುಹಾನ್ ನಗರದಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ತೊಡಗಿದ ತಂಡದ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆಯ ಪತ್ರವನ್ನು ನೀಡಿದ್ದಾರೆ. ಪ್ರಧಾನಿ ಕಚೇರಿಯ ಪ್ರಕಾರ, ಈ ಪತ್ರವನ್ನು ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಖಾತೆ ಸಚಿವವರಿಗೆ ಹಸ್ತಾಂತರಿಸಲಾಗುತ್ತದೆ.
“ವುಹಾನ್ನಲ್ಲಿ ಸಿಕ್ಕಿಲುಕಿದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ನಡೆಸಿದ ಏರ್ ಇಂಡಿಯಾ ಮತ್ತು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಪ್ರದರ್ಶಿಸಿದ ಕರ್ತವ್ಯದ ಉನ್ನತ ಮಟ್ಟದ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ” ಎಂದು ಪಿಎಂಒ ಪ್ರಕಟಣೆಯಲ್ಲಿ ತಿಳಿಸಿದೆ.
ವ್ಯಾಪಕವಾಗಿ ಹರಡುತ್ತಿರುವ ಕೊರೋನಾವೈರಸ್ ಮೂಲವಾಗಿರುವ ವುಹಾನ್ನಿಂದ ಭಾರತೀಯರನ್ನು ಸ್ಥಳಾಂತರಿಸಲು ಏರ್ ಇಂಡಿಯಾ ತುರ್ತು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ನಡೆಸಿತ್ತು, ಇದಕ್ಕಾಗಿ ವುಹಾನ್ ನಗರಕ್ಕೆ ಎರಡು ವಿಮಾನಗಳನ್ನು ಕಳುಹಿಸಿಕೊಟ್ಟಿತ್ತು. ವೈದ್ಯರುಗಳ ತಂಡವೂ ಇದರಲ್ಲಿ ಇತ್ತು.
“ಈ ಪ್ರದೇಶದ ಅಪಾಯಕಾರಿ ಪರಿಸ್ಥಿತಿಯ ಬಗ್ಗೆ ತಿಳಿದಿದ್ದರೂ ಕೂಡ ಏರ್ ಇಂಡಿಯಾ ಎರಡು ಬಿ -747 ವಿಮಾನಗಳನ್ನು ಏರ್ ಇಂಡಿಯಾದ ತಂಡಗಳೊಂದಿಗೆ ಮತ್ತು ಆರೋಗ್ಯ ಸಚಿವಾಲಯದ ತಂಡಗಳೊಂದಿಗೆ ಎರಡು ದಿನಗಳ ಕಾಲ ಅಲ್ಲಿಗೆ ಕಳುಹಿಸಿತ್ತು. ಜನವರಿ 31 ರಂದು ಅಲ್ಲಿಗೆ ತೆರಳಿದ್ದ ವಿಮಾನ, ಫೆಬ್ರವರಿ 1 ರಂದು ವಾಪಾಸ್ಸಾಗಿತ್ತು’ ಎಂದು ಹೇಳಿಕೆ ತಿಳಿಸಿದೆ.
ಈ ಎರಡು ವಿಮಾನದ ಕಾರ್ಯಾಚರಣೆಗಳು ವುಹಾನ್ನಲ್ಲಿದ್ದ ಸುಮಾರು 650 ಜನರನ್ನು ಸ್ಥಳಾಂತರಿಸಲು ಭಾರತಕ್ಕೆ ಅನುವು ಮಾಡಿಕೊಟ್ಟಿತ್ತು. ಜನತೆ ಏಳು ಮಾಲ್ಡೀವ್ಸ್ ನಾಗರಿಕರನ್ನೂ ರಕ್ಷಣೆ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.