ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಭಾನುವಾರ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದು, ಈ ವೇಳೆ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್ಯು) ಹೊಸದಾಗಿ ನಿರ್ಮಿಸಲಾದ ವೈದಿಕ ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
ವಿವಿಧ ವಿಜ್ಞಾನಗಳಿಗೆ ಸಂಬಂಧಿಸಿದ, ಜ್ಞಾನಕ್ಕಾಗಿ ವೈದಿಕ ಸಂಗ್ರಹವನ್ನು ಅನ್ವೇಷಿಸುವ ಮತ್ತು ಬಹು ಆಯಾಮದ ಸಂಶೋಧನೆ ನಡೆಸಲು ಮತ್ತು ವೈಜ್ಞಾನಿಕ ವಿಧಾನವನ್ನು ಉತ್ತೇಜಿಸಲು ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಉತ್ತರಪ್ರದೇಶ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಸ್ಥಾಪಿಸಲಾಗುತ್ತಿರುವ ಈ ಕೇಂದ್ರಕ್ಕೆ 2018 ರ ಸೆಪ್ಟೆಂಬರ್ನಲ್ಲಿ ಮೋದಿಯವರು ಅಡಿಪಾಯ ಹಾಕಿದ್ದರು.
ಪ್ರಾಚೀನ ಬುದ್ಧಿವಂತಿಕೆ ಮತ್ತು ಆಧುನಿಕ ಜ್ಞಾನದ ನಡುವೆ ಸಂಪರ್ಕವನ್ನು ಸ್ಥಾಪಿಸುವ ಮತ್ತು ಜ್ಞಾನದ ಶ್ರೇಷ್ಠ ಮೂಲವಾದ ವೇದಗಳನ್ನು ಅನ್ವೇಷಿಸುವ ಬಗ್ಗೆ ಸಂಶೋಧನೆಯ ಅವಶ್ಯಕತೆಯಿದೆ ಎಂದು ಬಿಎಚ್ಯು ಉಪಕುಲಪತಿ ಪ್ರೊಫೆಸರ್ ರಾಕೇಶ್ ಭಟ್ನಾಗರ್ ಹೇಳಿದ್ದಾರೆ.
ಈ ವಿಷಯದಲ್ಲಿ ವೈದಿಕ ವಿಜ್ಞಾನ ಕೇಂದ್ರ ಪ್ರಮುಖ ಪಾತ್ರ ವಹಿಸಲಿದೆ. ಇದು ಉಲ್ಲೇಖ ದಾಖಲೆಗಳು / ಪುಸ್ತಕಗಳನ್ನು ಸಿದ್ಧಪಡಿಸಲಿದೆ, ವೈದಿಕ ಬೌದ್ಧಿಕ ಪರಂಪರೆಯ ವಿವಿಧ ಅಂಶಗಳ ವೈಜ್ಞಾನಿಕ ಅಧ್ಯಯನವನ್ನು ಔಪಚಾರಿಕಗೊಳಿಸಲಿದೆ, ವೈದಿಕ ವಿದ್ವಾಂಸರ ತಾರ್ಕಿಕ ಮತ್ತು ವೈಜ್ಞಾನಿಕ ಸಾಧನೆಗಳನ್ನು ಉತ್ತೇಜಿಸಲಿದೆ ಮತ್ತು ಜಂಟಿ ಸಂಶೋಧನೆ ನಡೆಸಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳೊಂದಿಗೆ ಸಹಕರಿಸಲಿದೆ ಎಂದಿದ್ದಾರೆ.
ಈ ಕೇಂದ್ರವು ಸಂಶೋಧನಾ ಯೋಜನೆಗಳನ್ನು ನಡೆಸಲಿದೆ ಮತ್ತು ವೈದಿಕ ಹಸ್ತಪ್ರತಿಗಳನ್ನು ಪ್ರಕಟಣೆಗಾಗಿ ಸಂಗ್ರಹಿಸಲಿದೆ ಎಂದು ಕೇಂದ್ರದ ಸಂಯೋಜಕ ಉಪೇಂದ್ರ ಕುಮಾರ್ ತ್ರಿಪಾಠಿ ಹೇಳಿದ್ದಾರೆ.
“ವೈದಿಕ ವಿಜ್ಞಾನಗಳನ್ನು ಜನಪ್ರಿಯಗೊಳಿಸುವುದಕ್ಕಾಗಿ ವೈಭವಯುತವಾದ ಭೂತಕಾಲವನ್ನು ಅನ್ವೇಷಿಸಲು ಇದನ್ನು ಸ್ಥಾಪಿಸಲಾಗಿದೆ ಮತ್ತು ನರವಿಜ್ಞಾನದ ಅಧ್ಯಯನಗಳ ಮೂಲಕ ವೈದಿಕ ಮಂತ್ರಗಳು, ಆಚರಣೆಗಳು, ಯೋಗ ಮತ್ತು ಮಾನವನ ಮನಸ್ಸಿನ ಮೇಲೆ ಧ್ಯಾನ ಬೀರುವ ಪರಿಣಾಮದ ಅಧ್ಯಯನ ಮತ್ತು ಸಂಶೋಧನೆಗಾಗಿ ಅತ್ಯಾಧುನಿಕ ಪ್ರಯೋಗಾಲಯವನ್ನು ಇದು ಹೊಂದಿದೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.