ಮೀರತ್ : ರಾಜ್ಯ ಸರ್ಕಾರ ರೈತರಿಗಾಗಿ ಜಾರಿಗೊಳಿಸಿರುವ ಯೋಜನೆಗಳನ್ನು ಪ್ರಚಾರ ಮಾಡುವ ಸಲುವಾಗಿ ಉತ್ತರಪ್ರದೇಶ ಪವರ್ ಕಾರ್ಪೊರೇಷನ್ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಇದರ ಮೂಲಕ ರಾಜ್ಯ ಸರ್ಕಾರದ ಹೊಸದಾಗಿ ತಂದಿರುವ ಯೋಜನೆಯ ಬಗ್ಗೆ ಪ್ರಕಟಣೆಗಳನ್ನು ಹೊರಡಿಸಲಾಗುತ್ತಿದೆ. ಈ ಯೋಜನೆಯು ರೈತರಿಗೆ ತಮ್ಮ ಟ್ಯೂಬ್ ವೆಲ್ ಬಿಲ್ ಅನ್ನು ಸುಲಭವಾಗಿ ಕಂತುಗಳಲ್ಲಿ ಪಾವತಿಸಲು ಅನುವು ಮಾಡಿಕೊಡುತ್ತದೆ.
ಟ್ಯೂಬ್ ವೆಲ್ ಮಾಲೀಕರು ತಮ್ಮ ಬಿಲ್ಗಳನ್ನು ಬಡ್ಡಿ ಇಲ್ಲದೆ ಸುಲಭ ಕಂತುಗಳಲ್ಲಿ ಪಾವತಿಸಲು ಅನುವು ಮಾಡಿಕೊಡುವ ಯೋಜನೆಯನ್ನು ‘ಯುಪಿ ಕಿಸಾನ್ ಆಸಾನ್ ಕಿಶ್ಟ್ ಯೋಜನೆ’ ಎಂದು ಕರೆಯಲಾಗುತ್ತದೆ. ಈ ಯೋಜನೆಗೆ ಗರಿಷ್ಠ ಸಂಖ್ಯೆಯ ರೈತರು ನೋಂದಾಯಿಸಿಕೊಳ್ಳಬೇಕೆಂದು ವಿದ್ಯುತ್ ನಿಗಮ ಬಯಸಿದೆ.
ಪಶ್ಚಿಮಾಂಚಲ್ ವಿದ್ಯುತ್ ವಿತರಣ್ ನಿಗಮ್ ಲಿಮಿಟೆಡ್ (ಪಿವಿವಿಎನ್ಎಲ್) ಅಧಿಕಾರಿಗಳ ಪ್ರಕಾರ, ಅದರ ವ್ಯಾಪ್ತಿಯಲ್ಲಿರುವ ಎಲ್ಲಾ 14 ಜಿಲ್ಲೆಗಳಲ್ಲಿ ಪ್ರಕಟಣೆಗಳನ್ನು ಹೊರಡಿಸಲಾಗುತ್ತದೆ.
ಪಿವಿವಿಎನ್ಎಲ್ ವ್ಯಾಪ್ತಿಗೆ ಬರುವ ಪಶ್ಚಿಮ ಯುಪಿಯ 14 ಜಿಲ್ಲೆಗಳೆಂದರೆ ಮೀರತ್, ಬಾಗಪತ್, ಘಾಜಿಯಾಬಾದ್, ಬುಲಂದ್ಶಹರ್, ಹಾಪುರ್, ಗೌತಮ್ ಬುದ್ಧ ನಗರ, ಶಹರಾಣ್ಪುರ್, ಮುಜಫರ್ನಗರ, ಶಾಮ್ಲಿ, ಮೊರಾದಾಬಾದ್, ಸಂಭಾಲ್, ಅಮ್ರೋಹಾ, ರಾಂಪುರ್ ಮತ್ತು ಬಿಜ್ನೋರ್.
ಪಿವಿವಿಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಮಲ್ಲಪಾ ಬಂಗಾರಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಈ ಹಿಂದೆ ಅನಗತ್ಯ ವಿವಾದಗಳನ್ನು ಉಂಟುಮಾಡಿದ್ದ ಧ್ವನಿವರ್ಧಕಗಳನ್ನು ಈಗ ಸ್ವಲ್ಪ ಉತ್ತಮ ಕಾರಣಕ್ಕಾಗಿ ಬಳಕೆಗೆ ತರುವುದು ಒಳ್ಳೆಯದು. ಧ್ವನಿವರ್ಧಕಗಳ ಮೂಲಕ ಪ್ರಕಟಣೆಗಳು ವೇಗವಾಗಿ ಹರಡುತ್ತವೆ ಮತ್ತು ಯೋಜನೆಗೆ ಗರಿಷ್ಠ ನೋಂದಣಿಯನ್ನು ಖಚಿತಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಮಸೀದಿಗಳಲ್ಲಿ ಸ್ಥಾಪಿಸಲಾದ ಧ್ವನಿವರ್ಧಕಗಳು ಹೆಚ್ಚಾಗಿ ಪಶ್ಚಿಮ ಯುಪಿಯಲ್ಲಿ ಕೋಮು ವಿವಾದಕ್ಕೆ ಕಾರಣವಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.