ನವದೆಹಲಿ: ಭಾರತೀಯ ರೈಲ್ವೆ ನಿಲ್ದಾಣಗಳು ಆಧುನೀಕರಣಗೊಳ್ಳುತ್ತಿದೆ. ಭಾರತೀಯ ರೈಲ್ವೆ ನಿಲ್ದಾಣಗಳ ನವೀಕರಣ ಕಾರ್ಯಗಳು ದೇಶಾದ್ಯಂತದ ಹಲವಾರು ನಿಲ್ದಾಣಗಳಲ್ಲಿ ಪ್ರಗತಿಯಲ್ಲಿವೆ. ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಪ್ರಸ್ತುತ ತಮಿಳುನಾಡು ರಾಜ್ಯದ ಸೇಲಂ ಜಂಕ್ಷನ್ ಮತ್ತು ನಾಗಾಲ್ಯಾಂಡ್ನ ದಿಮಾಪುರ ರೈಲು ನಿಲ್ದಾಣಗಳು ಪ್ರಯಾಣಿಕರ ಸೌಕರ್ಯಗಳು ಮತ್ತು ಇತರ ಸೌಲಭ್ಯಗಳೊಂದಿಗೆ ನವೀಕರಣಗೊಳ್ಳುತ್ತಿರುವ ಎರಡು ಪ್ರಮುಖ ರೈಲ್ವೆ ನಿಲ್ದಾಣಗಳಾಗಿವೆ.
ಈ ಎರಡೂ ರೈಲ್ವೆ ನಿಲ್ದಾಣಗಳಿಗೆ ಹೊಸ ಮೇಕ್ ಓವರ್ ನೀಡಲಾಗುತ್ತಿದ್ದು, ಹಲವಾರು ಆಧುನಿಕ ವೈಶಿಷ್ಟ್ಯಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ.
ನಿಲ್ದಾಣದ ಮುಂಭಾಗದ ನವೀಕರಣಕ್ಕಾಗಿ ಸುಮಾರು 5 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ, ನಿಲ್ದಾಣಗಳ ಲ್ಯಾಂಡ್ ಸ್ಕೇಪಿಂಗ್ ಪ್ರದೇಶವನ್ನು ವಿಸ್ತರಿಸಲಾಗಿದೆ. ಪೋಸ್ಟರ್ ಅಂಟಿಸುವುದನ್ನು ತಡೆಯಲು ಗೋಡೆಗಳ ಎತ್ತರವನ್ನು ಕಡಿಮೆ ಮಾಡಲಾಗಿದೆ. ಮೊದಲ ಹಂತದಲ್ಲಿ, ಸುಗಮ ಸಂಚಾರವನ್ನು ಖಾತ್ರಿಪಡಿಸಲಾಗಿದೆ. ಬಸ್ಗಳಿಗೆ ಜೊತೆಗೆ ವಾಣಿಜ್ಯ ವಾಹನಗಳಾದ ಟ್ಯಾಕ್ಸಿಗಳು, ಆಟೋಗಳು ಮತ್ತು ಖಾಸಗಿ ವಾಹನಗಳಿಗೆ ಪ್ರತ್ಯೇಕ ಲೇನ್ಗಳನ್ನು ಒದಗಿಸಲಾಗಿದೆ.
ಅಲ್ಲದೆ, ಆ್ಯಪ್ ಆಧಾರಿತ ಕಾರು ಸೇವೆಗಳಿಗಾಗಿ ಅಸ್ತಿತ್ವದಲ್ಲಿರುವ ವಾಹನ ಪಾರ್ಕಿಂಗ್ ಸ್ಟ್ಯಾಂಡ್ ಬಳಿ ಹೊಸ ಪ್ರದೇಶವನ್ನು ಒದಗಿಸಲಾಗಿದೆ. ನಿಲ್ದಾಣದ ಕಟ್ಟಡವನ್ನು ಬೆಳಗಿಸಲು, ಕಸ್ಟಮ್ ನಿರ್ಮಿತ ಮುಂಭಾಗದ ಬೆಳಕಿನ ವ್ಯವಸ್ಥೆಗಳನ್ನು ಮಾಡಲಾಗಿದೆ.
ಉದ್ಯಾನವವನ್ನೂ ನಿರ್ಮಾಣ ಮಾಡಲಾಗಿದೆ. ದೃಷ್ಟಿ ವಿಕಲಚೇತನರಿಗೆ ಸಹಾಯ ಮಾಡಲು ಎಲ್ಇಡಿ-ಬ್ಯಾಕ್ಲಿಟ್ ಪ್ಯಾಸೆಂಜರ್ ಆಮೆನಿಟಿ ಬೋರ್ಡ್ ಮತ್ತು ಬ್ರೈಲ್ ಬೋರ್ಡ್ಗಳನ್ನು ನಿಲ್ದಾಣದ ಮೇಲಿರುವ ಎಲ್ಲಾ ಸೌಕರ್ಯಗಳಲ್ಲಿ ನಿಗದಿಪಡಿಸಲಾಗಿದೆ.
ರೈಲ್ವೆ ನಿಲ್ದಾಣದಲ್ಲಿ ಬಿಎಂಐ ಕಿಯೋಸ್ಕ್, ಪಲ್ಸ್ ಕಿಯೋಸ್ಕ್ ಮತ್ತು ಮಸಾಜ್ ಚೇರ್ ಅಳವಡಿಸಲಾಗಿದೆ. ಪ್ಲಾಟ್ಫಾರ್ಮ್ಗಳನ್ನು ಮಾರ್ಪಡಿಸಲಾಗುತ್ತಿದೆ. ಒಟ್ಟಾರೆಯಾಗಿ ಈ ಎರಡು ವಿಮಾನನಿಲ್ದಾಣಗಳು ಅತ್ಯಾಧುನಿಕ ರೀತಿಯಲ್ಲಿ ಸುಧಾರಣೆಗೊಂಡು ಪ್ರಯಾಣಿಕ ಸ್ನೇಹಿ ಆಗುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.