ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಕ್ರೀಡಾ ಸಚಿವ ಕಿರಣ್ ರಿಜ್ಜು ಅವರು ‘ಪೆನ್ಷನ್ ಟು ಮೆರಿಟೋರಿಯಸ್ ಸ್ಪೋರ್ಟ್ಸ್ ಪರ್ಸನ್ಸ್ ಸ್ಕೀಮ್’ ಅಡಿಯಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ವಿಜೇತರಿಗೆ ಆಜೀವ ಮಾಸಿಕ ಪಿಂಚಣಿಯನ್ನು ಸೋಮವಾರ ಪರಿಚಯಿಸಿದ್ದಾರೆ.
ಕಿರಣ್ ರಿಜ್ಜು ಅವರು ಯೋಜನೆಯ ಅನುಷ್ಠಾನದ ಬಗ್ಗೆ ಟ್ವಿಟರಿನಲ್ಲೂ ಮಾಹಿತಿ ನೀಡಿದ್ದಾರೆ ಮತ್ತು ತಾನು ರಾಜ್ಯಸಭೆಗೆ ನೀಡಿದ ಲಿಖಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಯೋಜನೆಯು ಒಲಿಂಪಿಕ್ನಲ್ಲಿ, ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಮತ್ತು ವರ್ಲ್ಡ್ ಕಪ್/ ವರ್ಲ್ಡ್ ಚಾಂಪಿಯನ್ ಶಿಪ್ ಮುಂತಾದ ಸ್ಪರ್ಧೆಗಳಲ್ಲಿ ಪದಕ ಗೆದ್ದ ಭಾರತೀಯ ಪ್ರಜೆಗಳಾಗಿರುವ ಕ್ರೀಡಾಪಟುಗಳಿಗೆ ಅಜೀವ ಪಿಂಚಣಿಯನ್ನು ನೀಡಲಿದೆ. ಪ್ರಸ್ತುತ, 627 ಕ್ರೀಡಾಪಟುಗಳಿಗೆ ಅಜೀವ ಮಾಸಿಕ ಪಿಂಚಣಿ ರೂ.12,000 ರಿಂದ 20,000 ರೂವರೆಗೆ ಯೋಜನೆಯಡಿ ನೀಡಲಾಗುತ್ತಿದೆ.
ಇದಲ್ಲದೆ, ಕ್ರೀಡಾ ಸಚಿವಾಲಯವು ‘ಕ್ರೀಡಾಪಟುಗಳಿಗಾಗಿ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿ (ಪಿಡಿಯುಎನ್ಡಬ್ಲ್ಯುಎಫ್ಎಸ್)’ ಯನ್ನು ಅನುಷ್ಠಾನಗೊಳಿಸಿದ ಬಗ್ಗೆ ಮಾಹಿತಿಯನ್ನು ನೀಡಿದ್ದು, ಇದು ಮಾಜಿ ಕ್ರೀಡಾಪಟುಗಳಾಗಿ ಈಗ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲಿದೆ. ಮಾಜಿ ಕ್ರೀಡಾಪಟುಗಳ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯ ಮಾಡಲಿದೆ. ಈ ಯೋಜನೆಗಳು ದಿವ್ಯಾಂಗರಾದ ಮತ್ತು ದೈಹಿಕವಾಗಿ ಕುಗ್ಗಿ ಹೋದ ಕ್ರೀಡಾಪಟುಗಳಿಗೂ ಅನ್ವಯಿಸುತ್ತದೆ.
This is for the information of all the concerned sportspersons:
Lifelong monthly pension for medal winners in international events under ‘Pension to Meritorious Sportspersons’ scheme. pic.twitter.com/qn6QIRiv0g— Kiren Rijiju (@KirenRijiju) February 10, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.