ನವದೆಹಲಿ: ನಮಾಮಿ ಗಂಗೆ ಕಾರ್ಯಕ್ರಮ (ಎನ್ಜಿಪಿ)ದ ಅಡಿಯಲ್ಲಿ ಕೈಗೊಂಡ ವಿವಿಧ ಮಾಲಿನ್ಯ ತಗ್ಗಿಸುವಿಕೆಯ ಉಪಕ್ರಮಗಳು 2014 ಕ್ಕೆ ಹೋಲಿಸಿದರೆ 2019 ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಂಗಾ ನದಿ ನೀರಿನ ಗುಣಮಟ್ಟವನ್ನು ಸುಧಾರಿಸಿದೆ ಎಂದು ರಾಜ್ಯಸಭೆಗೆ ಸೋಮವಾರ ಕೇಂದ್ರ ಸರ್ಕಾರ ಮಾಹಿತಿಯನ್ನು ನೀಡಿದೆ.
ಕರಗಿದ ಆಮ್ಲಜನಕದ ಮಟ್ಟವು ನದಿಯ ಹರಿವಿನ 27 ಸ್ಥಳಗಳಲ್ಲಿ ಸುಧಾರಿಸಿದೆ, ಜೈವಿಕ ಆಮ್ಲಜನಕದ ಬೇಡಿಕೆ (ಬಿಒಡಿ) ಮಟ್ಟಗಳು ಮತ್ತು ಫೆಯಿಕಲ್ ಕೋಲಿಫಾರ್ಮ್ಗಳು ಕ್ರಮವಾಗಿ 42 ಮತ್ತು 21 ಸ್ಥಳಗಳಲ್ಲಿ ಸುಧಾರಿಸಿದೆ.
ಕೇಂದ್ರ ಜಲಶಕ್ತಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರತ್ತನ್ ಲಾಲ್ ಕಟಾರಿಯಾ ಅವರು ರಾಜ್ಯಸಭೆಗೆ ಈ ಬಗ್ಗೆ ಲಿಖಿತ ಉತ್ತರವನ್ನು ನೀಡಿದ್ದು, “ಈ ಯೋಜನೆಗಳು ಕಾರ್ಯರೂಪಕ್ಕೆ ಬಂದು ಫಲಿತಾಂಶವನ್ನು ನೀಡಲು ಪ್ರಾರಂಭಿಸಿವೆ ಮತ್ತು ಎಲ್ಲಾ ಯೋಜನೆಗಳು ಮುಗಿದ ನಂತರ ಗಂಗಾ ನದಿಯ ನೀರಿನ ಗುಣಮಟ್ಟ ಮತ್ತಷ್ಟು ಸುಧಾರಿಸುತ್ತದೆ” ಎಂದಿದ್ದಾರೆ.
ಸಚಿವರ ಪ್ರಕಾರ, ನದಿ ನೀರಿನ ಆರೋಗ್ಯವನ್ನು ಪ್ರತಿಬಿಂಬಿಸುವ ಆಮ್ಲಜನಕದ ಮಟ್ಟವು ನೋಟಿಫೈ ಮಾಡಿದ ಪ್ರಾಥಮಿಕ ಸ್ನಾನ ನೀರಿ ಗುಣಮಟ್ಟ ವಿಭಾಗದಲ್ಲಿ ಕಂಡು ಬಂದಿದೆ. ಎಲ್ಲಾ ಋತುವಿನಲ್ಲೂ ನದಿಯ ಪರಿಸರ ವ್ಯವಸ್ಥೆ ತೃಪ್ತಿಕರ ರೀತಿಯಲ್ಲಿ ಸುಧಾರಿಸುತ್ತಿದೆ ಮತ್ತು ಗಂಗಾ ತಟದ ಪರಿಸರ ವ್ಯವಸ್ಥೆಯೂ ಸಾಕಷ್ಟು ಸುಧಾರಣೆಯನ್ನು ಕಂಡಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.