ಲಕ್ನೋ: ಉತ್ತರ ಪ್ರದೇಶದ ಎಲ್ಲಾ 70 ಜೈಲುಗಳು 2021ರ ವೇಳೆಗೆ ತಮ್ಮದೇ ಆದ ಆಂತರಿಕ ರೇಡಿಯೊ ಕೇಂದ್ರಗಳನ್ನು ಹೊಂದಲಿದ್ದು, ಜೈಲು ಕೈದಿಗಳಿಂದಲೇ ಇವುಗಳು ನಿರ್ವಹಿಸಲ್ಪಡುತ್ತವೆ.
ಯುಪಿ ಮಹಾನಿರ್ದೇಶಕ (ಜೈಲು ಆಡಳಿತ ಮತ್ತು ಸುಧಾರಣಾ ಸೇವೆಗಳು) ಆನಂದ್ ಕುಮಾರ್ ಅವರು ಇತ್ತೀಚೆಗೆ ಮೀರತ್ ಜಿಲ್ಲಾ ಜೈಲಿನಲ್ಲಿ 26 ನೇ ಆಂತರಿಕ ರೇಡಿಯೋ ಕೇಂದ್ರವನ್ನು ಉದ್ಘಾಟಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ. ಜಿ. ಆನಂದ್ ಕುಮಾರ್, “ಹೆಚ್ಚಿನ ಸಂಖ್ಯೆಯ ಕೈದಿಗಳು ಖಿನ್ನತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಕೆಲವು ಮನೋರಂಜನೆಯನ್ನು ಒದಗಿಸುವು ದು ಒಳ್ಳೆಯದು ಎಂದು ನಾವು ಭಾವಿಸಿದ್ದೇವೆ, ಅದು ಅವರ ಗಮನವನ್ನು ಬೇರೆಡೆಗೆ ತಿರುಗಿಸಲು ಮತ್ತು ಖಿನ್ನತೆಯ ವಿರುದ್ಧ ಸ್ವಲ್ಪ ಮಟ್ಟಿಗೆ ಹೋರಾಡಲು ಸಹಾಯ ಮಾಡುತ್ತದೆ. ನಾವು ರೇಡಿಯೋವನ್ನು ನಿರ್ವಹಣೆ ಮಾಡಲು ಕೈದಿಗಳನ್ನೇ ಬಳಸಿಕೊಳ್ಳಲಿದ್ದೇವೆ” ಎಂದಿದ್ದಾರೆ.
ಕೋರಿಕೆಯ ಮೇರೆಗೆ ಹಾಡುಗಳನ್ನು ಹಾಕುವುದು ಸೇರಿದಂತೆ, ರೇಡಿಯೊ ಜಾಕಿ ಕೈದಿಗಳು ಕಾನೂನು ಮತ್ತು ಮಾನವ ಹಕ್ಕುಗಳ ಮಾಹಿತಿಯನ್ನು ಸಹ ಓದಲಿದ್ದಾರೆ. ವೈಯಕ್ತಿಕ ಕೈದಿಗಳ ನ್ಯಾಯಾಲಯದ ವಿಚಾರಣೆಗಳು ಮತ್ತು ಜೈಲಿನೊಳಗಿನ ಇತರ ಮನೋರಂಜನ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕಟಣೆಗಳನ್ನು ಕೂಡ ರೇಡಿಯೊದಲ್ಲಿ ಹಾಕಲಾಗುವುದು ಎಂದಿದ್ದಾರೆ.
“ನಾವು ಕಾನೂನು ಮತ್ತು ಮಾನವ ಹಕ್ಕುಗಳ ಕುರಿತು ಉಪನ್ಯಾಸಗಳನ್ನು ಸಹ ಆಯೋಜಿಸುತ್ತೇವೆ ಮತ್ತು ಕಾನೂನು ಪರಿಹಾರಗಳನ್ನು ಸೂಚಿಸಬಲ್ಲ ತಜ್ಞರೊಂದಿಗೆ ಇಂಟರ್ಫೇಸ್ ಅನ್ನು ಒದಗಿಸುತ್ತೇವೆ. ಕೆಲವು ಜೈಲುಗಳಲ್ಲಿ, ನಾವು ವೃತ್ತಿಪರ ರೇಡಿಯೊ ಜಾಕಿಗಳ ಸಹಾಯವನ್ನು ಪಡೆಯಲಿದ್ದೇವೆ ಮತ್ತು ಆಸಕ್ತ ಕೈದಿಗಳಿಗೆ ತರಬೇತಿ ನೀಡಿ ಅವರ ಕೌಶಲ್ಯ ವೃದ್ಧಿಸುತ್ತೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.