ಬೆಂಗಳೂರು: ರಾಮ ಜನ್ಮಭೂಮಿ ವಿವಾದ ಬಗೆಹರಿಯುವವರೆಗೂ ತನ್ನ ಕೂದಲನ್ನು ಕತ್ತರಿಸುವುದಿಲ್ಲ ಮತ್ತು ಗಡ್ಡವನ್ನು ಬೋಳಿಸುವುದಿಲ್ಲ ಎಂದು ಪ್ರತಿಜ್ಞಾ ಮಾಡಿದ್ದ 65 ವರ್ಷದ ಬೆಂಗಳೂರು ವ್ಯಕ್ತಿಯೊಬ್ಬರು ಬರೋಬ್ಬರಿ 27 ವರ್ಷಗಳ ಬಳಿಕ ತಮ್ಮ ತಲೆ ಕೂದಲು, ಗಡ್ಡ ತೆಗೆದಿದ್ದಾರೆ.
ಆದಿನಾರಾಯಣ ಎಂಬ ಹೆಸರಿನ ಇವರು ಬೆಂಗಳೂರಿನ ರಾಜಾಜಿನಗರ ಪ್ರದೇಶದ ಲಕ್ಷ್ಮೀನಾರಾಯಣಪುರ ಲೇ ಔಟ್ನಲ್ಲಿ ‘ಆರ್ಎಸ್ಎಸ್ ಹೇರ್ ಸ್ಟೈಲ್’ ಹೆಸರಿನ ಸಲೂನ್ ನಡೆಸುತ್ತಿದ್ದಾರೆ.
ಅದಿನಾರಾಯಣ ಅಯೋಧ್ಯೆಗೆ ಆಗಾಗೆ ಭೇಟಿ ನೀಡುತ್ತಿರುತ್ತಾರೆ. ಅವರು 1992ರಲ್ಲಿ ಕರ್ನಾಟಕದ ತಂಡದ ಭಾಗವಾಗಿ ಈಗಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರೊಂದಿಗೆ ಅಲ್ಲಿಗೆ ಹೋಗಿದ್ದರು. “ನಾನು 15 ದಿನಗಳ ಕಾಲ ಅಯೋಧ್ಯೆಯಲ್ಲಿದ್ದೆ, ನನ್ನ ಅಂಗಡಿಯನ್ನು ಮುಚ್ಚಿ ಹೋಗಿದ್ದೆ”ಎಂದು ಅವರು ಹೇಳುತ್ತಾರೆ.
ರಾಮ ಮಂದಿರ ವಿವಾದ ಬಗೆಹರಿಯುವವರೆಗೂ ಕೂದಲು ಕತ್ತರಿಸುವುದಿಲ್ಲ ಎಂದು ಅವರು 27 ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದರು.
“ನಾನು ನನ್ನ ಗ್ರಾಹಕರ ಕೂದಲನ್ನು ಟ್ರಿಮ್ ಮಾಡುತ್ತೇನೆ, ಆದರೆ ನನ್ನ ಕೂದಲು ಕತ್ತರಿಸಬೇಕು ಎಂದು ಯಾವತ್ತೂ ನನಗೆ ಅನಿಸಿಲ್ಲ” ಎಂದು ಅವರು ಹೇಳುತ್ತಾರೆ. ನಾನು ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮನ ಹೆಸರಿನಲ್ಲಿ ಕೊನೆಯ ಬಾರಿಗೆ ನನ್ನ ಕೂದಲನ್ನು ಕಟ್ ಮಾಡಿದ್ದೇನೆ ಎಂದಿದ್ದಾರೆ.
ಸುಮಾರು ಮೂರು ದಶಕಗಳ ನಂತರ, ನವೆಂಬರ್ 2019ರಲ್ಲಿ ಮಂದಿರ ವಿವಾದವನ್ನು ಸುಪ್ರೀಂಕೋರ್ಟ್ ಅಂತಿಮವಾಗಿ ಬಗೆಹರಿಸಿದ ಬಳಿಕ ಅಯೋಧ್ಯೆಗೆ ಭೇಟಿ ನೀಡಿದ ಇವರು ತಮ್ಮ ಕೂದಲನ್ನು ಮತ್ತು ಗಡ್ಡವನ್ನು ಕತ್ತರಿಸಿಕೊಂಡರು.
ಮಾತ್ರವಲ್ಲ, ಅಲ್ಲಿ ಮತ್ತೊಂದು ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದಾರೆ. ಅದೇನೆಂದರೆ ರಾಮ ಮಂದಿರ ನಿರ್ಮಾಣವಾಗುವವರೆಗೆ ಮತ್ತೆ ಕೂದಲು ಮತ್ತು ಗಡ್ಡವನ್ನು ತೆಗೆಯುವುದಿಲ್ಲ ಎಂದು. ಭವ್ಯ ಮಂದಿರ ತಲೆ ಎತ್ತುವವರೆಗೆ ಅವರ ಈ ಶಪಥ ಮುಂದುವರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.