ನವದೆಹಲಿ: ಸೋಮವಾರ ಬೆಳಿಗ್ಗೆ ಉಡಾವಣೆಗೊಂಡ ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಸೌರ ಆರ್ಬಿಟರ್ ಮಿಷನ್ “skin of the Sun”ನ ಅಡಿಯಲ್ಲಿ ಮೇಲ್ವಿಚಾರಣೆ ನಡೆಸಿದ ತಂಡದಲ್ಲಿ ಕರ್ನಾಟಕದ ಚಿಕ್ಕಮಗಳೂರು ಎಂಜಿನಿಯರ್ ವಿದ್ಯಾರ್ಥಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಗೋಟಿನ್ಜನ್ನ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ಸೋಲಾರ್ ಸಿಸ್ಟಮ್ ರಿಸರ್ಚ್ ತಂಡದ ಪ್ರಮುಖ ಸದಸ್ಯರಾಗಿರುವ ಸಂದೀಪ್ ರಾಮನಾಥ್ ಅವರು, ಮಹತ್ವಾಕಾಂಕ್ಷೆಯ ಸೌರ ಕಾರ್ಯಾಚರಣೆಯಲ್ಲಿರುವ ಐದು ರಿಮೋಟ್ ಸಂವೇದನಾ ಸಾಧನಗಳಲ್ಲಿ ಒಂದಾದ ಪಿಹೆಚ್ಐ (ಪೋಲರಿಮೆಟ್ರಿಕ್ ಮತ್ತು ಹೆಲಿಯೊಸಿಸಮಿಕ್ ಇಮೇಜರ್) ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಸೌರ ಮೇಲ್ಮೈಯನ್ನು ಚಿತ್ರಿಸಲು ಮತ್ತು ಅದರ ಸುತ್ತಮುತ್ತಲಿನ ನಕ್ಷತ್ರದ ಗುಣ ಲಕ್ಷಣಗಳನ್ನು ಅಳೆಯಲು ಅತ್ಯಾಧುನಿಕ ಉಪಕರಣಗಳೊಂದಿಗೆ ಶಸ್ತ್ರಸಜ್ಜಿತವಾದ ಇಎಸ್ಎ ಮತ್ತು ನಾಸಾದ ಹೊಸ ಮಿಷನ್, ಸೂರ್ಯನ ಚುಕ್ಕೆಗಳಿಗೆ ಸಂಬಂಧಿಸಿದ ರಹಸ್ಯಗಳನ್ನು ಬಿಚ್ಚಿಡಲು ಸಹಾಯ ಮಾಡಲು ಸೂರ್ಯನ ಧ್ರುವ ಪ್ರದೇಶಗಳನ್ನು ನೋಡುವ ಮೊದಲನೆಯ ಮಿಷನ್ ಆಗಿದೆ.
ಅದರ ವಿಶಿಷ್ಟ ಅಂಡಾಕಾರದ ಕಕ್ಷೆಯಿಂದ, ತನಿಖಾ ಉಪಗ್ರಹವು ಸೂರ್ಯನ ಹಿಂದೆಂದೂ ನೋಡಿರದ ಕೆಲವು ಪ್ರದೇಶಗಳನ್ನು ವೀಕ್ಷಿಸಲಿದೆ ಮತ್ತು ಸೌರ ಮಾರುತದ ರಚನೆಯಂತಹ ಅದರ ಹೆಚ್ಚು ತಿಳಿದಿರದ ಆಯಾಮದ ಚಟುವಟಿಕೆಯ ಅಂಶಗಳ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತದೆ.
“ಸೌರ ಆರ್ಬಿಟರ್ ಪ್ರಸ್ತುತ ಸೂರ್ಯನ ಸುತ್ತ ಕಕ್ಷೆಯಲ್ಲಿರುವ ನಾಸಾದ ಪಾರ್ಕರ್ ಸೌರ ತನಿಖೆಗೆ ಪೂರಕವಾಗಲಿದೆ” ಎಂದು ಉಡಾವಣೆಗೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಪ್ರಸ್ತುತ ಇರುವ ರಾಮನಾಥ್ ಡಿಎಚ್ಗೆ ತಿಳಿಸಿದರು.
ರಾಮನಾಥ್ ತನ್ನ ಆರಂಭಿಕ ಶಿಕ್ಷಣವನ್ನು ಜಗದೀಶ್ವರ ಇಂಗ್ಲಿಷ್ ಮಧ್ಯಮ ಶಾಲೆ ಮತ್ತು ಬಾಳೆಹೊನ್ನೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಬಳಿಕ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪರಿಣತಿಯನ್ನು ಪಡೆದುಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.