ಜೈಪುರ: ಅಕ್ಷಯ ಪಾತ್ರ ಫೌಂಡೇಶನ್ ಸಹಯೋಗದೊಂದಿಗೆ ಹರೇ ಕೃಷ್ಣ ಮಿಷನ್ ಜೈಪುರದಲ್ಲಿ ಆಯೋಜಿಸಿದ್ದ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆಯಲ್ಲಿ 16 ವರ್ಷದ ಮುಸ್ಲಿಂ ಹುಡುಗ ಜಯಶಾಲಿಯಾಗಿದ್ದಾನೆ. ಎರಡು ಸುತ್ತಿನ ರಸಪ್ರಶ್ನೆ ಸ್ಪರ್ಧೆಯು ಆರು ತಿಂಗಳಿಗೂ ಹೆಚ್ಚು ಕಾಲ ನಡೆದಿದ್ದು, ಇದರಲ್ಲಿ 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 9 ನೇ ತರಗತಿಯ ವಿದ್ಯಾರ್ಥಿ ಅಬ್ದುಲ್ ಕಾಝ್ಜಿ ಗೀತೆಯ ಬಗೆಗಿನ ತನ್ನ ಅಪ್ರತಿಮ ಜ್ಞಾನದಿಂದ ತೀರ್ಪುಗಾರರ ಮನಗೆದ್ದಿದ್ದಾನೆ.
ಕಾಝ್ಜಿ ಸಂಸ್ಕೃತ ಸ್ತೋತ್ರಗಳು ಮತ್ತು ಪದ್ಯಗಳ ಬಗೆಗಿನ ತನ್ನ ಅಪಾರ ಜ್ಞಾನವನ್ನು ಪ್ರದರ್ಶಿಸಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾನೆ. ಈ ವರ್ಷ, ‘ಶ್ರೀ ಕೃಷ್ಣನನ್ನು ತಿಳಿದುಕೊಳ್ಳುವುದು’ ಎಂಬ ವಿಷಯದ ಮೇಲೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜನೆಗೊಳಿಸಲಾಗಿತ್ತು.
‘ಲಿಟಲ್ ಕೃಷ್ಣ’ ಎಂಬ ಕಾರ್ಟೂನ್ ಸರಣಿಯನ್ನು ನೋಡಿ ಕಾಝ್ಜಿ ಕೃಷ್ಣನ ಬಗ್ಗೆ ಒಲವು ಬೆಳೆಸಿಕೊಂಡಿದ್ದಾನೆ ಮತ್ತು ಜೀವನದ ಎಲ್ಲಾ ಸಮಸ್ಯೆಗಳನ್ನು ಸಂಪೂರ್ಣವಾಗಿ ಸುಲಭವಾಗಿ ಪರಿಹರಿಸಬಲ್ಲ ಕೃಷ್ಣ ಎಷ್ಟು ಪ್ರತಿಭಾವಂತ ಎಂಬ ಕಲ್ಪನೆಯನ್ನು ಆತ ಬೆಳೆಸಿಕೊಂಡ. ಇದು ಕೃಷ್ಣನ ಬಗೆಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಆತನಿಗೆ ಸಹಾಯ ಮಾಡಿತು. ಅದರ ನಂತರ ಆತ ಕೃಷ್ಣ ಕುರಿತು ಮಾತುರಾ ನಾಥ್ ಬರೆದ ಪುಸ್ತಕವನ್ನು ಓದಲಾರಂಭಿಸಿದ.
ಡಕಿಂಗ್ ಹಿರಿಯ ಮಾಧ್ಯಮಿಕ ಶಾಲೆಯ ಈ ವಿದ್ಯಾರ್ಥಿಗೆ ಭಾನುವಾರ ರಾಜಸ್ಥಾನದ ಸಚಿವ ಪ್ರತಾಪ್ ಖಚ್ರಿಯವಾಸ್ ಬಹುಮಾನ ನೀಡಲಿದ್ದಾರೆ.
“ನನ್ನ ತಂದೆ ನನ್ನ ಹೃದಯವನ್ನು ಅನುಸರಿಸಲು ನನಗೆ ಅವಕಾಶ ಮಾಡಿಕೊಡುತ್ತಾರೆ ಮತ್ತು ಯಾವುದೇ ನಂಬಿಕೆ ಮತ್ತು ಅಭ್ಯಾಸದ ಬಗ್ಗೆ ಯಾವುದೇ ನಿರ್ಬಂಧವನ್ನು ನನಗೆ ಅವರು ವಿಧಿಸಿಲ್ಲ. ಆಧ್ಯಾತ್ಮಿಕತೆಯ ವೈವಿಧ್ಯಮಯ ಅಂಶಗಳನ್ನು ಅಧ್ಯಯನ ಮಾಡಲು ನಾನು ಅವರ ಮೊಬೈಲ್ ಅನ್ನು ಬಳಸುತ್ತಿದ್ದೇನೆ” ಎಂದು ಕಾಝ್ಜಿ ಹೇಳುತ್ತಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.