ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಶುಕ್ರವಾರ ಎಎಪಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಶಹೀನ್ ಬಾಗ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯೂ ಎರಡೂ ಪಕ್ಷಗಳ ಸಹಕಾರಕೂಟವಾಗಿದೆ ಎಂದು ಹೇಳಿದ್ದಾರೆ.
‘ಜಿನ್ನಾ ವಾಲಿ ಆಜಾದಿ’ ಯಂತಹ ಘೋಷಣೆಗಳನ್ನು ಪ್ರತಿಭಟನಾಕಾರರು ಎತ್ತುತ್ತಿದ್ದಾರೆ, ಚುನಾವಣೆಯಲ್ಲಿ ಜನರಿಗೆ ತಮಗೆ ಬೇಕಾದುದನ್ನು ನಿರ್ಧರಿಸುವ ಅವಕಾಶವಿದೆ. ನಿಮಗೆ “ಜಿನ್ನಾ ವಾಲಿ ಆಜಾದಿ’ ಬೇಕೋ ಅಥವಾ ‘ಭಾರತ್ ಮಾತಾ ಕಿ ಜೈ” ಬೇಕೋ ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.
ದೆಹಲಿ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಾವ್ದೇಕರ್, “ಶಹೀನ್ ಬಾಗ್ ಪ್ರತಿಭಟನೆಯು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಜೊತೆ ಹೊಂದಾಣಿಕೆ ಎಂದು ಸಿಎಂ ಮತ್ತು ಉಪ ಸಿಎಂ ಅವರು ಹೇಳಿಕೆ ಕೇಳಿದರೆ ಸ್ಪಷ್ಟವಾಗುತ್ತದೆ. ಜನರನ್ನು ದಾರಿ ತಪ್ಪಿಸುವ ಪ್ರಯತ್ನವಿದು. ‘ಜಿನ್ನಾ ವಾಲಿ ಆಜಾದಿ’ಯಂತಹ ಘೋಷಣೆಗಳನ್ನು ಇಲ್ಲಿಂದ ಮೊಳಗಿಸಲಾಗುತ್ತಿದೆ. ಜನರು ತಮಗೆ ಬೇಕಾದುದನ್ನು ನಿರ್ಧರಿಸುತ್ತಾರೆ, ಜಿನ್ನಾ ವಾಲಿ ಆಜಾದಿಯೋ ಅಥವಾ ಭಾರತ್ ಮಾತಾ ಕಿ ಜೈ ಬೇಕೋ ಎಂದು ಜನರು ನಿರ್ಧರಿಸುತ್ತಾರೆ” ಎಂದಿದ್ದಾರೆ.
ಶಹೀನ್ ಬಾಗ್ನಲ್ಲಿ ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಸಿಎಂ ಮನೀಶ್ ಸಿಸೋಡಿಯಾ ಬೆಂಬಲ ನೀಡಿದ್ದಾರೆ.
ಈ ಬಗ್ಗೆ ಕಿಡಿಕಾರಿದ ಜಾವ್ಡೇಕರ್, “ಸಿಎಎಯಿಂದ ಯಾರೊಬ್ಬರೂ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಈ ಕಾನೂನು ಪಾಕಿಸ್ಥಾನ, ಬಾಂಗ್ಲಾದೇಶದಿಂದ ಬಂದವರಿಗೆ ಮಾತ್ರ ಅನ್ವಯವಾಗುತ್ತದೆ. ಈ ಜನರನ್ನು ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ಸಾಕಷ್ಟು ಹಿಂಸಿಸಲಾಗಿದೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.