ಬೆಂಗಳೂರು: ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಹೊಸ ಕಟ್ಟಡದ ಮೊದಲ ಹಂತವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಶರದ್ ಅರವಿಂದ್ ಬೊಬ್ಡೆ ಅವರು ಶನಿವಾರ ಉದ್ಘಾಟಿಸಿದರು.
ಹೊಸ ಕಟ್ಟಡವು ಮೂರು ಮಹಡಿಗಳನ್ನು ಹೊಂದಿದೆ. ಜೊತೆಗೆ, ನೆಲ ಮಹಡಿ ಮತ್ತು ಎರಡು ನೆಲಮಾಳಿಗೆಗಳನ್ನು ಹೊಂದಿದೆ.
319 ಆಸನಗಳ ಬಹುಪಯೋಗಿ ಸಭಾಂಗಣವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉದ್ಘಾಟಿಸಿದರೆ, ಕರ್ನಾಟಕದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ನ್ಯಾಯಮೂರ್ತಿ ಬೊಬ್ಬೆ ಅವರನ್ನು ಸನ್ಮಾನಿಸಿದರು.
ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷ ಮತ್ತು ಕರ್ನಾಟಕದ ಹೈಕೋರ್ಟ್ನ ನ್ಯಾಯಾಧೀಶರಾದ ನ್ಯಾಯಮೂರ್ತಿ ರವಿ ಮಾಲಿಮಠ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಅಕಾಡೆಮಿ ಇದುವರೆಗೆ 4000 ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ನೀಡಿದೆ ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿ ಶ್ರೇಷ್ಠತೆಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ನಿರ್ಮಿಸಲಾದ ಈ ಕಟ್ಟಡವು ಕೆಳಮತ್ತು ಮೇಲಿನ ಬೇಸ್ಮೆಂಟ್ ಅಲ್ಲಿ ಪಾರ್ಕಿಂಗ್ ಹೊಂದಿದ್ದು, 44 ಕಾರುಗಳು ಮತ್ತು 124 ದ್ವಿಚಕ್ರ ವಾಹನಗಳ ಸಾಮರ್ಥ್ಯ ಹೊಂದಿದೆ. ನೆಲಮಹಡಿಯಲ್ಲಿ 319 ಆಸನಗಳ ಬಹುಪಯೋಗಿ ಹವಾನಿಯಂತ್ರಿತ ಸಭಾಂಗಣ, ಉಪನ್ಯಾಸ ಸಭಾಂಗಣವಿದೆ, 84 ಆಸನಗಳ ಎರಡು ಉಪನ್ಯಾಸ ಸಭಾಂಗಣಗಳು ಇದೆ, ತಲಾ 40 ಆಸನಗಳನ್ನು ಇದು ಹೊಂದಿದೆ ಮತ್ತು ವಿಐಪಿ ಲೌಂಜ್ ಇದೆ. ಮೊದಲ ಮಹಡಿಯಲ್ಲಿ 84 ಆಸನಗಳೊಂದಿಗೆ ಉಪನ್ಯಾಸ ಸಭಾಂಗಣ, ತಲಾ 40 ಆಸನಗಳೊಂದಿಗೆ ಎರಡು ಉಪನ್ಯಾಸ ಸಭಾಂಗಣಗಳು, ವಿಐಪಿ ಕೋಣೆ, ಎರಡು ಚರ್ಚಾ ಕೊಠಡಿಗಳು ಮತ್ತು ಅಕಾಡೆಮಿಯ ಸಿಬ್ಬಂದಿಗೆ ಆಡಳಿತ ಕಚೇರಿ ಇದೆ.
ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಕಾಮಗಾರಿಯನ್ನು ವಿಸ್ತಾರವಾದ 2.2 ಎಕರೆ ಜಾಗದಲ್ಲಿ ನಡೆಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಇದನ್ನು ಕಾರ್ಯಗತಗೊಳಿಸುತ್ತಿದೆ. ಹಂತ -1 ಮತ್ತು ಹಂತ -2 ಸೇರಿದಂತೆ ಯೋಜನೆಯ ಒಟ್ಟು ವೆಚ್ಚ ಸುಮಾರು 96.02 ಕೋಟಿ ರೂಪಾಯಿ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.