ನವದೆಹಲಿ: ಶೀಘ್ರದಲ್ಲೇ ರಾಜ್ಯಸಭಾ ಟಿವಿ (ಆರ್ಎಸ್ಟಿವಿ) ಮತ್ತು ಲೋಕಸಭಾ ಟಿವಿ (ಎಲ್ಎಸ್ಟಿವಿ) ವಿಲೀನಗೊಳ್ಳಲಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಬಗೆಗಿನ ಸುದ್ದಿಗಳನ್ನು ಪ್ರತ್ಯೇಕವಾಗಿ ನೀಡುವ ಈ ವಾಹಿನಿಗಳು ಇನ್ನು ಮುಂದೆ ಒಟ್ಟಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ. ಇವರೆಡರಲ್ಲಿ ಅಂತಿಮವಾಗಿ ಯಾವ ವಾಹಿನಿ ತನ್ನ ಗುರುತು ಉಳಿಸಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ರಾಜ್ಯಸಭಾ ಟಿವಿಯ ಬ್ರಾಂಡ್ ಮೌಲ್ಯ ಉತ್ತಮವಾಗಿದೆ. ಆದರೆ ಲೋಕಸಭಾ ಟಿವಿಯು ಆರ್ಥಿಕ ಮತ್ತು ಆಡಳಿತಾತ್ಮಕ ಸಮಸ್ಯೆಯನ್ನು ಎದುರಿಸುತ್ತಿದೆ.
ಪ್ರಸಾರ ಭಾರತಿ ಅಧ್ಯಕ್ಷ ಎ. ಸೂರ್ಯ ಪ್ರಕಾಶ್ ನೇತೃತ್ವದ ಆರು ಸದಸ್ಯರ ಸಮಿತಿಯು ವಿಲೀನವನ್ನು ಕೈಗೊಳ್ಳಲು ವಿಭಿನ್ನ ಆಯ್ಕೆಗಳನ್ನು ಎದುರು ನೋಡುತ್ತಿದೆ, ಇದು ಪ್ರಸಾರ ಮತ್ತು ಕಾರ್ಯಕ್ರಮಗಳಲ್ಲಿ ಉತ್ತಮ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲಿದೆ. ಈ ಮೂಲಕ ಹಣವನ್ನೂ ಉಳಿಸಲಿದೆ.
ಸಮಿತಿಯು ಈ ಬಗ್ಗೆ ಈಗಾಗಲೇ ಏಳು ಸಭೆಗಳನ್ನು ನಡೆಸಿದೆ, ಸಮಿತಿಯಲ್ಲಿ 12 ಸಂಸದರೂ ಕೂಡ ಇದ್ದಾರೆ. ಸೂರ್ಯ ಪ್ರಕಾಶ್ ಮತ್ತು ಇತರ ಸದಸ್ಯರು ಪ್ರಸ್ತುತ ಎರಡು ಚಾನೆಲ್ಗಳು ಬಳಸುತ್ತಿರುವ ವಿಭಿನ್ನ ತಾಣಗಳು ಮತ್ತು ಸೌಲಭ್ಯಗಳಿಗೆ ಭೇಟಿ ನೀಡಿದ್ದಾರೆ.
ಲೋಕಸಭಾ ಟಿವಿ ಮಹಾದೇಬ್ ರಸ್ತೆಯ ಲುಟಿಯನ್ಸ್ ಬಂಗಲೆ ಮತ್ತು ಸಂಸತ್ತಿನ ಗ್ರಂಥಾಲಯ ಕಟ್ಟಡದ ಒಂದು ಭಾಗ ಸೇರಿದಂತೆ ಕೆಲವು ಸ್ಥಳಗಳಿಂದ ಕಾರ್ಯನಿರ್ವಹಿಸುತ್ತಿದೆ.
ರಾಜ್ಯಸಭಾ ಟಿವಿಯು ಎನ್ಡಿಎಂಸಿ ವಾಣಿಜ್ಯ ಸಂಕೀರ್ಣದಲ್ಲಿ ದೊಡ್ಡ ಕೇಂದ್ರವನ್ನು ಹೊಂದಿದ್ದು, ಇದಕ್ಕಾಗಿ ಒಂದು ವರ್ಷದಲ್ಲಿ 15 ರಿಂದ 16 ಕೋಟಿ ರೂ ವ್ಯಯಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.