ಚೆನ್ನೈ: ಭಾರತದಲ್ಲಿ ಇಸ್ಲಾಂ ರಾಷ್ಟ್ರವನ್ನು ಸ್ಥಾಪನೆ ಮಾಡಬೇಕು ಎಂಬ ಪಣತೊಟ್ಟು ಕಾರ್ಯೋನ್ಮುಖರಾಗಿದ್ದ ತಮಿಳುನಾಡಿನ ಶಂಕಿತ 11 ಮಂದಿ ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಚೆನ್ನೈನ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ಶೀಟ್ ದಾಖಲಿಸಿದೆ.
ಐಪಿಸಿ ಮತ್ತು ಯುಎಪಿಎಯ ವಿವಿಧ ವಿಭಾಗಗಳ ಅಡಿಯಲ್ಲಿ ಹಸನ್ ಅಲಿ, ಹ್ಯಾರಿಸ್ ಮೊಹಮ್ಮದ್, ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ಶೇಕ್ ಮೈಥೀನ್, ಮೀರನ್ ಘನಿ, ಗುಲಾಮ್ ನಬಿ ಅಸಥ್, ಅಹ್ಮದ್ ಅಜರುದ್ದೀನ್, ತೌಫಿಕ್ ಅಹ್ಮದ್, ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ಅಫ್ಜಾರ್ ಮತ್ತು ಫಾರೂಕ್ ವಿರುದ್ಧ ಚಾರ್ಜ್ಶೀಟ್ ದಾಖಲಿಸಲಾಗಿದೆ.
ಯುಎಇಯಲ್ಲಿದ್ದ ಸಂದರ್ಭದಲ್ಲಿ ಈ ಆರೋಪಿಗಳು ಮತ್ತು ಅವರ ಸಹಚರರು ಭಾರತದ ವಿರುದ್ಧ ಪಿತೂರಿ ನಡೆಸಿದ್ದಾರೆ. ಇವರ ವಿರುದ್ಧದ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ತಮಿಳುನಾಡಿನ ಹದಿನಾರು ಆರೋಪಿಗಳ ವಿರುದ್ಧ 2019ರ ಜುಲೈ 9 ರಂದು ಎನ್ಐಎ ಈ ಪ್ರಕರಣವನ್ನು ದಾಖಲಿಸಿದೆ ಎಂದು ಎನ್ಐಎ ಮಾಧ್ಯಮಕ್ಕೆ ತಿಳಿಸಿದೆ. ಹಿಂಸಾತ್ಮಕ ಜಿಹಾದ್ ಮೂಲಕ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಉದ್ದೇಶದಿಂದ ಧಾರ್ಮಿಕ ತರಗತಿಗಳನ್ನು ಇವರು ನಡೆಸುತ್ತಿದ್ದರು ಮತ್ತು ಭಾರತದಲ್ಲಿ ತಮ್ಮ ಚಟುವಟಿಕೆಗಳನ್ನು ನಡೆಸಲು ಅವರು ‘ಅನ್ಸರುಲ್ಲಾ’ ಎಂಬ ಭಯೋತ್ಪಾದಕ ಘಟಕವನ್ನು ರಚಿಸಿದ್ದರು ಎನ್ನಲಾಗಿದೆ.
ಹಿಂಸಾತ್ಮಕ ಜಿಹಾದ್ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಧಾರ್ಮಿಕ ತರಗತಿಗಳು ಮತ್ತು ಸಭೆಗಳನ್ನು ರಹಸ್ಯವಾಗಿ ನಡೆಸಿದ್ದಕ್ಕಾಗಿ ಈ ಪ್ರಕರಣದಲ್ಲಿ ಹದಿನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇವರುಗಳನ್ನು 2019 ರ ಜುಲೈನಲ್ಲಿ ಯುಎಇಯಿಂದ ಗಡಿಪಾರು ಮಾಡಿದ ಮೇಲೆ ಬಂಧಿಸಲಾಯಿತು. ಇತರ 2 ಜನರನ್ನು 2019 ರ ಜುಲೈ ಮಧ್ಯದಲ್ಲಿ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ಬಂಧಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.