ನವದೆಹಲಿ: ಜೆಎನ್ಯುನಲ್ಲಿ ಮುಸುಕುಧಾರಿ ವ್ಯಕ್ತಿಗಳು ನಡೆಸಿದ ದಾಂಧಲೆಯನ್ನು ವಿರೋಧಿಸಿ ಮುಂಬಯಿಯ ಗೇಟ್ ವೇಯಲ್ಲಿ ಕೆಲವರು ಪ್ರತಿಭಟನೆಯನ್ನು ನಡೆಸುತ್ತಿದ್ದ ವೇಳೆ ‘ಫ್ರೀ ಕಾಶ್ಮೀರ್’ ಎಂಬ ಫಲಕಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದ್ದಾರೆ. ಮಾತ್ರವಲ್ಲ, ಆಜಾದಿ ಘೋಷಣೆಗಳೂ ಕೇಳಿ ಬಂದಿವೆ.
ಮುಂಬಯಿ ಯೂನಿವರ್ಸಿಟಿ ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಲ್ ಸೈನ್ಸ್ (TISS) ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ಗೇಟ್ ವೇ ಆಫ್ ಇಂಡಿಯಾ ಸಮೀಪದ ತಾಜ್ ಮಹಲ್ ಪ್ಯಾಲೇಸ್ ಬಳಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಆದರೆ ಈ ಪ್ರತಿಭಟನೆಯ ವೇಳೆ ಪ್ರದರ್ಶಿಸಲಾದ ಫಲಕಗಳು, ಕೂಗಲಾದ ಘೋಷಣೆಗಳು ಇವರು ಜೆಎನ್ಯು ದಾಂಧಲೆ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ ಎಂಬುದನ್ನು ಸೂಚಿಸಿವೆ.
ಕಾಶ್ಮೀರವನ್ನು ಸ್ವತಂತ್ರಗೊಳಿಸಿ, ಆಜಾದಿ ಕೊಡಿ ಎಂಬಿತ್ಯಾದಿ ಘೋಷಣೆಗಳು ಇಲ್ಲಿ ಮೊಳಗಿವೆ. ಅಂದರೆ ಈ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ‘ತುಕ್ಡೇ ತುಕ್ಡೇ’ ಗ್ಯಾಂಗ್ ಹೈಜಾಕ್ ಮಾಡಿದೆ ಎಂಬುದು ಸ್ಪಷ್ಟವಾಗಿದೆ.
ಕೆಲ ದಿನಗಳ ಹಿಂದೆ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲೂ ಹಿಂದೂಫೋಬಿಯಾವನ್ನು ಹರಡುವಂತಹ ಸಂದೇಶಗಳನ್ನು ಹರಿಬಿಡಲಾಗಿದೆ. ಹಿಂದೂ ಓಂ ಸಂಕೇತವನ್ನು ನಾಝಿ ಸಂಕೇತದಂತೆ ತಿರುಚಿ ಕೆಟ್ಟ ಸಂದೇಶಗಳನ್ನು ರವಾನಿಸಲಾಗಿತ್ತು. ‘ಹಿಂದುವೋಂ ಸೆ ಆಜಾದಿ’, ‘ಆಜಾದಿ ಚೀನ್ ಕೆ ಲೇಂಗೆ’ ಎಂಬಿತ್ಯಾದಿ ಘೋಷಣೆಗಳನ್ನು ಹಾಕಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.