ಡೆಹ್ರಾಡೂನ್: ಬದ್ರಿನಾಥ್-ಕೇದಾರನಾಥ ದೇವಾಲಯ ಸಮಿತಿ ಶೀಘ್ರದಲ್ಲೇ ಕರ್ನಾಟಕದಲ್ಲಿ ‘ಚಂದನ ವಾಟಿಕ’ವನ್ನು ಸ್ಥಾಪನೆ ಮಾಡಲಿದೆ. ಇದಕ್ಕಾಗಿ ಕರ್ನಾಟಕದ ಜಾಗವನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ ಈಗಾಗಲೇ ಶ್ರೀಗಂಧದ ಗಿಡಗಳನ್ನು ಈ ಜಾಗದಲ್ಲಿ ನೆಡಲಾಗಿದೆ.
ಬದ್ರಿ-ಕೇದಾರನಾಥ ದೇವಸ್ಥಾನದ ಪೂಜೆಯಲ್ಲಿ ಶ್ರೀಗಂಧಕ್ಕೆ ವಿಶೇಷ ಮಹತ್ವವಿದೆ. ಎರಡು ಧಾಮಗಳು ವರ್ಷಕ್ಕೆ ಎರಡು ಕ್ವಿಂಟಾಲ್ ಶ್ರೀಗಂಧವನ್ನು ವ್ಯಯಿಸುತ್ತವೆ. ಸ್ವಲ್ಪ ಸಮಯದಿಂದ ಬದ್ರಿನಾಥ್-ಕೇದಾರನಾಥ ದೇವಾಲಯ ಸಮಿತಿಯು ಶ್ರೀಗಂಧವನ್ನು ಬೆಳೆಸುವಲ್ಲಿ ತೊಂದರೆಯನ್ನು ಅನುಭವಿಸುತ್ತಿವೆ.
ಅಗತ್ಯವಿರುವ ಗುಣಮಟ್ಟಕ್ಕೆ ಅನುಗುಣವಾಗಿ ಅಲ್ಲಿ ಶ್ರೀಗಂಧ ಸಿಗುತ್ತಿಲ್ಲ. ಕಳೆದ ಬಾರಿ ಉದ್ಯಮಿ ಮುಖೇಶ್ ಅಂಬಾನಿ ಬದ್ರಿನಾಥಗೆ ಭೇಟಿ ನೀಡಿದ್ದಾಗ, ಕರ್ನಾಟಕದಲ್ಲಿ ಚಂದನ್ ವಾಟಿಕಾವನ್ನು ಸ್ಥಾಪಿಸಲು ಜಾಗವನ್ನು ಹುಡುಕುವಂತೆ ದೇವಾಲಯ ಸಮಿತಿಯನ್ನು ಕೇಳಿಕೊಂಡಿದ್ದರು.
ಅಲ್ಲದೇ ಈ ಸಮಿತಿಗೆ ಬದ್ರಿಶ್ ಧಿರುಭಾಯ್ ಅಂಬಾನಿ ಚಂದನ್ ವಾಟಿಕಾ ಎಂದು ಹೆಸರಿಸಲು ಪ್ರಸ್ತಾಪ ಮಾಡಿಕೊಂಡಿದ್ದರು. ಇದರಿಂದಾಗಿ ಬದ್ರಿನಾಥ್ ದೇವಾಲಯ ಸಮಿತಿಯ ಅಧ್ಯಕ್ಷ ಮೋಹನ್ ಪ್ರಸಾದ್ ಥಪ್ಲಿಯಾಲ್, ಮುಖ್ಯ ಕಾರ್ಯನಿರ್ವಾಹಕ ಬಿ.ಡಿ.ಸಿಂಗ್ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ಅನಿಲ್ ಧ್ಯಾನಿ ಅವರು ಭೂಮಿ ಹುಡುಕಲು ಕರ್ನಾಟಕಕ್ಕೆ ಆಗಮಿಸಿದ್ದರು.
ಅನೇಕ ಸ್ಥಳಗಳಲ್ಲಿ ಜಾಗವನ್ನು ನೋಡಿದ ನಂತರ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಜಾಗವನ್ನು ಗೊತ್ತುಪಡಿಸಲಾಗಿದೆ. ನಾಲ್ಕು ಎಕರೆ ಪ್ರದೇಶದಲ್ಲಿ ಹರಡಿರುವ ಈ ಭೂಮಿಯಲ್ಲಿ 2400 ಶ್ರೀಗಂಧದ ಗಿಡಗಳಿವೆ. ಸಮಿತಿಯು ಜಮೀನಿನ ಮಾಲೀಕರೊಂದಿಗೆ ಮಾತನಾಡಿದಾಗ ಜಾಗವನ್ನು ನೀಡಲು ಅವರು ಸಂತೋಷದಿಂದ ಒಪ್ಪಿಕೊಂಡರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.