ನವದೆಹಲಿ: ‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮದಲ್ಲಿ ಭಾಗವಹಿಸುವ ಯುವಕರ ಪ್ರಯಾಣಕ್ಕೆ ಅನುಕೂಲವಾಗುವಂತೆ, ಭಾರತೀಯ ರೈಲ್ವೆಯು ಎರಡನೇ / ಸ್ಲೀಪರ್ ವರ್ಗದ ಮೂಲ ದರಗಳಲ್ಲಿ 50% ರಿಯಾಯಿತಿ ನೀಡಲು ನಿರ್ಧರಿಸಿದೆ. ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸುವ ಮತ್ತು ತಿಂಗಳಿಗೆ 5000 ರೂ.ಗಿಂತ ಹೆಚ್ಚಿನ ಗಳಿಕೆ ಇಲ್ಲದ ಯುವಕರಿಗೆ ಮಾತ್ರ ಈ ರಿಯಾಯಿತಿ ಸಿಗಲಿದೆ.
ಈ ರಿಯಾಯತಿಯನ್ನು ವಿಶೇಷ ಸನ್ನಿವೇಶಗಳಲ್ಲಿ ನೀಡಲಾಗುತ್ತದೆ ಮತ್ತು ಇದು ಸಾಮಾನ್ಯ ರೈಲು ಸೇವೆಗಳಲ್ಲಿ ಮಾತ್ರ ಅನುಮತಿಸಲ್ಪಡುತ್ತದೆ ಮತ್ತು ವಿಶೇಷ ರೈಲುಗಳು ಅಥವಾ ಬೋಗಿಗಳ ಬುಕಿಂಗ್ಗೆ ಇದು ಅನ್ವಯಿಸುವುದಿಲ್ಲ.
ವಿವಿಧ ರಾಜ್ಯಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಿಂದ ನಿಗದಿತ ರೈಲ್ವೆ ಸ್ವರೂಪದಲ್ಲಿ ಅಗತ್ಯ ಪ್ರಮಾಣಪತ್ರವನ್ನು ಸಲ್ಲಿಸಿದಾಗ ಮಾತ್ರ ಈ ರಿಯಾಯತಿಯನ್ನು ನೀಡಲಾಗುವುದು. ಭಾಗವಹಿಸುವವರು ಪ್ರಮಾಣಪತ್ರವನ್ನು ಮುಖ್ಯ ವಾಣಿಜ್ಯ ವ್ಯವಸ್ಥಾಪಕರು, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಇತ್ಯಾದಿ ಸಂಬಂಧಪಟ್ಟ ರೈಲ್ವೆಯ ಅಧಿಕೃತ ಅಧಿಕಾರಿಗಳಿಗೆ ಸಲ್ಲಿಸಬೇಕು. ಅವರು ಪ್ರಸ್ತುತಿಯ ಮೇಲೆ ರಿಯಾಯಿತಿ ಆದೇಶಗಳನ್ನು ನೀಡುತ್ತಾರೆ ಮತ್ತು ಸ್ಟೇಷನ್ ಮಾಸ್ಟರ್ ಮಾತ್ರ ರಿಯಾಯತಿಗೆ ಅನುಮತಿಯನ್ನು ನೀಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.