ಪ್ರಯಾಗರಾಜ್: ವಿಶ್ವದ ಮೊದಲ ಹಾಸ್ಪಿಟಲ್ ರೈಲ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಲೈಫ್ಲೈನ್ ಎಕ್ಸ್ಪ್ರೆಸ್ ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಸುಬೇದಾರ್ ರೈಲು ನಿಲ್ದಾಣವನ್ನು ಶನಿವಾರ ತಲುಪಿದೆ. ಈ ರೈಲು 2020 ರ ಜನವರಿ 8 ರವರೆಗೆ ಅಂದರೆ 20 ದಿನಗಳವರೆಗೆ ಸುಬೇದಾರ್ ನಿಲ್ದಾಣದಲ್ಲಿ ನಿಲುಗಡೆಯಾಗಿ ಬಡರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಿದೆ.
ಯುಪಿ ಸರ್ಕಾರದ ವಕ್ತಾರ ಮತ್ತು ಸಂಪುಟ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರು ರೈಲನ್ನು ಪರಿಶೀಲನೆ ನಡೆಸಿದ ನಂತರ ಪ್ರತಿಕ್ರಿಯಿಸಿ, “ಈ ರೈಲು ವಿಶ್ವದ ಮೊದಲ ಚಲಿಸುವ ಆಸ್ಪತ್ರೆಯಾಗಿದ್ದು, ನಿರ್ಗತಿಕ ಮತ್ತು ಆರ್ಥಿಕವಾಗಿ ದುರ್ಬಲ ಜನರಿಗೆ ಆಶೀರ್ವಾದವಾಗಿದೆ. ಹಲವಾರು ಜನರಿಗೆ ಚಿಕಿತ್ಸೆ ನೀಡಲು ಈ ರೈಲು ಸಜ್ಜುಗೊಂಡಿದೆ. ಗಂಭೀರ ರೋಗಗಳಿಗೂ ಇದು ಚಿಕಿತ್ಸೆಯನ್ನು ನೀಡಲಿದೆ. “
ಭಾರತೀಯ ರೈಲ್ವೆ, ಇಂಪ್ಯಾಕ್ಟ್ ಇಂಡಿಯಾ ಫೌಂಡೇಶನ್ನ ಸಹಭಾಗಿತ್ವದಲ್ಲಿ ಜುಲೈ 16, 1991 ರಂದು ಸಿಎಸ್ಎಂಟಿಯಿಂದ ದೇಶದ ದೂರದ ಮೂಲೆಗಳಲ್ಲಿ ವಾಸಿಸುವ ಬಡವರಿಗೆ ಉಚಿತವಾಗಿ ವೈದ್ಯಕೀಯ ಆರೈಕೆಯನ್ನು ಒದಗಿಸುವ ಸಲುವಾಗಿ ಲೈಫ್ಲೈನ್ ಎಕ್ಸ್ಪ್ರೆಸ್ ಅನ್ನು ಪ್ರಾರಂಭಿಸಲಾಯಿತು.
ದೆಹಲಿ ಮತ್ತು ಮುಂಬೈನ ಹಿರಿಯ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರು ಅನಾರೋಗ್ಯ ಪೀಡಿತರಿಗೆ ರೈಲಿನಲ್ಲಿ ಉಚಿತವಾಗಿ ವೈದ್ಯಕೀಯ ಸೇವೆಗಳನ್ನು ನೀಡಲಿದ್ದಾರೆ. ಪ್ರಯಾಗರಾಜ್ನಲ್ಲಿ ರೈಲು ನಿಲುಗಡೆಯಾಗುವ ಸಮಯದವರೆಗೂ ರೈಲ್ವೆ ಅಧಿಕಾರಿಗಳು ಮತ್ತು ಲೈಫ್ಲೈನ್ ಎಕ್ಸ್ಪ್ರೆಸ್ ಉಸ್ತುವಾರಿ ಡಾ.ಪಾಲಕ್, ಡಾ.ರಾಹುಲ್ ಸಿಂಗ್, ಎ.ಡಿ.ಎಂ ಹಣಕಾಸು ಮತ್ತು ಕಂದಾಯ ಸಂಸದ ಸಿಂಗ್ ಸೇರಿದಂತೆ ಅನೇಕ ರೈಲ್ವೆ ಅಧಿಕಾರಿಗಳು ಇದರಲ್ಲಿ ಉಪಸ್ಥಿತರಿರಲಿದ್ದಾರೆ.
ರೈಲಿನಲ್ಲಿ ದಾಖಲಾದ ರೋಗಿಗಳಿಗೆ ಉಚಿತ ಔಷಧಿ, ಆಹಾರ ಮತ್ತು ವಸತಿ ಸಹ ಲಭ್ಯವಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಲೈಫ್ಲೈನ್ ಎಕ್ಸ್ಪ್ರೆಸ್ 20 ರಾಜ್ಯಗಳಲ್ಲಿ ಸಂಚರಿಸಿದ್ದು, 138 ಜಿಲ್ಲೆಗಳಲ್ಲಿ 201 ಕ್ಕೂ ಹೆಚ್ಚು ಗ್ರಾಮೀಣ ಸ್ಥಳಗಳನ್ನು ಒಳಗೊಂಡಂತೆ 12.32 ಲಕ್ಷ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಿದೆ. ಇದರಲ್ಲಿ 1.46 ಲಕ್ಷ ಶಸ್ತ್ರಚಿಕಿತ್ಸೆಗಳು ಸೇರಿವೆ ಎಂದು ಸಿಆರ್ ಹೇಳಿಕೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.