ನವದೆಹಲಿ: ಜಮ್ಮು ಮತ್ತು ಕಾಶ್ಮೀರ, ಲಡಾಖ್ಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ರಚನೆ ಮಾಡಿದ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಜಮ್ಮುವಿನಲ್ಲಿ ಎರಡು ಪ್ರಾದೇಶಿಕ ಸಮ್ಮೇಳನಗಳನ್ನು ನಡೆಸುತ್ತಿದೆ, ಈ ಸಮ್ಮೇಳನದಲ್ಲಿ ಇತರ 19 ರಾಜ್ಯಗಳ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಉತ್ತಮ ಆಡಳಿತ ಅಭ್ಯಾಸಗಳ ಮಾದರಿಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗುತ್ತದೆ.
‘ಜಮ್ಮು-ಕಾಶ್ಮೀರ ಮತ್ತು ಲಡಾಕ್ನ ಕೇಂದ್ರಾಡಳಿತ ಪ್ರದೇಶಗಳಲ್ಲಿ ಉತ್ತಮ ಆಡಳಿತ ಅಭ್ಯಾಸಗಳ ಪುನರಾವರ್ತನೆ’ ಕುರಿತು ಎರಡು ದಿನಗಳ ಸಮ್ಮೇಳನ ನವೆಂಬರ್ 15 ಮತ್ತು 16 ರಂದು ಜಮ್ಮುವಿನಲ್ಲಿ ನಡೆಯಲಿದೆ. ‘ಏಕ ಭಾರತ ಶ್ರೆಷ್ಠ ಭಾರತ್’ ಕಾರ್ಯಕ್ರಮದಡಿ ‘ಜಲ ಶಕ್ತಿ ಮತ್ತು ವಿಪತ್ತು ನಿರ್ವಹಣೆ’ ಕುರಿತು ಮತ್ತೊಂದು ಸಮಾವೇಶ ನಡೆಯಲಿದೆ. ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ಇದು ನಡೆಯಲಿದೆ.
ಎರಡನೇ ಸಮ್ಮೇಳನದಲ್ಲಿ ತಮಿಳುನಾಡನ್ನು ಜಮ್ಮು ಮತ್ತು ಕಾಶ್ಮೀರದ ಸಹೋದರಿ ರಾಜ್ಯವಾಗಿ ನೋಡಲಾಗುತ್ತದೆ, ಎರಡೂ ಕಡೆಯವರು ತಮ್ಮ ನದಿಗಳಾದ ಕಾವೇರಿ ಮತ್ತು ಜೆಲಂ ಬಗ್ಗೆ ಮತ್ತು ಜಲಮೂಲಗಳನ್ನು ಹೇಗೆ ಪುನಶ್ಚೇತನಗೊಳಿಸಬಹುದು ಎಂಬ ಬಗ್ಗೆ ಚರ್ಚಿಸಲಿದ್ದಾರೆ.
ಮೊದಲ ಸಮ್ಮೇಳನದಲ್ಲಿ ಜಮ್ಮು-ಕಾಶ್ಮೀರದ 200 ಅಧಿಕಾರಿಗಳು ಮತ್ತು ಇತರ ರಾಜ್ಯಗಳ 90 ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಲಿದ್ದಾರೆ. ಎರಡನೆಯ ಸಮ್ಮೇಳನದಲ್ಲಿ ಜಿಲ್ಲೆಗಳ ಅಧಿಕಾರಿಗಳು, ಕಲೆಕ್ಟರ್ ಗಳು, ನಾಗರಿಕ ಸಮಾಜದ ಸದಸ್ಯರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳ ಅಧಿಕಾರಿಗಳು ಮತ್ತು ಪ್ರವಾಹ ಪೀಡಿತ ಕುಟುಂಬಗಳ ಕೆಲವು ಸದಸ್ಯರು ಸೇರಿದಂತೆ 350 ಭಾಗವಹಿಸುವವರು ಭಾಗವಹಿಸಲಿದ್ದಾರೆ.
ಸಮ್ಮೇಳದಲ್ಲಿ ಜನ ಸಾಮಾನ್ಯರ ಕುಂದು ಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಾಲೋಚನೆಗಳು ಜರುಗಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.