ನವದೆಹಲಿ: ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ 550 ನೇ ಜನ್ಮ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಡೇರಾ ಬಾಬಾ ನಾನಕ್ಗೆ ಆಗಮಿಸಿದರು ಮತ್ತು ಅಲ್ಲಿ ಅವರು ಕರ್ತಾರ್ಪುರ ಕಾರಿಡಾರ್ನ ಪ್ಯಾಸೆಂಜರ್ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು. ಅಲ್ಲದೇ ಕರ್ತಾರ್ಪುರಕ್ಕೆ ಯಾತ್ರೆಕೈಗೊಳ್ಳುವ ಭಕ್ತರ ಮೊದಲ ಬ್ಯಾಚ್ಗೆ ಹಸಿರು ನಿಶಾನೆ ತೋರಿಸಿದರು.
ಈ ಸಂದರ್ಭದಲ್ಲಿ ಸಿಖ್ ಸಂಪ್ರದಾಯದಂತೆ ಕಿತ್ತಳೆ ಪೇಟವನ್ನು ಅವರು ಧರಿಸಿ ಸಾಂಪ್ರದಾಯಿಕವಾಗಿ ಗುರುದ್ವಾರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು. ಗುರುದಾಸ್ಪುರದ ಬಿಜೆಪಿ ಶಾಸಕರು, ಸನ್ನಿ ಡಿಯೋಲ್, ಕೇಂದ್ರ ಸಚಿವ ಹರ್ದೀಪ್ ಪುರಿ ಮತ್ತು ಶಿರೋಮಣಿ ಅಕಾಲಿ ದಳದ ಸುಖ್ಬೀರ್ ಬಾದಲ್ ಮುಂತಾದವರು ಡೇರಾ ಬಾಬಾ ನಾನಕ್ನಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, “ಸಿಖ್ ಸಮುದಾಯವು ಕೇಂದ್ರ ಸರ್ಕಾರದ ಪ್ರಮುಖ ನಿರ್ಧಾರಗಳಿಂದ ನೇರವಾಗಿ ಲಾಭ ಪಡೆದಿದೆ. ಗುರುನಾನಕ್ ದೇವ್ರಿಂದ ಹಿಡಿದು ಗುರು ಗೋವಿಂದ್ವರೆಗೆ ಅನೇಕ ಗುರುಗಳು ಭಾರತದ ಐಕ್ಯತೆ ಮತ್ತು ಸುರಕ್ಷತೆಗಾಗಿ ತ್ಯಾಗ ಮಾಡಿದ್ದಾರೆ. ಈ ಸಂಪ್ರದಾಯವನ್ನು ಸ್ವಾತಂತ್ರ್ಯ ಹೋರಾಟ ಮತ್ತು ಭಾರತದ ರಕ್ಷಣೆಯ ಸಂದರ್ಭದಲ್ಲಿ ಸಂಪೂರ್ಣ ಶಕ್ತಿಯೊಂದಿಗೆ ಸಿಖ್ ಒಡನಾಡಿಗಳು ಪೂರೈಸಿದ್ದಾರೆ” ಎಂದಿದ್ದಾರೆ.
“ನಾನು ಇಂದು ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಅನ್ನು ದೇಶಕ್ಕೆ ಅರ್ಪಿಸುತ್ತಿದ್ದೇನೆ ಎಂಬುದು ನನ್ನ ಅದೃಷ್ಟ. ಕರಸೇವೆಯ ಸಮಯದಲ್ಲಿ ನಿಮಗೆ ಆಗುವ ಅನುಭೂತಿಯೇ ಇಂದು ಈ ಕ್ಷಣದಲ್ಲಿ ನನಗೆ ಆಗುತ್ತಿದೆ. ಇಡೀ ದೇಶ ಮತ್ತು ವಿದೇಶದಲ್ಲಿ ನೆಲೆಸಿರುವ ಸಿಖ್ ಸಹೋದರ ಸಹೋದರಿಯರನ್ನು ನಾನು ಅಭಿನಂದಿಸುತ್ತೇನೆ” ಎಂದಿದ್ದಾರೆ.
“ನಮ್ಮ ಸಂತ ಸಮಾಜ ಮತ್ತು ವಿವಿಧ ಸಂಘಟನೆಗಳು ಮತ್ತು ಕೋಟಿ ಭಕ್ತರ ದೀರ್ಘಕಾಲದ ಪ್ರಯತ್ನಗಳು ಇಂದು ಯಶಸ್ವಿಯಾಗಿವೆ. ಈಗ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ರಾಮರಾಜ್ಯದ ದೃಷ್ಟಿಗೆ ಅನುಗುಣವಾಗಿ ದೇಶದಲ್ಲಿ ಸದ್ಭಾವನೆ ಮತ್ತು ಪ್ರೀತಿ ಹೊಂದುವುದು ಮತ್ತು ಉತ್ತಮ ಆಡಳಿತವನ್ನು ಕಾಪಾಡಿಕೊಳ್ಳುವುದು ನಮ್ಮ ಪ್ರಯತ್ನವಾಗಿರಬೇಕು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.