ನವದೆಹಲಿ: ಕಾರ್ಮಿಕರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳ ಕುರಿತು ಕಾರ್ಮಿಕ ಸಂಹಿತೆಯನ್ನು ತರುವ ಸಲುವಾಗಿ ಸಂಸದೀಯ ಸ್ಥಾಯಿ ಸಮಿತಿಯು ಸಾರ್ವಜನಿಕ ಸಲಹೆಗಳನ್ನು ಆಹ್ವಾನಿಸಿದೆ ಎಂದು ಸರ್ಕಾರ ಗುರುವಾರ ತಿಳಿಸಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು, ‘ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಪರಿಸ್ಥಿತಿಗಳ ಸಂಹಿತೆ, 2019’ ಅನ್ನು ಬಿಜು ಜನತಾದಳದ ಸಂಸದ ಭರ್ತುಹರಿ ಮಹತಾಬ್ ನೇತೃತ್ವದ ಸಮಿತಿಯ ಪರಿಶೀಲನೆ ಮತ್ತು ವರದಿಗಾಗಿ ಕಳುಹಿಸಿಕೊಟ್ಟಿದ್ದಾರೆ.
ಈ ವರ್ಷದ ಜುಲೈನಲ್ಲಿ ನಡೆದ ಸಂಸತ್ತಿನ ಕೊನೆಯ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಂಡಿಸಲಾದ ಮಸೂದೆಯ ಬಗ್ಗೆ ಸಮಿತಿಯು ಸಾರ್ವಜನಿಕರ ಮತ್ತು ತಜ್ಞರ ಸಲಹೆಗಳನ್ನು ಕೋರಿದೆ.
“ಸಾಮಾನ್ಯವಾಗಿ ಸಾರ್ವಜನಿಕರಿಂದ ಮತ್ತು ಎನ್ ಜಿಒಗಳಿಂದ, ತಜ್ಞರು, ಮಧ್ಯಸ್ಥಗಾರರು ಮತ್ತು ಸಂಸ್ಥೆಗಳಿಂದ ಅಭಿಪ್ರಾಯಗಳು, ಸಲಹೆಗಳನ್ನು ಒಳಗೊಂಡಿರುವ ಜ್ಞಾಪಕ ಪತ್ರಗಳನ್ನು ಆಹ್ವಾನಿಸಲು ಸಮಿತಿ ನಿರ್ಧರಿಸಿದೆ” ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಮಸೂದೆಗೆ ತಮ್ಮ ಸಲಹೆಗಳನ್ನು ಸಲ್ಲಿಸಲು ಬಯಸುವವರು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಎರಡು ಪ್ರತಿಗಳನ್ನು ಲೋಕಸಭಾ ಸಚಿವಾಲಯದ ನಿರ್ದೇಶಕರಿಗೆ (ಎಎನ್- II ಮತ್ತು ಎಲ್) ಕಳುಹಿಸಬೇಕು ಮತ್ತು ನವೆಂಬರ್ 22ರ ಮೊದಲು comm.labour-lss@sansad.nic.in ಗೆ ಇಮೇಲ್ ಮಾಡಬೇಕು.
ಗುತ್ತಿಗೆ ಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರ ಉದ್ಯೋಗ ಮತ್ತು ಕ್ಷೇತ್ರಗಳಲ್ಲಿನ ಕೆಲಸದ ಪರಿಸ್ಥಿತಿಗಳನ್ನು ನಿಯಂತ್ರಿಸುವ ಉದ್ದೇಶವನ್ನು ಈ ಕಾರ್ಮಿಕ ಸಂಹಿತೆಯು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.