ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿರುವ ರೈಲ್ವೆ ನಿಲ್ದಾಣವು ಶೀಘ್ರದಲ್ಲೇ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಕಟಣೆಗಳನ್ನು ಹೊರಡಿಸಲಿದೆ. ಪವಿತ್ರ ನಗರಕ್ಕೆ ಭೇಟಿ ನೀಡುವ ಅಪಾರ ಸಂಖ್ಯೆಯ ಹಿಂದಿಯೇತರ ಭಾಷಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
“ಹಿಂದಿ ಅಲ್ಲದ ಭಾಷಿಕರು, ವಿಶೇಷವಾಗಿ ದಕ್ಷಿಣ ಭಾರತದವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿರುತ್ತಾರೆ. ಅವರಲ್ಲಿ ಹೆಚ್ಚಿನವರಿಗೆ ಹಿಂದಿ ಅರ್ಥವಾಗುವುದಿಲ್ಲ. ಆದ್ದರಿಂದ, ಅವರ ಸುಲಭ ಪ್ರಯಾಣ ಮತ್ತು ಅನುಕೂಲಕ್ಕಾಗಿ ನಾವು ಶೀಘ್ರದಲ್ಲೇ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟಣೆಗಳನ್ನು ಮಾಡಲಿದ್ದೇವೆ. ಆರಂಭದಲ್ಲಿ, ನಾಲ್ಕು ಭಾಷೆಗಳಲ್ಲಿ ಪ್ರಕಟನೆ ಹೊರಡಿಸಲು ನಿರ್ಧರಿಸಲಾಗಿ. ಇದಕ್ಕಾಗಿ ವ್ಯವಸ್ಥೆಗಳನ್ನು ನವೀಕರಿಸಲಾಗುತ್ತಿದೆ” ಎಂದು ರಿಜಿನಲ್ ಕ್ಯಾಂಟ್ ಸ್ಟೇಶನ್ ಡೈರೆಕ್ಟರ್ ಆನಂದ್ ಮೋಹನ್ ಹೇಳಿದ್ದಾರೆ.
“ನಾವು ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೊದಲು ಪ್ರಕಟನೆಗಳನ್ನು ಹೊರಡಿಸಲು ಪ್ರಾರಂಭಿಸುತ್ತಿದ್ದೇವೆ. ನಂತರ ಒಡಿಯಾ, ಮರಾಠಿ ಮತ್ತು ಇತರ ಭಾಷೆಗಳನ್ನು ಸಹ ಸೇರಿಸಲಾಗುತ್ತದೆ. ಈ ತಿಂಗಳ ಅಂತ್ಯದ ವೇಳೆಗೆ ಹೊಸ ಭಾಷೆಗಳಲ್ಲಿ ಪ್ರಕಟನೆ ಹೊರಡಲಿದೆ” ಎಂದಿದ್ದಾರೆ.
“ಇದು ಹೊಸ ಪ್ರಯೋಗವಾಗಿದ್ದು, ಇದನ್ನು ಪ್ರಧಾನಿಯವರ ಲೋಕಸಭಾ ಕ್ಷೇತ್ರದಿಂದ ಪ್ರಾರಂಭಿಸಲಾಗುತ್ತಿದೆ” ಎಂದು ಮೋಹನ್ ಹೇಳಿದ್ದಾರೆ.
ಹಿಂದಿಯೇತರ ಭಾಷಿಕರು ತಮ್ಮ ರೈಲು ಸಮಯ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸುವಾಗ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಅನೇಕ ಬಾರಿ ಅವರು ತಮ್ಮ ರೈಲುಗಳನ್ನು ತಪ್ಪಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನಾವು ಜನರಿಗೆ ಸಹಾಯ ಕೇಂದ್ರವನ್ನು ಸಹ ಸ್ಥಾಪಿಸುತ್ತಿದ್ದೇವೆ. ರೈಲ್ವೆ ನಿಲ್ದಾಣದಲ್ಲಿ ಟಿವಿ ಪರದೆಯನ್ನೂ ಹಾಕಲಾಗುತ್ತದೆ, ಇದು ವಿಶ್ವನಾಥ ದೇವಾಲಯದ ನೇರ ದೃಶ್ಯಗಳನ್ನು ತೋರಿಸುತ್ತದೆ” ಎಂದು ಮೋಹನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.