ನವದೆಹಲಿ: ದೇಶದ ಅತಿದೊಡ್ಡ ಪಿಎಸ್ಯು ರಿಫೈನರ್ ಮತ್ತು ರಿಟೇಲರ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಹತ್ವದ ಮೈಲಿಗಲ್ಲನ್ನು ಸಾಧಿಸಬಲ್ಲಂತಹ ತನ್ನ ಸಂಶೋಧನೆಯನ್ನು ಪೂರ್ಣಗೊಳಿಸುವ ಹಂತದಲ್ಲಿದೆ, 2022 ರ ವೇಳೆಗೆ ದೇಶದಿಂದ ಏಕ-ಬಳಕೆಯ ಪ್ಲಾಸ್ಟಿಕ್ಗಳನ್ನು ನಿರ್ಮೂಲನೆ ಮಾಡಲು ಸರ್ಕಾರಕ್ಕೆ ಈ ಸಂಶೋಧನೆ ಸಹಾಯ ಮಾಡಲಿದೆ.
ವಿಷಕಾರಿ ಪ್ಲಾಸ್ಟಿಕ್ ತ್ಯಾಜ್ಯದ ದ್ರವೀಕರಣಕ್ಕಾಗಿ ಕಂಪನಿಯು ಕಳೆದ ಕೆಲವು ವರ್ಷಗಳಿಂದ ಕೈಗೊಂಡ ಸಂಶೋಧನೆಯು ಅಂತಿಮ ಹಂತದಲ್ಲಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ತೈಲವನ್ನು ವಾಣಿಜ್ಯಿಕವಾಗಿ ಉತ್ಪಾದಿಸಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತನ್ನ ಸಂಸ್ಕರಣಾಗಾರಗಳಲ್ಲಿ ಮತ್ತು ಪೆಟ್ರೋಕೆಮಿಕಲ್ ಸಂಕೀರ್ಣಗಳಲ್ಲಿ ವ್ಯವಸ್ಥೆಗಳನ್ನು ರಚನೆ ಮಾಡಬಹುದು ಎಂದು ಹೇಳಲಾಗತ್ತಿದೆ.
“ಪ್ಲಾಸ್ಟಿಕ್ ದ್ರವೀಕರಣದ ಕುರಿತಾದ ಆರಂಭಿಕ ಸಂಶೋಧನೆಯು ಉತ್ತೇಜನಕಾರಿಯಾಗಿದೆ. ನಾವು ಈಗ ಈ ಸಂಶೋಧನೆಯನ್ನು ಪುರಾವೆ ಹಂತಕ್ಕೆ ಕೊಂಡೊಯ್ಯಬೇಕಾಗಿದೆ, ಇದು ಪ್ಲಾಸ್ಟಿಕ್ ತ್ಯಾಜ್ಯದಿಂದ ತೈಲವನ್ನು ವಾಣಿಜ್ಯವಾಗಿ ಹೊರತೆಗೆಯುವ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸಲು ಸಹ ಸಹಾಯ ಮಾಡುತ್ತದೆ” ಎಂದು ಐಒಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ಲಾಸ್ಟಿಕ್ಗಳು ಪೆಟ್ರೋಕೆಮಿಕಲ್ಗಳಿಂದ ಹುಟ್ಟಿಕೊಂಡಿರುವುದರಿಂದ, ಪೈರೋಲೈಸಿಂಗ್ ಮೂಲಕ ಅದರ ತ್ಯಾಜ್ಯವನ್ನು ಮತ್ತೆ ಎಣ್ಣೆಯಾಗಿ ಪರಿವರ್ತಿಸುವ ಕಲ್ಪನೆಯನ್ನು ಜಾಗತಿಕವಾಗಿ ಅನುಸರಿಸಲಾಗುತ್ತಿದೆ. ವಾಸ್ತವವಾಗಿ, ಚೀನಾ ಮತ್ತು ಜಪಾನ್ನಂತಹ ದೇಶಗಳಲ್ಲಿ ಪ್ಲಾಸ್ಟಿಕ್ನಿಂದ ತೈಲದ ವಾಣಿಜ್ಯ ಉತ್ಪಾದನೆ ನಡೆಯುತ್ತಿದೆ, ಅಲ್ಲಿ ಇಳುವರಿ ಮಟ್ಟವು ಶೇಕಡಾ 38-63ರವರೆಗೆ ವಿಸ್ತಾರಗೊಳ್ಳುತ್ತಿದೆ. ಇದರರ್ಥ 100 ಟನ್ ಪ್ಲಾಸ್ಟಿಕ್ ಅನ್ನು ಫೀಡ್ ಸ್ಟಾಕ್ ಆಗಿ ಬಳಸಿ 38-62 ಟನ್ ತೈಲವನ್ನು ಉತ್ಪಾದಿಸಲಾಗುತ್ತದೆ.
ಆದರೆ ಪ್ರಕ್ರಿಯೆಯು ವ್ಯಾಪಕವಾದ ಸ್ವೀಕಾರವನ್ನು ಪಡೆಯಲು, ಕಚ್ಚಾ ತೈಲದ ಬೆಲೆ ನಿರ್ಣಾಯಕ ಅಂಶವಾಗಿದೆ. ಬ್ಯಾರೆಲ್ಗೆ $ 60 ಕ್ಕಿಂತ ಕಡಿಮೆ ಇರುವ ಕಚ್ಚಾ ತೈಲಕ್ಕೆ ಪ್ಲಾಸ್ಟಿಕ್ ದ್ರವೀಕರಣಕ್ಕೆ ತಗಲುವ ವೆಚ್ಚವನ್ನು ಭರಿಸಲು ಸಾಧ್ಯವಾಗುವುದಿಲ್ಲ ಮತ್ತು ವಾಣಿಜ್ಯ ಪ್ರಮಾಣದ ಸ್ಥಾವರಗಳಲ್ಲಿನ ಹೂಡಿಕೆಯನ್ನು ನಿರಾಕರಿಸುತ್ತದೆ. ಇದಲ್ಲದೆ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಈ ಪ್ರಕ್ರಿಯೆಯು ಕೆಲಸ ಮಾಡಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.