News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತುರ್ತು ಸೇವೆಗಾಗಿ ’112’ ಸಹಾಯವಾಣಿಗೆ ಕೇಂದ್ರ ನಿರ್ಧಾರ

Helpline

ನವದೆಹಲಿ: ದೇಶದಾದ್ಯಂತ ಎಲ್ಲ ತುರ್ತು ಸೇವೆಗಾಗಿ 112 ಸಹಾಯವಾಣಿ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತಿಸಿದೆ.  ಅಮೇರಿಕದಲ್ಲಿ ಎಲ್ಲ ತುರ್ತು ಸೇವೆಗಳಿಗೂ ಒಂದೇ ಸಹಾಯವಾಣಿ 911 ಇದ್ದು, ಇದರಂತೆ ಭಾರತದಲ್ಲೂ ಇದೀಗ 112 ನ್ನು ಎಲ್ಲಾ ತುರ್ತು ಸೇವೆಗಳಿಗೂ ಸಹಾಯವಾಣಿಯಾಗಿ ಜಾರಿಗೆ ತರಲು ಕೇಂದ್ರ ನಿರ್ಧರಿಸಿದೆ.

ಈ ಮೊದಲು ಈ ಸಹಾಯವಾಣಿ ಅಪಾಯದಲ್ಲಿರುವ ಮಹಿಳೆಯರಿಗೆ, ದೌರ್ಜನ್ಯ, ಅತ್ಯಾಚಾರ, ಇನ್ನಿತರ ಅಪಾಯಗಳಲ್ಲಿ ಸಿಲುಕಿರುವ ಮಹಿಳೆಯರಿಗೆಂದೇ ಪ್ರಾರಂಭಿಸಲಾಗಿದ್ದು, ಶೀಘ್ರದಲ್ಲೇ ಇದು ಎಲ್ಲಾ ತುರ್ತು ಸೇವೆಗಳಿಗೂ ಸಹಾಯವಾಣಿಯಾಗಲಿದೆ.

ತುರ್ತು ಸೇವೆ ಸಹಾಯವಾಣಿ ಬಟನ್‌ಗಳನ್ನು ದೇಶದಾದ್ಯಂತ ನಗರಗಳಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಲ್ಲೂ ಅಳವಡಿಸುವ ಯೋಜನೆ ಹೊಂದಿದೆ. ಸಹಾಯವಾಣಿಗೆ ಬರುವ ಎಲ್ಲಾ ಕರೆಗಳು ನೇರವಾಗಿ ದೆಹಲಿಯ ಕೇಂದ್ರ ಕಚೇರಿ ತಲುಪಲಿದ್ದು, ನಂತರ ಸಂಬಂಧಪಟ್ಟ ವಿಭಾಗೀಯ ಕಚೇರಿಗಳಿಗೆ ವರ್ಗಾಯಿಸಲಾಗುತ್ತದೆ. ಮೊಬೈಲ್, ಲ್ಯಾಂಡ್‌ಲೈನ್ ಅಲ್ಲದೇ ಆ್ಯಪ್ ಮೂಲಕವೂ ಕರೆ ಮಾಡಬಹುದಾಗಿದೆ. ಸಹಾಯವಾಣಿಯು ದೇಶದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ವ್ಯವಹರಿಸಲಿದೆ.

ಇದಕ್ಕಾಗಿ ಅಗ್ನಿಶಾಮಕ ದಳ, ಆಂಬ್ಯುಲೆನ್ಸ್‌ಗಳಲ್ಲಿ ಜಿಪಿಎಸ್ ಅಳವಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.