ಬೆಳ್ತಂಗಡಿ : ಅರಸಿನಮಕ್ಕಿಯಲ್ಲಿ ರೈತ ಕುಟುಂಬಕ್ಕಾದ ಅನ್ಯಾಯದದೌರ್ಜನ್ಯದ ವಿರುದ್ಧಜನಜಾಗೃತಿ ಮೂಡಿಸಲು ಭಾರತೀಯ ಜನತಾ ಪಾರ್ಟಿ ಪ್ರತಿಭಟನೆ ನಡೆಸುತ್ತಿದೆಯೇ ಹೊರತು ಜೆಡಿಎಸ್ ಮುಖಂಡ ಜಗನ್ನಾಥಗೌಡ ಅಡ್ಕರಿ, ತಿಳಿಸಿರುವಂತೆ ಜನರನ್ನು ದಾರಿತಪ್ಪಿಸುವ ಕಾರ್ಯವಿದಲ್ಲವೆಂದ ಬೆಳ್ತಂಗಡಿ ತಾಲೂಕು ಬಿಜೆಪಿ ಸ್ಪಷ್ಟಪಡಿಸಿದೆ.
ಜಗನ್ನಾಥ ಗೌಡರ ಹೇಳಿಕೆಯಿಂದ ರೈತ ಕೇಶವರಾವ್ ಅವರ ವೃದ್ಧೆತಾಯಿಯೂ ಸೇರಿದಂತೆ ಅವರ ಕುಟುಂಬದವರ ಮೇಲೆ ನಡೆದ ಅಮಾನುಷ ದುಷ್ಕೃತ್ಯದ ಹಿಂದೆ ಇರುವ ಶಕ್ತಿ ಯಾವುದೆಂದು ಇದೀಗ ಬಯಲಾಗಿದೆ. ಭಾರತೀಯ ಜನತಾ ಪಾರ್ಟಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಂಬಿಕೆ ಇರಿಸಿಯೇ ಈ ಪ್ರಕರಣದಲ್ಲಿ ರೈತರ ಪರವಾಗಿ ಹೋರಾಟ ಕೈಗೆತ್ತಿಕೊಂಡಿದೆ. ಶಾಸನ ಸಭೆಯಲ್ಲಿ ಈ ವಿಷಯ ಈಗಾಗಲೇ ಪ್ರಸ್ತಾಪಿಸಲ್ಪಟ್ಟಿದ್ದು, ಅರಸಿನಮಕ್ಕಿಗೆ ದಾಖಲೆಗಳೊಂದಿಗೆ ಬನ್ನಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಆಹ್ವಾನ ನೀಡುವ ಜೆಡಿಎಸ್ ಮುಖಂಡರು, ತಮ್ಮಲ್ಲಿರುವ ದಾಖಲೆಗಳೊಂದಿಗೆ ಈಗಾಗಲೇ ಪ್ರಕರಣ ಇತ್ಯರ್ಥಕ್ಕೆ ಬಾಕಿ ಇರುವ ಸಂಬಂಧ ಪಟ್ಟ ನ್ಯಾಯಾಲಯಕ್ಕೆ ಹೋಗಲಿ ಎಂದು ಪಕ್ಷ ಹೇಳಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅನ್ಯಾಯವಾದಾಗ ಪ್ರತಿಭಟಿಸುವುದು ಮೂಲಭೂತ ಹಕ್ಕು, ಭಾರತದ ಒಕ್ಕೂಟ ವ್ಯವಸ್ಥೆಯಡಿಯಲ್ಲೇ ಅರಸಿನಮಕ್ಕಿ ಗ್ರಾಮ ಪಂಚಾಯತ್ ಬರುತ್ತದೆ ಎಂಬುದನ್ನು ಮೊದಲು ಮನದಟ್ಟು ಮಾಡಿಕೊಳ್ಳಲಿ. ಸರ್ವಾಧಿಕಾರದದೋರಣೆ ಹೊಂದಿದ ಅರಸಿನಮಕ್ಕಿ ಗ್ರಾಮ ಪಂಚಾಯತ್ನ ಪಟ್ಟಭದ್ರ ಹಿತಾಸಕ್ತಿಯನ್ನು ಸಾರ್ವಜನಿಕರಿಗೆ ಅರಿವು ಮೂಡಿಸಲೆಂದೇ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಸಾರ್ವಜನಿಕ ಉದ್ದೇಶದ ಸ್ಮಶಾನಕ್ಕೆ ಭೂಮಿಕಾಯ್ದರಿಸುವುದಕ್ಕೆ ಬಿಜೆಪಿ ವಿರೋಧವಿಲ್ಲ ಆದರೆ ರೈತರ ಕೃಷಿ ಭೂಮಿಯನ್ನು ಕಸಿದು ಅವರ ಬದುಕನ್ನೇ ಸ್ಮಶಾನ ಮಾಡುವುದಕ್ಕೆ ನಮ್ಮ ವಿರೋಧವಿದೆ. ಸ್ಮಶಾನಕ್ಕೆ ಬೇರೆಜಮೀನುಕಾಯ್ದಿರಿಸಲಿ.
ಮುಂದಿನ ದಿನಗಳಲ್ಲೂ ಅನ್ಯಾಯಕ್ಕೊಳಗಾದ ರೈತಕುಟುಂಬಕ್ಕೆ ಸೂಕ್ತ ನ್ಯಾಯ ಸಿಗುವವರೆಗೂ ಬಿಜೆಪಿಯ ಹೋರಾಟ ನಿರಂತರ ಮುಂದುವರಿಯಲಿದೆಯೆಂದು ಬೆಳ್ತಂಗಡಿ ಬಿಜೆಪಿ ಮಂಡಲಾಧ್ಯಕ್ಷ ಬಾಲಕೃಷ್ಣ.ವಿ.ಶೆಟ್ಟಿ, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾಯುವ ಮೋರ್ಚಾಅಧ್ಯಕ್ಷರಂಜನ್.ಜಿ.ಗೌಡ, ಮಂಡಲ ಪ್ರ.ಕಾರ್ಯದರ್ಶಿಗಳಾದ ಸೀತಾರಾಮ.ಬಿ.ಎಸ್,ಜಯಂತ್ ಕೋಟ್ಯಾನ್,ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.