ನವದೆಹಲಿ: ಐಐಎಂ ಉದಯಪುರ QS 2020 ಮಾಸ್ಟರ್ಸ್ ಇನ್ ಮ್ಯಾನೇಜ್ಮೆಂಟ್ (ಎಂಐಎಂ) ಶ್ರೇಯಾಂಕದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಅತ್ಯಂತ ಕಿರಿಯ ಮ್ಯಾನೇಜ್ಮೆಂಟ್ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಐಐಎಂ ಉದಯಪುರದ ನಿರ್ದೇಶಕ ಜನತ್ ಶಾ ಅವರು, “ಈ ಜಾಗತಿಕ ಮನ್ನಣೆಯನ್ನು ಪಡೆದಿರುವುದು ಐಐಎಂಗೆ ಹೆಮ್ಮೆಯ ವಿಷಯವಾಗಿದೆ. ಇದು ನಮ್ಮ ನಿಪುಣ ಅಧ್ಯಾಪಕರು, ನಮ್ಮ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಅಸಾಧಾರಣ ಹಳೆಯ ವಿದ್ಯಾರ್ಥಿಗಳಿಗೆ ಸಿಕ್ಕ ಶ್ಲಾಘನೆಯಾಗಿದೆ. ಭಾರತದ ಎಲ್ಲಾ ಕ್ಷೇತ್ರಗಳಲ್ಲಿನ ಪಾಲುದಾರರೊಂದಿಗೆ ನಮ್ಮ ದೃಢವಾದ ಸಂಬಂಧವನ್ನು ಬೆಳೆಸಲು ಮತ್ತು ನಿರ್ಮಾಣ ಮಾಡಲು ನಾವು ಎದುರು ನೋಡುತ್ತೇವೆ” ಎಂದಿದ್ದಾರೆ.
QS ಐಐಎಂ ಶ್ರೇಯಾಂಕಗಳು ಉದ್ಯೋಗದಾಯಕತೆ, ಹಳೆಯ ವಿದ್ಯಾರ್ಥಿಗಳ ಹೊರಹೊಮ್ಮುವಿಕೆ, ಹಣದ ಮೌಲ್ಯ, ಚಿಂತನೆಯ ನಾಯಕತ್ವ ಮತ್ತು ವರ್ಗ ಮತ್ತು ಬೋಧಕವರ್ಗದ ವೈವಿಧ್ಯತೆಯ ಕುರಿತ ಮೌಲ್ಯಮಾಪನ ಮಾಡುತ್ತದೆ.
“ಅಗ್ರ 129 ಪ್ರೋಗ್ರಾಂಗಳಲ್ಲಿ ಸ್ಥಾನ ಪಡೆದುಕೊಂಡಿರುವುದು ಐಐಎಂ ಉದಯಪುರದಂತಹ ಯುವ ಸಂಸ್ಥೆಗೆ ಒಂದು ಪ್ರಮುಖ ಮೈಲಿಗಲ್ಲಾಗಿದೆ ಮತ್ತು ಇದು ಜಾಗತಿಕವಾಗಿ ಮಾನ್ಯತೆ ಪಡೆದ ಮ್ಯಾನೇಜ್ಮೆಂಟ್ ಸಂಸ್ಥೆಯಾಗುವ ದೀರ್ಘಕಾಲೀನ ಉದ್ದೇಶವನ್ನು ಸಾಧಿಸುವ ಹಾದಿಯಲ್ಲಿದೆ ಎಂಬುದನ್ನು ಇದು ಖಚಿತಪಡಿಸುತ್ತದೆ” ಎಂದು ಐಐಎಂ ಉದಯಪುರದ ಮುಖ್ಯಸ್ಥ ಪಂಕಜ್ ಪಟೇಲ್ ಅಭಿಪ್ರಾಯಿಸಿದ್ದಾರೆ.
ಕಳೆದ ವರ್ಷ, ಐಐಎಂ ಉದಯಪುರವು AACSB ಮಾನ್ಯತೆ (ಅಸೋಸಿಯೇಷನ್ ಟು ಅಡ್ವಾನ್ಸ್ ಕಾಲೇಜಿಯೇಟ್ ಸ್ಕೂಲ್ಸ್ ಆಫ್ ಬ್ಯುಸಿನೆಸ್) ಪಡೆದ ಅತ್ಯಂತ ಕಿರಿಯ ಭಾರತೀಯ ಸಂಸ್ಥೆಯಾಗಿತ್ತು ಮತ್ತು ವಿಶ್ವದ ಬಿ-ಸ್ಕೂಲ್ಗಳಲ್ಲಿ ಶೇ.5 ರ ಗಣ್ಯರ ಗುಂಪಿನಲ್ಲಿ ಸೇರಿಕೊಂಡಿತು ಎಂದು ಅವರು ಹೇಳಿದ್ದಾರೆ.
“ಈ ಸಾಧನೆಗಳು ಐಐಎಂಯುನ ವಿಧಾನ ಮತ್ತು ಅಭ್ಯಾಸಗಳನ್ನು ವಿಶ್ವದ ಅತ್ಯುತ್ತಮ ಮ್ಯಾನೇಜ್ಮೆಂಟ್ ಸಂಸ್ಥೆಗಳಿಗೆ ಹೋಲಿಸಬಹುದಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ಪಟೇಲ್ ಹೇಳಿದ್ದಾರೆ.
ಐಐಎಂ ಉದಯಪುರದ ಎರಡು ವರ್ಷಗಳ ಎಂಬಿಎ ಪ್ರೋಗ್ರಾಂ ಈಗ 28 ದೇಶಗಳ ಜಾಗತಿಕ 129 ಕಾರ್ಯಕ್ರಮಗಳಲ್ಲಿ 101+ ವಿಭಾಗದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.