ನವದೆಹಲಿ: ಗುರುನಾನಕ್ ದೇವ್ ಅವರ 550 ನೇ ಪ್ರಕಾಶ್ ಪರ್ಬ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸುಲ್ತಾನಪುರ ಲೋಧಿಗೆ ವಿಶೇಷ ರೈಲುಗಳನ್ನು ಸಂಚರಿಸಲು ಕೇಂದ್ರ ರೈಲ್ವೇ ಸಚಿವಾಲಯ ನಿರ್ಧರಿಸಿದೆ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಮನವಿಯ ಹಿನ್ನಲೆಯಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ರೈಲ್ವೆ ಸಚಿವಾಲಯವು 14 ವಿಶೇಷ ಅಂತರ್-ನಗರ ಮತ್ತು ಅಂತರ್- ರಾಜ್ಯ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ. ನವೆಂಬರ್ 1 ರಿಂದ ಐತಿಹಾಸಿಕ ಪಟ್ಟಣವನ್ನು ಈ ರೈಲುಗಳು ಸಂಪರ್ಕಿಸಲಿವೆ.
ಈ ವಿಶೇಷ ಪ್ರಯಾಣಿಕ ಮತ್ತು ಎಕ್ಸ್ಪ್ರೆಸ್ ರೈಲುಗಳಿಂದಾಗಿ ಪಂಜಾಬ್ ಮತ್ತು ಇತರ ಪ್ರದೇಶಗಳಿಂದ ಸುಲ್ತಾನಪುರ ಲೋಧಿಗೆ ಆಗಮಿಸುವ ಭಕ್ತರಿಗೆ ಅನುಕೂಲವಾಗಲಿವೆ, ಅದರಲ್ಲೂ ನಾಂದೇಡ್ ಮತ್ತು ಪಾಟ್ನಾ ಸಾಹಿಬ್ ಪ್ರದೇಶದ ಭಕ್ತರಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ನವದೆಹಲಿಯನ್ನು ಸುಲ್ತಾನಪುರ ಲೋಧಿಯೊಂದಿಗೆ ಸಂಪರ್ಕಿಸುವ ವಿಶೇಷ ಎಕ್ಸ್ಪ್ರೆಸ್ ರೈಲನ್ನು ಘೋಷಿಸುವಂತೆ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಸಲ್ಲಿಸಿತ್ತು, ಈ ಪ್ರಸ್ತಾವನೆಗೆ ಈ ತಿಂಗಳ ಆರಂಭದಲ್ಲಿ ಕೇಂದ್ರ ಒಪ್ಪಿಕೊಂಡಿತ್ತು.
ನವೆಂಬರ್ನಲ್ಲಿ ನಡೆಯಲಿರುವ ಐತಿಹಾಸಿಕ ಪ್ರಕಾಶ್ ಪರ್ಬ್ ಸಂಭ್ರಮಾಚರಣೆಗೂ ಮೊದಲು ಸುಲ್ತಾನಪುರ ಲೋಧಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾರ್ಯವನ್ನು ರೈಲ್ವೆ ಪೂರ್ಣಗೊಳಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಉತ್ತರ ರೈಲ್ವೆ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಅಮೃತಸರ-ಡೇರಾ ಬಾಬಾ ನಾನಕ್ ಡೀಸೆಲ್ ಮಲ್ಟಿಪಲ್ ಯುನಿಟ್ (ಡಿಎಂಯು) ನವೆಂಬರ್ 1 ಮತ್ತು 16 ರ ನಡುವೆ 60 ಬಾರಿ ಸಂಚರಿಸಲಿದೆ, ಅಮೃತಸರದಿಂದ ರಾತ್ರಿ 9.10 ಕ್ಕೆ ಪ್ರಾರಂಭವಾಗಿ ಬೆಳಿಗ್ಗೆ 2.30 ಕ್ಕೆ ಡೇರಾ ಬಾಬಾ ನಾನಕ್ ಅನ್ನು ಈ ರೈಲು ತಲುಪಲಿದೆ.
ಯಾತ್ರಿಕರು ಭಾರೀ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇರುವುದರಿಂದ ರೈಲ್ವೆ ಸಚಿವಾಲಯವು ಐತಿಹಾಸಿಕ ಪಟ್ಟಣಗಳಾದ ಡೇರಾ ಬಾಬಾ ನಾನಕ್ ಮತ್ತು ಸುಲ್ತಾನಪುರ ಲೋಧಿಯನ್ನು ಸಂಪರ್ಕಿಸುವ ಮತ್ತೊಂದು ರೈಲುಗಳನ್ನು ಸಹ ಓಡಿಸಲಿದ್ದು, ಇದು ಡೇರಾ ಬಾಬಾ ನಾನಕ್ನಿಂದ ರಾತ್ರಿ 7.15 ಕ್ಕೆ ಹೊರಟು ಬೆಳಿಗ್ಗೆ 1.30 ಕ್ಕೆ ತನ್ನ ಗುರಿಯನ್ನು ತಲುಪಲಿದೆ. ರೈಲಿನ ಸಂಚಾರವನ್ನು ನವೆಂಬರ್ 4 ರಿಂದ ದ್ವಿಗುಣಗೊಳಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.