ನವದೆಹಲಿ: ನವದುರ್ಗೆಯರನ್ನು ಆರಾಧಿಸುವ ನವರಾತ್ರಿ ಸಂಭ್ರಮ ದೇಶದಾದ್ಯಂತ ಇಂದಿನಿಂದ ಆರಂಭಗೊಂಡಿದೆ. ಒಂಬತ್ತು ದಿನಗಳ ಸಂಭ್ರಮದ ಮೊದಲ ದಿನವಾದ ಇಂದು ಅಪಾರ ಸಂಖ್ಯೆಯ ಭಕ್ತಾದಿಗಳು ದೇಗುಲಗಳಿಗೆ ಭೇಟಿ ನೀಡಿ ಶ್ರೀ ದೇವಿಯ ದರ್ಶನವನ್ನು ಪಡೆದುಕೊಂಡು ಪುನೀತರಾಗುತ್ತಿದ್ದಾರೆ.
ಕರ್ನಾಟಕದ ಕಟೀಲು, ಶೃಂಗೇರಿ, ಮಹಾರಾಷ್ಟ್ರದ ಮಹಾಲಕ್ಷ್ಮಿ ದೇಗುಲ, ನವದೆಹಲಿಯ ಕಲ್ಕಾಜಿ, ಜಂಡೆವಾಲನ್ ದೇಗುಲಗಳು ಸೇರಿದಂತೆ ದೇಶದ ನಾನಾ ಭಾಗಗಳ ದೇವಸ್ಥಾನಗಳು ಶ್ರೀದೇವಿಯ ಆರಾಧನೆಗೆ ಸರ್ವಾಲಂಕಾರಗೊಂಡಿದ್ದು, ಭಕ್ತಾದಿಗಳು ದೇವಿಯ ದರ್ಶನ ಪಡೆಯಲು ಸರತಿಸಾಲಿನಲ್ಲಿ ನಿಂತುಕೊಂಡಿರುವ ದೃಶ್ಯ ಸಾಮಾನ್ಯವಾಗಿದೆ.
ಸೆಪ್ಟೆಂಬರ್ 29 ರಿಂದ ಆರಂಭವಾಗಿ ಅಕ್ಟೋಬರ್ 7ರವರೆಗೂ ನವರಾತ್ರಿ ಸಂಭ್ರಮ ಮುಂದುವರೆಯಲಿದೆ. ನವ ದಿವಸಗಳ ಕಾಲ ನವದುರ್ಗೆಯರನ್ನು ಆರಾಧನೆ ಮಾಡಲಾಗುತ್ತದೆ. ವ್ರತಾಚರಣೆ, ಉಪವಾಸ ಸೇರಿದಂತೆ ಹಲವಾರು ಸಾಂಪ್ರದಾಯಿಕ ವಿಧಿವಿಧಾನಗಳನ್ನು ನವರಾತ್ರಿಯ ವೇಳೆಯಲ್ಲಿ ಭಕ್ತರು ಆಚರಣೆ ಮಾಡುತ್ತಾರೆ.
ನವರಾತ್ರಿ ಕಳೆದ ನಂತರದ ಕೊನೆಯ ದಿನವನ್ನು ವಿಜಯದಶಮಿಯಾಗಿ ಆಚರಣೆ ಮಾಡಲಾಗುತ್ತದೆ. ದುರ್ಗಾಮಾತೆಯ ಮಹಿಷಾಸುರನನ್ನು ಸಂಹಾರ ಮಾಡಿದ ದ್ಯೋತಕವಾಗಿ ವಿಜಯದಶಮಿಯನ್ನು ಆಚರಣೆ ಮಾಡಲಾಗುತ್ತದೆ.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.