ನವದೆಹಲಿ: ದೆಹಲಿ ಮತ್ತು ಕಾತ್ರ ನಡುವೆ ಸಂಚರಿಸಲಿರುವ ಎರಡನೇ ಅತ್ಯಾಧುನಿಕ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಅಕ್ಟೋಬರ್ 3 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಾಲನೆಯನ್ನು ನೀಡಲಿದ್ದಾರೆ.
ಈ ಬಹುನಿರೀಕ್ಷಿತ ರೈಲು ಕಾರ್ಯಾಚರಣೆಯನ್ನು ಪ್ರಾರಂಭಿಸುವ ಕುರಿತು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ಪ್ರಕಟಣೆ ಹೊರಡಿಸಿದ್ದಾರೆ. ಹಿಂದೂ ನಂಬಿಕೆಯ ಪ್ರಕಾರ ಶುಭ ದಿನವಾದ ಶಾರದೋಯ ನವರಾತ್ರಿಯಂದು ರೈಲಿನ ಕಾರ್ಯಾಚರಣೆ ಪ್ರಾರಂಭವಾಗುತ್ತಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ದೆಹಲಿ ಮತ್ತು ಕಾತ್ರ ನಡುವಿನ ಪ್ರಸ್ತುತ ಪ್ರಯಾಣಕ್ಕೆ ತಗಲುವ ಸಮಯವನ್ನು 12 ಗಂಟೆಗಳಿಂದ ಕೇವಲ 8ಕ್ಕೆ ಇಳಿಸಲಿದೆ.
ವೈಷ್ಣೋ ದೇವಿ ದೇವಾಲಯಕ್ಕೆ ತೀರ್ಥಯಾತ್ರೆಯನ್ನು ಕೈಗೊಳ್ಳುವ ಭಕ್ತಾದಿಗಳಿಗೆ ಈ ರೈಲಿನಿಂದ ಸಾಕಷ್ಟು ಪ್ರಯೋಜನವಾಗಲಿದೆ. ಎರಡನೆಯ ವಂದೇ ಭಾರತ್ ಎಕ್ಸ್ಪ್ರೆಸ್ ಇದಾಗಿದ್ದು, ಮೊದಲನೆಯದಕ್ಕಿಂತ ಹೆಚ್ಚಿನ ಸುಧಾರಣೆಗಳೊಂದಿಗೆ ಕಾರ್ಯಾರಂಭ ಮಾಡಲಿದೆ. ಹೆಚ್ಚು ಆರಾಮದಾಯಕ ಆಸನಗಳು ಮತ್ತು ದೊಡ್ಡದಾದ ಪ್ಯಾಂಟ್ರಿಯನ್ನು ಇದು ಹೊಂದಿದೆ.
ಈ ರೈಲು ಅಂಬಾಲಾ, ಲುಧಿಯಾನ ಮತ್ತು ಜಮ್ಮುಗಳಲ್ಲಿ ಕೇವಲ ಮೂರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ದೆಹಲಿಯಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಪ್ರಯಾಣವನ್ನು ಪೂರ್ಣಗೊಳಿಸಲಿದೆ. ವಾಪಾಸ್ ಬರುವಾಗ ಮಧ್ಯಾಹ್ನ 3 ಗಂಟೆಗೆ ಕತ್ರಾದಿಂದ ಹೊರಟು 11 ಗಂಟೆಯ ಹೊತ್ತಿಗೆ ದೆಹಲಿಯನ್ನು ತಲುಪಲಿದೆ.
देश की सांस्कृतिक राजधानी वाराणसी तक पहली वंदेभारत एक्सप्रेस के बाद अब रेलवे शारदीय नवरात्र के शुभ अवसर पर देश की दूसरी वंदेभारत एक्सप्रेस दिल्ली से कटरा तक चलाने जा रहा है।
इस आधुनिकतम ट्रेन को गृह मंत्री श्री @AmitShah जी 3 अक्तूबर को हरी झंडी दिखाकर रवाना करेंगे। pic.twitter.com/7zyDW02mHc
— Piyush Goyal (@PiyushGoyal) September 27, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.