ಕೊಲ್ಲಂ: ಭಾರತದ ಕರಾವಳಿ ಮತ್ತು ಸಮುದ್ರ ಭದ್ರತೆಯನ್ನು ಖಚಿತಪಡಿಸುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕೇರಳದ ಕೊಲ್ಲಂನಲ್ಲಿ ಮಾತನಾಡಿದ ಸಿಂಗ್ ಅವರು, “ವಿದೇಶಿ ಭಯೋತ್ಪಾದಕರು ಭಾರತ ಕರಾವಳಿಯ ಮೇಲೆ ದಾಳಿ ನಡೆಸುವ ಪ್ರಯತ್ನವನ್ನು ನಡೆಸುತ್ತಿದ್ದಾರೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ನಮ್ಮ ಕರಾವಳಿ ಮತ್ತು ಸಮುದ್ರದ ಭದ್ರತೆಯು ಬಲಿಷ್ಠವಾಗಿದೆ ಎಂಬ ಭರವಸೆಯನ್ನು ನೀಡಲು ನಾನು ಬಯಸುತ್ತೇನೆ”ಎಂದಿದ್ದಾರೆ.
ಮಾತಾ ಅಮೃತಾನಂದಮಯಿ ಅವರ 66ನೇ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ರಾಜನಾಥ್ ಸಿಂಗ್ ಕೊಲ್ಲಂಗೆ ಆಗಮಿಸಿದ್ದರು.
“ಪುಲ್ವಾಮ ದಾಳಿ ನಡೆದ ಕೆಲವೇ ದಿನಗಳ ಬಳಿಕ ನಾವು ಪಾಕಿಸ್ಥಾನದ ಗಡಿಯೊಳಗೆ ನುಗ್ಗಿ ವಾಯು ದಾಳಿಯನ್ನು ನಡೆಸಿದ್ದೆವು. ನಾವು ಯಾರಿಗೂ ತೊಂದರೆ ಕೊಡುವುದಿಲ್ಲ, ಯಾರದರೂ ನಮಗೆ ತೊಂದರೆ ಕೊಡು ಬಂದರೆ ಅವರನ್ನು ನಾವು ಬಿಡುವುದಿಲ್ಲ, ಶಾಶ್ವತವಾದ ಶಾಂತಿಗೆ ಅವರನ್ನು ದೂಡುತ್ತೇವೆ” ಎಂದಿದ್ದಾರೆ.
ತನ್ನ ಸೈನಿಕರ ತ್ಯಾಗವನ್ನು ಸ್ಮರಿಸಿಕೊಳ್ಳದ ರಾಷ್ಟ್ರವನ್ನು ವಿಶ್ವದ ಯಾರೂ ಗೌರವಿಸಲು ಸಾಧ್ಯವಿಲ್ಲ ಎಂದ ಅವರು, ದೇಶದ ಜನರು ಹುತಾತ್ಮ ಯೋಧರ ಕುಟುಂಬಗಳೊಂದಿಗೆ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.