ನವದೆಹಲಿ: ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ನಲ್ಲಿ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್)ನ 19 ಚಿಕಿತ್ಸಾ ಪ್ಯಾಕೇಜ್ಗಳನ್ನು ಸೇರಿಸಲು ಆಯುಷ್ ಸಚಿವಾಲಯ ಪ್ರಸ್ತಾಪಿಸಿದೆ ಎಂದು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಹೇಳಿದ್ದಾರೆ.
ನರಸಂಬಂಧಿ ಕಾಯಿಲೆಗಳು, ಸಂಧಿವಾತ ಇತ್ಯಾದಿಗಳಿಗೆ ಚಿಕಿತ್ಸೆ ನೀಡುವ ಪ್ರಸ್ತಾಪವನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ತಿಳಿಸಿದ್ದಾರೆ. ಪ್ಯಾಕೇಜ್ಗಳಲ್ಲಿ ಪಂಚಕರ್ಮ, ಕಪ್ಪಿಂಗ್ ಥೆರಪಿ ಮತ್ತು ವರ್ಮಮ್ ಥೆರಪಿ ಮೂಲಕ ನೀಡುವ ಚಿಕಿತ್ಸೆಗಳೂ ಸೇರಿವೆ ಎಂದು ತಿಳಿಸಿದ್ದಾರೆ.
“19 ಆಯುಷ್ ಪ್ಯಾಕೇಜ್ಗಳನ್ನು ಸೇರಿಸುವ ಪ್ರಸ್ತಾಪವನ್ನು ಅಂತಿಮಗೊಳಿಸಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ” ಎಂದು ಆಯುಷ್ನ ರಾಜ್ಯ ಖಾತೆ ಸಚಿವ ನಾಯಕ್ ಹೇಳಿದ್ದಾರೆ. ಈ ವೇಳೆ ಅವರು 100 ದಿನಗಳಲ್ಲಿ ತಮ್ಮ ಸಚಿವಾಲಯ ಮಾಡಿದ ಸಾಧನೆಗಳನ್ನೂ ವಿವರಿಸಿದ್ದಾರೆ.
ಹೆಚ್ಚುವರಿ ಆಯುಷ್ ಚಿಕಿತ್ಸೆಗಳಿಗೆ ವಿಮೆಯನ್ನು ವಿಸ್ತರಿಸುವ ಮಾರ್ಗಸೂಚಿಗಳನ್ನು ಸಹ ಅಂತಿಮಗೊಳಿಸಲಾಗಿದೆ ಎಂದು ನಾಯಕ್ ಹೇಳಿದ್ದಾರೆ. ಪ್ರಸ್ತಾವನೆಗಳ ಪರಿಶೀಲನೆಯ ಆಧಾರದ ಮೇಲೆ ರಾಷ್ಟ್ರೀಯ ಆಯುಷ್ ಮಿಷನ್ (ಎನ್ಎಎಂ) ಅಡಿಯಲ್ಲಿನ ಕಾರ್ಯಗಳಿಗಾಗಿ ರಾಜ್ಯಗಳಿಗೆ 325 ಕೋಟಿ ರೂ.ಗಳ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನೀತಿ ಆಯೋಗ ಮತ್ತು ಇನ್ವೆಸ್ಟ್ ಇಂಡಿಯಾ ಸಹಯೋಗದೊಂದಿಗೆ, ಸಮಗ್ರ ಆರೋಗ್ಯ ಸಂಶೋಧನೆಗಾಗಿ (ಎಸ್ಐಹೆಚ್ಆರ್) 490 ಕೋಟಿ ರೂ.ಗಳ ವಿನಿಯೋಗವನ್ನು ಅಂತಿಮಗೊಳಿಸಲಾಗಿದೆ ಎಂದು ನಾಯಕ್ ಹೇಳಿದ್ದಾರೆ. ಆಧುನಿಕ ಔಷಧದೊಂದಿಗೆ ಆಯುಷ್ ವ್ಯವಸ್ಥೆಗಳನ್ನು ಏಕೀಕರಿಸುವ ಸಾಮರ್ಥ್ಯವನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಇದು ಕಾರ್ಯೋನ್ಮುಖವಾಗಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.