ನವದೆಹಲಿ: ನವದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 6 ನೇ ‘ಭಾರತ ಜಲ ಸಪ್ತಾಹ 2019’ ಅನ್ನು ಉದ್ಘಾಟಿಸಿದರು. ಈ ಸಪ್ತಾಹವನ್ನು ‘ಜಲ ಸಹಕಾರ – 21 ನೇ ಶತಮಾನದ ಸವಾಲುಗಳನ್ನು ನಿಭಾಯಿಸುವಿಕೆ’ ಎಂಬ ಥೀಮ್ನೊಂದಿಗೆ ಆಚರಿಸಲಾಗುತ್ತಿದೆ. ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನಗೊಳಿಸುವಿಕೆ ಇಲಾಖೆಯ ವತಿಯಿಂದ ಇದನ್ನು ಆಯೋಜಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, “ನೀರಿಗೆ ಸಂಬಂಧಿಸಿದ ಸವಾಲುಗಳನ್ನು ನಾವು ಪರಿಣಾಮಕಾರಿಯಾಗಿ ಎದುರಿಸಬೇಕಾದರೆ ವಿವಿಧ ಪಾಲುದಾರರ ನಡುವಿನ ಸಹಕಾರವು ನಿರ್ಣಾಯಕವಾಗಿದೆ. ನೀರಿನ ಸಮಸ್ಯೆಗಳನ್ನು ಸರ್ಕಾರ ಅಥವಾ ಕೇವಲ ಒಂದು ರಾಷ್ಟ್ರದಿಂದ ಮಾತ್ರ ಪರಿಹರಿಸಲಾಗದು, ಇದು ಬಹುಮುಖಿ ಮತ್ತು ಸಂಕೀರ್ಣವಾದ ಸಮಸ್ಯೆಯಾಗಿದೆ. ಎಲ್ಲರೂ ಸುಸ್ಥಿರ ಜಲ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡಬೇಕಿದೆ, ಇದಕ್ಕಾಗಿ ಎಲ್ಲಾ ರಾಷ್ಟ್ರಗಳು ಮತ್ತು ಸಮುದಾಯಗಳು ಒಗ್ಗೂಡಬೇಕು” ಎಂದಿದ್ದಾರೆ.
ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಬಗ್ಗೆ ನಾವು ಹೆಚ್ಚಾಗಿ ಮಾತನಾಡುತ್ತೇವೆ, ಆದರೀಗ ನೀರಿನ ಸಂರಕ್ಷಣೆಯ ಬಗ್ಗೆ ಮಾತನಾಡುವ ಸಮಯ ಬಂದಿದೆ. ನಮ್ಮ ರೈತರು, ಕಾರ್ಪೊರೇಟ್ ಮುಖಂಡರು ಮತ್ತು ಸರ್ಕಾರಿ ಸಂಸ್ಥೆಗಳು, ವಿವಿಧ ಬೆಳೆಗಳು ಮತ್ತು ಕೈಗಾರಿಕೆಗಳ ನೀರಿನ ಸಂರಕ್ಷಣೆಯನ್ನು ಸಕ್ರಿಯವಾಗಿ ಪರಿಗಣಿಸುವ ಅಗತ್ಯವಿದೆ. ಕನಿಷ್ಠ ನೀರಿನ ಬಳಕೆಯನ್ನು ಹೊಂದಿರುವ ಕೃಷಿ ಮತ್ತು ಕೈಗಾರಿಕಾ ಪದ್ಧತಿಗಳನ್ನು ನಾವು ಪ್ರೋತ್ಸಾಹಿಸಬೇಕಾಗಿದೆ ಎಂದಿದ್ದಾರೆ.
ಅಂತರ್ಜಲ ಸಂಪನ್ಮೂಲಗಳನ್ನು ನಿರ್ವಹಿಸುವುದು ಮತ್ತು ಅಳೆಯುವುದು ಜಲ ಆಡಳಿತದ ಪ್ರಮುಖ ಅಂಶವಾಗಿದೆ ಎಂದ ಅವರು, ಬೋರ್ವೆಲ್ ಯಂತ್ರಗಳ ವ್ಯಾಪಕ ಬಳಕೆಯು ಅಂತರ್ಜಲವನ್ನು ಅನಿಯಂತ್ರಿತ ಮತ್ತು ಅತಿಯಾದ ಶೋಷಣೆಗೆ ಒಳಪಡಿಸುತ್ತಿದೆ ಎಂದಿದ್ದಾರೆ.
“ನಾವು ನಮ್ಮ ಅಂತರ್ಜಲವನ್ನು ಗೌರವಿಸಬೇಕು ಮತ್ತು ಅದಕ್ಕೆ ಜವಾಬ್ದಾರರಾಗಿರಬೇಕು. ನಮ್ಮ ಅಮೂಲ್ಯ ಮಳೆನೀರು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಅಸ್ತಿತ್ವದಲ್ಲಿರುವ ಜಲಾಶಯಗಳು, ಅಣೆಕಟ್ಟುಗಳು, ಇತರ ಜಲಮೂಲಗಳನ್ನು ಜಾಗರೂಕವಾಗಿ ಬಳಸಿಕೊಳ್ಳುವ ಮೂಲಕ ಮತ್ತು ನಮ್ಮ ಮನೆಗಳು ಮತ್ತು ನೆರೆಹೊರೆಗಳಲ್ಲಿ ನೀರಿನ ಕೊಯ್ಲು ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ನಮ್ಮ ಮಳೆನೀರನ್ನು ಸಂಗ್ರಹಿಸಿ ಸಂರಕ್ಷಿಸಬಹುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.