ಭತಿಂದ: ಸಾರಿಗೆ ದಟ್ಟಣೆಯನ್ನು ನಿಯಂತ್ರಿಸುವ ಜೊತೆಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಪಂಜಾಬಿನ ಭಟಿಂಡಾದ ಸಂಚಾರಿ ಪೊಲೀಸ್ ಗುರುಭಕ್ಷ್ ಸಿಂಗ್ ಅವರು ಎಲ್ಲರ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.
ಮಣ್ಣು ಮತ್ತು ಇಂಟರ್ಲಾಕ್ನ ಚಿಕ್ಕ ಚಿಕ್ಕ ತುಂಡುಗಳನ್ನು ಬಳಸಿ ಅವರು ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದಾರೆ, ಅವರ ಸಹೋದ್ಯೋಗಿಗಳು ಅವರು ಮಾಡುವ ಈ ಒಳ್ಳೆಯ ಕಾರ್ಯಕ್ಕೆ ಸಹಾಯವನ್ನು ಮಾಡುತ್ತಿದ್ದಾರೆ.
“ಮಾನವಕುಲದ ಸೇವೆಯು ಭಕ್ತಿಯ ದೊಡ್ಡ ರೂಪ ಎಂದು ನಮ್ಮ ಗುರುಗಳು ಸಾರಿದ್ದಾರೆ. ರಸ್ತೆಯ ಗುಂಡಿ ಮುಚ್ಚುವ ಕೆಲಸ ಮಾಡುತ್ತಿರುವುದರಿಂದ ನನಗೆ ಸಂತೋಷವಾಗುತ್ತಿದೆ. ನಿವೃತ್ತಿಯ ನಂತರವೂ ನಾನು ಈ ಕೆಲಸವನ್ನು ಮುಂದುವರಿಸುತ್ತೇನೆ” ಎಂದು ಗುರುಭಕ್ಷ್ ಸಿಂಗ್ ಹೇಳಿದ್ದಾರೆ.
ಸಿಂಗ್ ಅವರಿಗೆ 1000 ರೂಪಾಯಿಯನ್ನು ನಗದು ಬಹುಮಾನವಾಗಿ ನೀಡಲಾಗುತ್ತಿದೆ ಮತ್ತು ಅವರ ಹೆಸರನ್ನು ಬಡ್ತಿಗಾಗಿ ಶಿಫಾರಸ್ಸು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಅತ್ಯುತ್ತಮ ಯುವಕರನ್ನು ಸಂಚಾರಿ ಪೊಲೀಸ್ ಇಲಾಖೆಗೆ ಆಯ್ಕೆಮಾಡಲಾಗುತ್ತಿದೆ, ಅವರು ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಟ್ಟಣೆಯನ್ನು ನಿಯಂತ್ರಿಸುವುದು ಮತ್ತು ಸಾರ್ವಜನಿಕರಿಗೆ ಚಲನ್ ಹೆಸರಲ್ಲಿ ಕಿರುಕುಳ ನೀಡದೇ ಇರುವುದು ನಮ್ಮ ಉದ್ದೇಶವಾಗಿದೆ. ಸಾಮಾಜಿಕ ಕಾರ್ಯಗಳತ್ತ ಸಂಚಾರಿ ಪೊಲೀಸರು ಹೆಚ್ಚು ಗಮನಹರಿಸಬೇಕು ಮತ್ತು ಚಲನ್ ಬದಲು ಸಾರ್ವಜನಿಕರಿಗೆ ಅರಿವು ಮೂಡಿಸಲು ಸಹಾಯ ಮಾಡಬೇಕು ಎಂಬುದು ನಮ್ಮ ಉದ್ದೇಶ” ಎಂದು ಡಿಎಸ್ಪಿ ಸಿಟಿ ಗುರ್ಜಿತ್ ಸಿಂಗ್ ರೊಮಾನಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.