ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 69ನೇ ಹುಟ್ಟು ಹಬ್ಬದ ಪ್ರಯುಕ್ತ ಸೆ.17ರಂದು ನವದೆಹಲಿಯಲ್ಲಿ ಆರಂಭವಾದ ‘ನ್ಯಾಷನಲ್ ಯುನಿಟಿ ಥ್ರೂ ಮಾನ್ಯುಮೆಂಟ್’ ಎಂಬ ಪ್ರದರ್ಶನದಲ್ಲಿ ಮಂಗ್ಲಾ ಡ್ಯಾಂ ಸರೋವರದ ತಟದಲ್ಲಿರುವ ರಾಮ್ಕೋಟ್ ಕೋಟೆ, ಗಿಲ್ಗಿಟ್ ಬಲೂಚಿಸ್ಥಾನದಲ್ಲಿರುವ ಪ್ರಾಚೀನ ಬುದ್ಧ ಮುಜಸ್ಸಮ, ಶಾರದಾ ಪೀಠ, ಅಲಿ ಬಾಗ್ ಗುರುದ್ವಾರ ಮತ್ತು ಖುರಟ್ಟದಲ್ಲಿರುವ ಕಾರಂಜಿ ಮತ್ತು ಉದ್ಯಾನಗಳ ಸುಂದರ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಈ ಎಲ್ಲಾ ಸ್ಥಳಗಳು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿದೆ.
ಪ್ರಧಾನಿ ನರೇಂದ್ರ ಮೋದಿಯವರ 69 ನೇ ಜನ್ಮದಿನದಂದು ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರವು, ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಏಕತೆ, ಶಾಂತಿ ಮತ್ತು ಭಾತೃತ್ವವನ್ನು ಆಚರಿಸುವ ಉದ್ದೇಶದೊಮದಿಗೆ ಪ್ರದರ್ಶನವನ್ನು ಆಯೋಜನೆಗೊಳಿಸಿದೆ.
ಈ ಕಾರ್ಯಕ್ರಮವನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಪ್ರಹ್ಲಾದ್ ಸಿಂಗ್ ಪಟೇಲ್ ಅವರು ದೆಹಲಿಯ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದಲ್ಲಿ (ಎನ್ಎಂಎ) ಉದ್ಘಾಟಿಸಿದರು.
ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಪ್ರಾಚೀನ ಸ್ಮಾರಕಗಳ ಛಾಯಾಚಿತ್ರಗಳ ಜೊತೆಗೆ, ಪ್ರದರ್ಶನದಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಇತರ ಸ್ಥಳಗಳ ಸ್ಮಾರಕಗಳ ಅದ್ಭುತ ಚಿತ್ರಗಳನ್ನು ಕೂಡ ಪ್ರದರ್ಶನ ಮಾಡಲಾಗಿದೆ.
ಪ್ರದರ್ಶನವು ದೇಶದ ಶ್ರೀಮಂತ ಇತಿಹಾಸವನ್ನು ಸಾರುವ ಚಿತ್ರಗಳನ್ನು ಅನಾವರಣಗೊಳಿಸಿದೆ. ಕಾಶ್ಮೀರದ ದಾಲ್ ಸರೋವರದ ಮೇಲಿರುವ ಬೆಟ್ಟದ ಶಂಕರಾಚಾರ್ಯ ದೇವಸ್ಥಾನದ ಛಾಯಾಚಿತ್ರಗಳು, 1835 ರಲ್ಲಿ ಮೊದಲ ಡೋಗ್ರಾ ದೊರೆ ಮಹಾರಾಜ ಗುಲಾಬ್ ಸಿಂಗ್ ನಿರ್ಮಿಸಿದ ರಘುನಾಥ ದೇವಸ್ಥಾನ ಮತ್ತು ಲಡಾಖನಲ್ಲಿರುವ ದೊಡ್ಡ ಮತ್ತು ಹಳೆಯ ಮಠಗಳಲ್ಲಿ ಒಂದಾದ ಲಾಮಾಯೂರುವೂ ಪ್ರದರ್ಶನದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿತ್ತು.
ಪ್ರಧಾನಿ ಮೋದಿ ಅವರ ಪ್ರಸ್ತುತ ಜೀವನ ಮತ್ತು ಬಾಲ್ಯದ ಛಾಯಾಚಿತ್ರಗಳನ್ನು ಕೂಡ ಪ್ರದರ್ಶಿಸಲಾಗಿದೆ.
On the occasion of birthday of PM Sh @narendramodi , inauguration of a first of its kind exhibition in #NewDelhi , depicting wide range of monuments from Vad nagar to #Jammu & #Kashmir and #Ladakhand for the first time also displaying photographs and list of Monuments in #PoJK . pic.twitter.com/RFbZUrelHF
— Dr Jitendra Singh (@DrJitendraSingh) September 17, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.