ನವದೆಹಲಿ: 57 ವರ್ಷಗಳ ಹಿಂದೆ ಕಳವು ಮಾಡಲಾಗಿದ್ದ 12ನೇ ಶತಮಾನಕ್ಕೆ ಸೇರಿದ್ದ ಬುದ್ಧನ ಪ್ರತಿಮೆಯನ್ನು ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಯುಕೆಯಲ್ಲಿ ನಡೆದ ಹರಾಜು ಕಾರ್ಯಕ್ರಮದಲ್ಲಿ ಈ ವಿಗ್ರಹ ಪತ್ತೆಯಾಗಿತ್ತು. ಹಸ್ತಾಂತರದ ವೇಳೆ ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ, ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ ಹಿರಿಯ ಅಧಿಕಾರಿಗಳು, ಸಂಸ್ಕೃತಿ ಸಚಿವಾಲಯ, ಭಾರತದ ಪುರಾತತ್ವ ಇಲಾಖೆ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಕ್ರಿ.ಶ 12 ನೇ ಶತಮಾನದ ಭೂಮಿಪಾಸರ ಮುದ್ರೆಯಲ್ಲಿ ಕುಳಿತಿರುವ ಬುದ್ಧನ ಕಂಚಿನ ಪ್ರತಿಮೆಯು 1961ರ ಆಗಸ್ಟ್ ತಿಂಗಳಿನಲ್ಲಿ ಪುರಾತತ್ವ ಸರ್ವೇ ಆಫ್ ಇಂಡಿಯಾದ ನಳಂದ ಸೈಟ್ ಮ್ಯೂಸಿಯಂನಿಂದ ಕಳವಾಗಿತ್ತು. ಇಲ್ಲಿಂದ ಒಟ್ಟು 19 ಪ್ರತಿಮೆಗಳನ್ನು ಕದಿಯಲಾಗಿತ್ತು, ಅದರಲ್ಲಿ ಇದು ಕೂಡ ಒಂದಾಗಿದೆ. ಸುಮಾರು 57 ವರ್ಷಗಳ ನಂತರ, 2018ರಲ್ಲಿ ಲಂಡನ್ ಮೂಲದ ವ್ಯಾಪಾರಿಯೊಬ್ಬರು ಆಯೋಜಿಸಿದ್ದ ಹರಾಜಿನಲ್ಲಿ ಈ ವಿಗ್ರಹ ಪತ್ತೆಯಾಗಿದ್ದು. ನಂತರ ಹಲವಾರು ಪ್ರಕ್ರಿಯೆಗಳನ್ನು ನಡೆಸಿ ಈ ವಿಗ್ರಹವನ್ನು ಭಾರತಕ್ಕೆ ತರಲಾಗಿದೆ.
ಪ್ರತಿಮೆಯನ್ನು ಲಂಡನ್ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡುವುದಕ್ಕೂ ಮುನ್ನ ಹಲವಾರು ಮಂದಿಯ ಬಳಿ ಈ ವಿಗ್ರಹ ಓಡಾಡಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಬುದ್ಧನ ಪ್ರತಿಮೆಯು ಭಾರತದಿಂದ ಕಳ್ಳತನವಾದ ವಿಗ್ರಹವೇ ಎಂದು ಖಚಿತವಾದ ನಂತರ, ವ್ಯಾಪಾರಿ ಮತ್ತು ಸಾಗಾಣೆದಾರ ಇಬ್ಬರೂ ಪೊಲೀಸರೊಂದಿಗೆ ಸಹಕರಿಸಿದರು ಮತ್ತು ಶಿಲ್ಪವನ್ನು ಭಾರತಕ್ಕೆ ಹಿಂದಿರುಗಿಸಲು ನಿರ್ಧರಿಸಿದರು. ಕಲಾ ಉತ್ಸಾಹಿಗಳ ಆನ್ಲೈನ್ ಗುಂಪು ಇಂಡಿಯಾ ಪ್ರೈಡ್ ಪ್ರಾಜೆಕ್ಟ್, ವಿಗ್ರಹವನ್ನು ಗುರುತಿಸುವಲ್ಲಿ, ಭಾರತಕ್ಕೆ ವಾಪಾಸ್ ಕರೆತರುವಲ್ಲಿ ಸಕ್ರಿಯ ಪಾತ್ರ ವಹಿಸಿದೆ.
Finance Minister Smt. @nsitharaman handed over a antique Bronze Idol of Buddha to Union Culture Minister, Shri @prahladspatel today in New Delhi. The Bronze Idol of ‘Buddha seated in the Bhumisparsha Mudra’ was stolen on 22nd August, 1961 from Nalanda Museum of ASI. pic.twitter.com/s7uOa5puNn
— Ministry of Culture (@MinOfCultureGoI) September 17, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.