ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 69 ನೇ ಹುಟ್ಟುಹಬ್ಬವನ್ನು ಇಂದು ಆಚರಿಸುತ್ತಿದ್ದಾರೆ. ಭಾರತ ಮತ್ತು ವಿಶ್ವದಾದ್ಯಂತದ ಜನರು ಪ್ರಧಾನಮಂತ್ರಿಯವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಅದರಲ್ಲೂ ಅವರ ತವರು ಗುಜರಾತ್ನಲ್ಲಿ ವಿಶೇಷ ದಿನವನ್ನು ಅತ್ಯಂತ ವಿಶೇಷವಾಗಿಯೇ ಆಚರಿಸಲಾಗುತ್ತಿದೆ.
ತಮ್ಮ ಜನ್ಮದಿನಾಚರಣೆಯನ್ನು ಆಚರಿಸಲು ಪ್ರಧಾನಿ ಸೋಮವಾರ ರಾತ್ರಿ ಗುಜರಾತ್ನ ಅಹಮದಾಬಾದ್ಗೆ ಆಗಮಿಸಿದ್ದಾರೆ. ಇಂದು ಅವರು ‘ಏಕತಾ ಪ್ರತಿಮೆ’ಗೆ ಆಗಮಿಸಿ ಸರ್ದಾರ್ ವಲ್ಲಭಾಭಾಯ್ ಪಟೇಲ್ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ಕವಾಡಿಯಾದಲ್ಲಿರುವ ಚಿಟ್ಟೆ ಉದ್ಯಾನಕ್ಕೂ ತೆರಳಿ, ಅಲ್ಲಿ ಸಾವಿರಾರು ಚಿಟ್ಟೆಗಳನ್ನು ಹುದೋಟಕ್ಕೆ ಅರ್ಪಣೆ ಮಾಡಿದ್ದಾರೆ. ಇಂದು ಅವರು ನರ್ಮದಾ ನದಿಗೆ ಆರತಿಯನ್ನೂ ನೆರವೇರಿಸಲಿದ್ದಾರೆ. ‘ನಮಾಮಿ ದೇವಿ ನರ್ಮದಾ ಮಹೋತ್ಸವ’ದಲ್ಲಿ ಭಾಗಿಯಾಗಲಿದ್ದಾರೆ. ಏಕತಾ ಪ್ರತಿಮೆ ಬಳಿ ಸ್ಥಾಪನೆ ಮಾಡಲಾಗಿರುವ ಜಂಗಲ್ ಸಫಾರಿ ಮತ್ತು ಟೂರಿಸ್ಟ್ ಪಾರ್ಕ್ ಅಧಿಕಾರಿಗಳೊಂದಿಗೆ ಸಭೆಯನ್ನೂ ಮೋದಿ ನಡೆಸಲಿದ್ದಾರೆ. ತಮ್ಮ ತಾಯಿ ಹಿರಾಬೆನ್ ಅವರ ಬಳಿಗೆ ತೆರಳಿ ಆಶೀರ್ವಾದವನ್ನು ಪಡೆದುಕೊಳ್ಳಲಿದ್ದಾರೆ. ಸಾರ್ವಜನಿಕ ಸಭೆಯನ್ನೂ ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಏಕತಾ ಪ್ರತಿಮೆಗೆ ಭೇಟಿ ನೀಡಿದ ಬಳಿ ಪ್ರಧಾನಿ ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ‘ಸ್ಟ್ಯಾಚು ಆಫ್ ಯುನಿಟಿ’ಯ ಭವ್ಯ ನೋಟವನ್ನು ಸೆರೆಹಿಡಿಯುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ, “ಭವ್ಯವಾದ ಸ್ಟ್ಯಾಚು ಆಫ್ ಯುನಿಟಿಯನ್ನು ನೋಡೋಣ, ಮಹಾನ್ ಸರ್ದಾರ್ ಪಟೇಲ್ ಅವರಿಗೆ ಇದು ಭಾರತದ ಗೌರವ” ಎಂಬ ಒಕ್ಕಣೆಯನ್ನು ನೀಡಿದ್ದಾರೆ.
Reached Kevadia a short while ago.
Have a look at the majestic ‘Statue of Unity’, India’s tribute to the great Sardar Patel. pic.twitter.com/B8ciNFr4p7
— Narendra Modi (@narendramodi) September 17, 2019
ಪ್ರಧಾನಮಂತ್ರಿ ಮೋದಿಯವರ ಜನ್ಮದಿನದ ಅಮಗವಾಗಿ ಬಿಜೆಪಿಯು ಸೆಪ್ಟೆಂಬರ್ 14 ರಿಂದ ಏಳು ದಿನಗಳ ಕಾಲ ‘ಸೇವಾ ಸಪ್ತಾಹ’ವನ್ನು ಆಚರಿಸುತ್ತಿದೆ. ಈ ಹಿನ್ನಲೆಯಲ್ಲಿ ದೇಶಾದ್ಯಂತ ಸೇವೆಗಳು, ಆಚರಣೆಗಳು ಪ್ರಾರಂಭವಾಗಿವೆ. ವಿವಿಧ ಗಣ್ಯರು ಮತ್ತು ಜನಸಾಮಾನ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಮಂತ್ರಿಗೆ ಶುಭ ಹಾರೈಸಿದ್ದಾರೆ.
ದೆಹಲಿಯ ಎಲ್ಲಾ ಜಿಲ್ಲೆಗಳಲ್ಲೂ ‘ಸೇವಾ’ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಂಡಿಯಾ ಗೇಟ್ನಲ್ಲಿ ವಾರ ಪೂರ್ತಿ ವಿಶೇಷವಾದ ನಮೋ ಪ್ರದರ್ಶನವನ್ನು ಆಯೋಜಿಸಲಾಗಿದೆ, ಅಲ್ಲಿ ಬಾಲ್ಯದಿಂದಲೂ ಪ್ರಧಾನಮಂತ್ರಿಯಾಗುವವರೆಗಿನ ಮೋದಿಯವರ ಜೀವನದ ವಿವಿಧ ಆಯಾಮಗಳ ಬಗ್ಗೆ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನವು ಗುಜರಾತ್ನಿಂದ ದೆಹಲಿಯವರೆಗಿನ ಅವರ ರಾಜಕೀಯ ಪ್ರಯಾಣವನ್ನೂ ಪ್ರಸ್ತುತಪಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.