ನವದೆಹಲಿ: ಭಾರತವು ಸೂಪರ್ ಕಂಪ್ಯೂಟರ್ಗಳನ್ನು ವಿದೇಶಗಳಿಂದ ಖರೀದಿಸುವ ಬದಲು ತಾನೇ ನಿರ್ಮಿಸುತ್ತಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಅಶುತೋಷ್ ಶರ್ಮಾ ಗುರುವಾರ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಪರ್ ಕಂಪ್ಯೂಟರ್ಗಳು ಈಗಾಗಲೇ ಐಐಟಿ-ಬಿಎಚ್ಯು ಮತ್ತು ಐಐಟಿ-ಖರಗ್ಪುರದಲ್ಲಿ (1.6 petaflops) ಕಾರ್ಯನಿರ್ವಹಿಸುತ್ತಿದ್ದರೆ, ಮೂರನೆಯದನ್ನು ವಾರದ ಅಂತ್ಯದ ವೇಳೆಗೆ ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ರೂ. 4,500 ಕೋಟಿ ಮೊತ್ತದ ಯೋಜನೆ ಇದಾಗಿದ್ದು, ಒಟ್ಟು ಮೂರು ಹಂತಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದಿದ್ದಾರೆ.
ಮೊದಲ ಹಂತದಲ್ಲಿ, ಮೂರು ಕಂಪ್ಯೂಟರ್ಗಳನ್ನು ಖರೀದಿಸಿ ಮೂರು ಕಂಪ್ಯೂಟರ್ಗಳನ್ನು ನಿರ್ಮಿಸುವುದು ಆರಂಭಿಕ ಯೋಜನೆಯಾಗಿತ್ತು. ಆದರೆ ಖರೀದಿಯು ವಿಳಂಬವಾಗಿದೆ, ಇದು ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಯಿತು. ಅಲ್ಲದೇ, ನಿರ್ಮಾಣ ಮಾದರಿಯನ್ನು ಏಕೀಕರಣಗೊಳಿಸಲು ಮತ್ತು ಹೆಚ್ಚಿನ ದೇಶೀಕರಣದತ್ತ ಗಮನ ಹರಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ಇದು ಪ್ರೇರೇಪಿಸಿತು ಎಂದು ಹಿರಿಯ ವಿಜ್ಞಾನಿಯೂ ಆಗಿರುವ ಶರ್ಮಾ ಹೇಳಿದ್ದಾರೆ.
ಅದರಂತೆ, ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿ-ಡಿಎಸಿ)ಗೆ ಪ್ರಸ್ತಾವನೆಯನ್ನು ಕಳುಹಿಸಲಾಯಿತು ಮತ್ತು ಆ ಕಂಪನಿಯನ್ನು ಆರು ಸೂಪರ್ಕಂಪ್ಯೂಟರ್ಗಳನ್ನು ತಯಾರಿಸಲು ನಿಯೋಜನೆಗೊಳಿಸಲಾಯಿತು ಎಂದಿದ್ದಾರೆ.
ಸಿ-ಡಿಎಸಿ ಭಾರತದಲ್ಲಿ ಮೊದಲ ಸೂಪರ್ ಕಂಪ್ಯೂಟರ್ ‘ಪರಮ್’ ಅನ್ನು ನಿರ್ಮಿಸಿದ ಕೀರ್ತಿಗೂ ಪಾತ್ರವಾಗಿದೆ.
“ಸೂಪರ್ ಕಂಪ್ಯೂಟರ್ಗಳನ್ನು ಆಮದು ಮಾಡಿಕೊಳ್ಳುವುದು ಮೂಲ ಯೋಜನೆಯಾಗಿತ್ತು ಆದರೆ ಕಳೆದ ಮೂರು ವರ್ಷಗಳು ನಾವೇ ಅವುಗಳನ್ನು ನಿರ್ಮಿಸಬಹುದು ಎಂಬ ವಿಶ್ವಾಸವನ್ನು ನೀಡಿತು. ಹೀಗಾಗಿ ಪ್ರಸ್ತುತ ಭಾರತದಲ್ಲಿ ಆರು ಸೂಪರ್ ಕಂಪ್ಯೂಟರ್ಗಳನ್ನು ನಿರ್ಮಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಮೊದಲ ಹಂತದ ಅಡಿಯಲ್ಲಿ, ಮದರ್ಬೋರ್ಡ್ ಮಟ್ಟದಲ್ಲಿ ಏಕೀಕರಣ ಮತ್ತು ಜೋಡಣೆಯನ್ನು ಮಾಡಲಾಗುತ್ತಿದೆ. ಎರಡನೇ ಹಂತವು ಮುಂದಿನ ವರ್ಷ ಆರಂಭವಾಗಲಿದೆ ಮತ್ತು ಚಿಪ್ಸ್ ಹೊರತುಪಡಿಸಿ ಹೆಚ್ಚಿನ ಭಾಗಗಳನ್ನು ದೇಶದೊಳಗೆಯೇ ಒಟ್ಟುಗೂಡಿಸಲಾಗುತ್ತದೆ ಮತ್ತು ಸಂಯೋಜಿಸಲಾಗುತ್ತದೆ. ಮೂರನೇ ಹಂತದ ಅಡಿಯಲ್ಲಿ, ಚಿಪ್ಸ್ ಹೊರತುಪಡಿಸಿ, ನಮ್ಮ ಸ್ವಂತ ಸೂಪರ್ ಕಂಪ್ಯೂಟರ್ ಅನ್ನು ನಾವೇ ತಯಾರಿಸುತ್ತೇವೆ” ಎಂದುಶರ್ಮಾ ಹೇಳಿದ್ದಾರೆ.
ಪ್ರತಿ ಹಂತದಲ್ಲೂ ಸ್ವದೇಶೀಕರಣ ಹೆಚ್ಚಿರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.