ಬೆಳ್ತಂಗಡಿ : ಗುರಿಯನ್ನಿಟ್ಟುಕೊಂಡು, ಧ್ಯೇಯ ಸಾಧನೆಗಾಗಿ ತನ್ನ ಜೀವನವನ್ನು ಸಮಾಜಕ್ಕೆ ಅರ್ಪಿಸಿದ ರಾಧಾಕೃಷ್ಣ ಭಟ್ ಅವರ ಪಥದಲ್ಲಿ ನಾವೆಲ್ಲಾ ಮುನ್ನಡೆಯೋಣ ಎಂದು ಮಂಗಳೂರು ಜಿಲ್ಲಾ ವಿ.ಹಿಂ.ಪ.ಅಧ್ಯಕ್ಷ ಜಗದೀಶ್ ಶೇಣವ ಹೇಳಿದರು.
ಅವರು ಸೋಮವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಪುತ್ತೂರು ಜಿಲ್ಲಾ ವಿಶ್ವ ಹಿಂದು ಪರಿಷತ್ನ ಕಾರ್ಯದರ್ಶಿಗಳಾಗಿದ್ದ ಈಚೆಗೆ ಕೇದಾರನಾಥ ಪ್ರವಾಸದಲ್ಲಿ ನಿಧನ ಹೊಂದಿದ ರಾಧಾಕೃಷ್ಣ ಭಟ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಾ ಸಭೆಯಲ್ಲಿ ನುಡಿನಮನ ಸಲ್ಲಿಸಿದರು.
ಭಟ್ರವರು ನಿಡ್ಲೆಯಲ್ಲಿ ನಿರ್ಮಿಸಲು ಸಂಕಲ್ಪಿಸಿದ ಆಶ್ರಯಧಾಮಕ್ಕೆ ಪರಿಷತ್ ಸರ್ವ ಸಹಕಾರ ನೀಡಿ ಮುಂದುವರಿಸಿಕೊಂಡು ಹೋಗಲು ಸಿದ್ದವಿದೆ ಎಂದರು. ಉಜಿರೆ ದಂತವೈದ್ಯ ದಯಾಕರ್ ಅವರು ಇನ್ನೊಬ್ಬರಿಗೆ ನೋಯದಂತೆ ಕಾರ್ಯ ನಿರ್ವಹಿಸುತ್ತಿದ್ದ ಭಟ್ ಅವರು ರಾತ್ರಿ ಹಗಲೆನ್ನದೆ, ಅದಮ್ಯವಾಗಿ ದುಡಿಯುವ ಹುಮ್ಮಸ್ಸನ್ನು ಹೊಂದಿದ್ದರು. ಹಿಂದೂ ಸಮಾಜದ ಶೋಷಿತರಿಗಾಗಿ, ಬಡವರಿಗಾಗಿ ಅವರ ಮನಸ್ಸು ತುಡಿಯುತ್ತಿತ್ತು ಎಂದರು.
ಬೆಳ್ತಂಗಡಿ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು ಸಾಮಾನ್ಯ ದಸ್ತಾವೇಜು ಬರಹಗಾರರಾಗಿದ್ದ ಭಟ್ ಅವರು ಕಳೆದ ಕೆಲವು ವರ್ಷಗಳಿಂದ ತಮ್ಮ ಜೀವನವನ್ನು ಸಮಾಜಕ್ಕಾಗಿ ಮುಡುಪಾಗಿಟ್ಟಿದ್ದರು. ಅಸಾಮಾನ್ಯ ಕೆಲಸಗಳನ್ನು ಮಾಡುವ ಧೀ ಶಕ್ತಿ ಅವರಲ್ಲಿತ್ತು ಎಂದರು.
ಪುತ್ತೂರು ಜಿಲ್ಲಾ ಬಜರಂಗದಳ ಸಂಚಾಲಕ ಭಾಸ್ಕರ ಧರ್ಮಸ್ಥಳ, ವಿಹಿಂಪ ತಾಲೂಕು ಅಧ್ಯಕ್ಷ ತಾರಾನಾಥ, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ತಾಲೂಕಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಂಜನ್ಗೌಡ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.