ಬೆಳ್ತಂಗಡಿ : ಗೇರುಕಟ್ಟೆಯಲ್ಲಿರುವ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಈ ವರ್ಷ ಶತಮಾನೋತ್ಸವವನ್ನು ಪೂರೈಸಿದ್ದು ಸೆಪ್ಟೆಂಬರ್ ತಿಂಗಳಲ್ಲಿ ಶತಮಾನೋತ್ಸವ ಸಮರೋಪ ಹಾಗೂ ನೂತನ ಸಭಾಭವನದ ಉದ್ಘಾಟನೆ ನಡೆಯಲಿದೆ.
ಶತಮಾನೋತ್ಸವ ಕಾರ್ಯಕ್ರಮವನ್ನು ಸ್ಮರಣೀಯವಾಗಿರಿಸಲು ಬ್ಯಾಂಕಿನ ಶತವರ್ಷಗಳ ಸಾಧನೆಯ ಸ್ಮರಣ ಸಂಚಿಕೆ “ಕಣಜ”ವನ್ನು ಹೊರತರಲು ಬ್ಯಾಂಕಿನ ಅಧ್ಯಕ್ಷ ವಸಂತ ಮಜಲು ಅಧ್ಯಕ್ಷತೆಯಲ್ಲಿ ಸಂಪಾದಕೀಯ ಸಮಿತಿಯನ್ನು ಈಚೆಗೆ ರಚಿಸಲಾಯಿತು.
ಪ್ರಧಾನ ಸಂಪಾದಕರಾಗಿ ನಿವೃತ್ತಉಪನ್ಯಾಸಕ ಮಧೂರು ಮೋಹನ ಕಲ್ಲೂರಾಯ ಅವರನ್ನುಆಯ್ಕೆ ಮಾಡಲಾಯಿತು. ಸಂಪಾದಕೀಯ ಮಂಡಳಿ ಸದಸ್ಯರಾಗಿ ವೆಂಕಟೇಶ್ವರ ಭಟ್ ಬನಶಂಕರಿ, ದಿವಾಕರ ಆಚಾರ್ಯ ಗೇರುಕಟ್ಟೆ, ರವಿರಾಮ ಭಟ್ ಸಿದ್ದಮೂಲೆ, ಕೇಶವ ಬಂಗೇರ, ಚಂದ್ರಶೇಖರಆಚಾರ್ಯ, ರಾಘವ ಎಚ್., ಭುವನೇಶಗೇರುಕಟ್ಟೆ, ರಾಜೇಶ್ ಪೆಂರ್ಬುಡ ಹಾಗೂ ಬ್ಯಾಂಕಿನ ಸಿಬ್ಬಂದಿ ಹರೀಶ್ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಹರಿಪ್ರಸಾದ್, ನಿರ್ದೇಶಕರು ಉಪಸ್ಥಿತರಿದ್ದರು. 18
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.