News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ಮಣ್ಣು ಮತ್ತು ಆತ್ಮದಿಂದ ಶ್ರೀರಾಮನನ್ನು ಬೇರ್ಪಡಿಸಲು ಸಾಧ್ಯವಿಲ್ಲ: ಆರೀಫ್ ಮೊಹಮ್ಮದ್ ಖಾನ್

ನವದೆಹಲಿ: ಶ್ರೀರಾಮ ಭಾರತದ ಸಂಪ್ರದಾಯ, ಸಂಸ್ಕೃತಿ ಮತ್ತು ಇತಿಹಾಸದ ಅವಿಭಾಜ್ಯ ಭಾಗವಾಗಿದ್ದಾನೆ. ಭಾರತದ ಮಣ್ಣು ಮತ್ತು ಆತ್ಮದಿಂದ ಆತನನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಕೇಂದ್ರ ಸಚಿವ ಮತ್ತು ಈಗಿನ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ದೆಹಲಿಯ ಕಾನ್‌ಸ್ಟಿಟ್ಯೂಶನ್ ಕ್ಲಬ್‌ನಲ್ಲಿ ನಡೆದ “ಇಮಾಮ್-ಇ-ಹಿಂದ್-ರಾಮ್” ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಪ್ರತಿ ಮೂಲೆ ಮೂಲೆಯಲ್ಲೂ ಶ್ರೀರಾಮನ ಅಸ್ತಿತ್ವ ಇದೆ. ಪ್ರತಿಯೊಬ್ಬರಿಗೂ ಸಂಬಂಧಿಸಿದ ವ್ಯಕ್ತಿ ಇದ್ದರೆ ಅದು ಶ್ರೀರಾಮ ಎಂದಿದ್ದಾರೆ.

ಭಾರತದ ಪ್ರತಿ ವ್ಯಕ್ತಿಯಲ್ಲೂ ಶ್ರೀರಾಮ ಇದ್ದಾನೆ ಎಂಬುದನ್ನು ಪ್ರತಿಪಾದಿಸಿದ ಅವರು, ಅವತಾರ ಪುರುಷ, ಮರ್ಯಾದಾದ ಪುರುಷೋತ್ತಮ, ಅಯೋಧ್ಯಾ ರಾಜ ಶ್ರೀರಾಮ ಭಾರತದ ಒಳಗೆ ಮತ್ತು ಹೊರಗೆ ಕೋಟ್ಯಾಂತರ ಜನರ ಶ್ರದ್ಧಾಭಕ್ತಿಯ ಕೇಂದ್ರ ಎಂದಿದ್ದಾರೆ.

“ಇಮಾಮ್-ಇ-ಹಿಂದ್ ರಾಮ್-ಸಬ್ಕೇ ರಾಮ್ ” ಎಂಬ ಸಮಾರಂಭದಲ್ಲಿ ಡಾ.ಅಬ್ದುಲ್ ಅಲೀಮ್ ಬರೆದ “ಇಮಾಮ್-ಇ-ಹಿಂದ್-ರಾಮ್” ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಆರೀಫ್ ಅವರು ಇದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top